Tel: 7676775624 | Mail: info@yellowandred.in

Language: EN KAN

    Follow us :


ತಮ್ಮ ಜೀವನದ ದುಡಿಮೆಯನ್ನು ಪತ್ರಿಕೆಗಳನ್ನು ಕೊಳ್ಳಲು ಉಪಯೋಗಿಸಿದ್ದ ಕಾಮಗೆರೆ ಲ. ಕೃಷ್ಣೇಗೌಡ

Posted date: 02 Jul, 2020

Powered by:     Yellow and Red

ತಮ್ಮ ಜೀವನದ ದುಡಿಮೆಯನ್ನು ಪತ್ರಿಕೆಗಳನ್ನು ಕೊಳ್ಳಲು ಉಪಯೋಗಿಸಿದ್ದ ಕಾಮಗೆರೆ ಲ. ಕೃಷ್ಣೇಗೌಡ

ರಾಜ್ಯದ ವಿವಿಧ 3714ಕ್ಕೂ ಹೆಚ್ಚು ಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಸಂಗ್ರಹಿಸಿದ್ದ ರಾಮನಗರದ ದೇವರಸನೆಗೌಡನದೊಡ್ಡಿಯ ಕಾಮಗೆರೆ ಲ. ಕೃಷ್ಣೇಗೌಡ. (ಸಂಗ್ರಹ ಚಿತ್ರ)

ರಾಮನಗರ : ಬೆಳಿಗ್ಗೆ ಬಂದ ಪತ್ರಿಕೆ ಮಧ್ಯಾಹ್ನವಾಗುವಷ್ಟರಲ್ಲಿ ಹಳತಾಗಿ ಹೋಗಿರುತ್ತದೆ. ಈಗ ಬೆಳಿಗ್ಗೆ ಸಂಜೆ ಎಲ್ಲಾ ಸಮಯದಲ್ಲಿ ಪತ್ರಿಕೆಗಳು ಬರುವುದರಲ್ಲಿ ಜನ ನೆನಪಿನಲ್ಲಿಡುವುದಿಲ್ಲ.

ಆದರೆ ಇದಕ್ಕೆಲ್ಲಾ ವಿರುದ್ಧವಾಗಿ ಎಂಬಂತೆ ಇಲ್ಲೊಬ್ಬರಿದ್ದರು. ಅವರ ಕಣ್ಣಿಗೆ ಯಾವುದೇ ಪತ್ರಿಕೆ, ನಿಯತಕಾಲಿಕೆ ಕಾಣಲಿ ಅದನ್ನು ಸಂಗ್ರಹಿಸಿ ಇಡುತ್ತಿದ್ದರು. ಅವುಗಳಿಗೊಂದು ದಾಖಲೆಯನ್ನು ಇಟ್ಟಿದ್ದರು. ಇವರ ಸಂಗ್ರಹದಲ್ಲಿ 3714ಕ್ಕೂ ಹೆಚ್ಚು ಕನ್ನಡದ ವಿವಿಧ ಪತ್ರಿಕೆ ಹಾಗೂ ನಿಯತಕಾಲಿಕಗಳ ಸಂಗ್ರಹವಿತ್ತು.

ಇವರು ರಾಮನಗರದ ದೇವರಸನೆಗೌಡನದೊಡ್ಡಿಯಲ್ಲಿರುವ ಕಾಮಗೆರೆ ಲ. ಕೃಷ್ಣೇಗೌಡ. ಇವರ ಹವ್ಯಾಸವೇ ಪತ್ರಿಕೆಗಳ ಸಂಗ್ರಹ. ಸಂಗ್ರಹಿಸಿದ ಪತ್ರಿಕೆಗಳ ವರ್ಗೀಕರಣ ಮಾಡಿ ಅದು ಯಾವ ಮಾಹಿತಿಯನ್ನು ನೀಡುತ್ತದೆ ಎಂದು ವಿವರವಾಗಿ ಬರೆದಿಟ್ಟಿದ್ದರು.

35 ವರ್ಷಗಳಿಂದ ಕೃಷ್ಣೇಗೌಡ ಅವರು ಪತ್ರಿಕೆ ಸಂಗ್ರಹಿಸುವ ಕಾಯಕದಲ್ಲಿ ನಿರತರಾಗಿದ್ದರು. ಇವರ ತಂದೆ 'ಪ್ರಜಾವಾಣಿ' ಪತ್ರಿಕೆಯನ್ನು ಪಕ್ಕದ ಮನೆ ಹಾಗೂ ಅಂಗಡಿಯಿಂದ ತಂದು ಓದುತ್ತಿದ್ದರಂತೆ. ಆಗ ಕೃಷ್ಣೇಗೌಡರಿಗೂ ಓದಲು ನೀಡುತ್ತಿದ್ದರು. ಆಗಿನಿಂದಲೇ ಪತ್ರಿಕೆ ಸಂಗ್ರಹಿಸುವ ಹವ್ಯಾಸವನ್ನು ಕೃಷ್ಣೇಗೌಡರು ಬೆಳೆಸಿಕೊಂಡರು.  

ಕಾಮಗೆರೆ ಲ. ಕೃಷ್ಣೇಗೌಡರು ಸಂಗ್ರಹಿಸಿದ ಪತ್ರಿಕೆಗಳನ್ನು ವರ್ಗೀಕರಣ ಮಾಡಿ ಬರೆದಿಟ್ಟಿರುವುದು.


ಕೃಷ್ಣೇಗೌಡರು ಯಾವುದೇ ಊರಿಗೆ ಪ್ರಯಾಣ ಮಾಡಲಿ ಅಲ್ಲಿನ ಪ್ರಮುಖ ಸ್ಥಳ, ಸೇತುವೆ, ಗ್ರಾಮ, ದೇವಸ್ಥಾನ ಮುಂತಾದವುಗಳ ಮಾಹಿತಿಯನ್ನು ಸಹ ಬರೆದಿಟ್ಟಿದ್ದರು. ಅಲ್ಲಿನ ಸ್ಥಳೀಯ ಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಕೊಂಡು ತಂದು ತಮ್ಮ ಸಂಗ್ರಹದಲ್ಲಿ ಸೇರಿಸಿದ್ದರು.

ಕೃಷ್ಣೇಗೌಡರು ಹುಟ್ಟಿದ್ದು ಚಾಮರಾಜನಗರ ಜಿಲ್ಲೆಯ ಕಾಮಗೆರೆಯಲ್ಲಿ. ಓದಿದ್ದು 7ನೇ ತರಗತಿ. ಅಲ್ಲಿನ ಗುಂಡಲಾ ಜಲಾಶಯದಲ್ಲಿ ಸಣ್ಣ ನೌಕರಿಯಲ್ಲಿದ್ದ ಗೌಡರಿಗೆ ಆತ್ಮೀಯರೊಬ್ಬರು ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದಲ್ಲಿ ನೌಕರಿ ಕೊಡಿಸಿದರು. ಆ ನಂತರ ಪ್ರಾರಂಭವಾದ ಇವರ ಪತ್ರಿಕೆ ಸಂಗ್ರಹ ಕಾರ್ಯ ಮುಂದುವರಿದೇ ಇತ್ತು. ಆದರೆ ಇವರ ಆರೋಗ್ಯ ಕಟ್ಟಿದ್ದರಿಂದ ಸಂಗ್ರಹ ಕಾರ್ಯ ನಿಂತು ಹೋಗಿತ್ತು.

ಇವರು ಪತ್ರಿಕೆಗಳನ್ನು ಸಂಗ್ರಹಿಸುವುದರ ಜತೆಗೆ ರಂಗಭೂಮಿ ಕಲಾವಿದರು ಆಗಿದ್ದರು. 'ಕನಸು' ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದರು. ಕವಿಗೋಷ್ಠಿ ಸೇರಿದಂತೆ ಸಾಹಿತ್ಯಕ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಹಲವು ಜಲಾಶಯಗಳ ಮಾಹಿತಿಯನ್ನು ಇವರು ಸಂಗ್ರಹಿಸಿದ್ದರು. 59 ಪ್ರಮುಖ ಜಲಾಶಯಗಳ ಮಾಹಿತಿಯನ್ನು ಸಂಗ್ರಹಿಸಿ, ಅವುಗಳಲ್ಲಿ ಬೇಸಿಗೆಯಲ್ಲಿ ನೀರಿನ ಮಟ್ಟ ಉದ್ದ, ಅಗಲ, ಮಳೆಗಾಲದಲ್ಲಿ ನೀರಿನ ಮಟ್ಟ, ಒಳ ಹರಿವು, ಹೊರ ಹರಿವು ಎಲ್ಲಾ ಸೇರಿದೆ.

ಇದಿಷ್ಟೇ ಅಲ್ಲ : ಪತ್ರಿಕೆಗಳನ್ನು ಸಂಗ್ರಹಿಸಿ ಪ್ರಮುಖ ಸುದ್ದಿಗಳಾಗಿದ್ದರೆ ಅಥವಾ ಲೇಖನಗಳಾಗಿದ್ದರೆ ಅದನ್ನು ಬರೆದವರ ಹೆಸರು ಮುಂತಾದವನ್ನು ಬರೆದಿಟ್ಟಿದ್ದರು. 1979ರಿಂದ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಪ್ರಮುಖ ಸುದ್ದಿ ಬರೆದವರ ಹೆಸರು ಮಾಹಿತಿ ಸಹ ಇವರಲ್ಲಿ ಲಭ್ಯವಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಇವರು ಸಂಗ್ರಹಿಸಿರುವ ಪತ್ರಿಕೆಗಳ ಪ್ರದರ್ಶನವನ್ನು ಏರ್ಪಡಿಸಿದ್ದರು.

'ನಮ್ಮ ಯಜಮಾನರು ಮನೆಗೆ, ಸ್ವಂತಕ್ಕಾಗಿ ಏನನ್ನೂ ಮಾಡಲಿಲ್ಲ. ಬರುವ ಕಡಿಮೆ ಸಂಬಳವನ್ನೆಲ್ಲಾ ಪತ್ರಿಕೆಗಳನ್ನು ತರಲು ಬಳಸಿಕೊಂಡರು. ಸಾವಿರಾರು ಪತ್ರಿಕೆಗಳನ್ನು ಸಂಗ್ರಹಿಸಿದ್ದರು. ಆದರೆ ಅವರ ಆರೋಗ್ಯ ಹದಗೆಟ್ಟು ಮಾತು ನಿಂತು ಹೋಗಿತ್ತು, ಪ್ರಜ್ಞೆಯೂ ಇರಲಿಲ್ಲ. ಯಾರನ್ನು ಗುರುತಿಸುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಅವರು ಸಂಗ್ರಹಿಸಿದ ಪತ್ರಿಕೆಗಳನ್ನು ಪಾಂಡವಪುರದ ಅಂಕೇಗೌಡರ ಸಂಗ್ರಹಾಲಯಕ್ಕೆ ಕೊಟ್ಟು ಬಿಟ್ಟೆವು' ಎಂದು ಕೃಷ್ಣೇಗೌಡರ ಪತ್ನಿ ಪ್ರಮೀಳಾ ತಿಳಿಸಿದರು.

'ಇವರು ವಡೆ ಬೋಂಡ ಕಟ್ಟಿದ್ದ ಪತ್ರಿಕೆಗಳನ್ನು ಬಿಡುತ್ತಿರಲಿಲ್ಲ. ಅವುಗಳನ್ನು ತಂದು ಸಂಗ್ರಹಿಸಿ ರಾತ್ರಿಯೆಲ್ಲಾ ಕುಳಿತು ಅವುಗಳ ಬಗ್ಗೆ ಬರೆಯುತ್ತಿದ್ದರು. ಹಲವು ಸನ್ಮಾನಗಳನ್ನು ಇವರಿಗೆ ಮಾಡಲಾಗಿತ್ತು. ಸನ್ಮಾನದ ವಸ್ತುಗಳನ್ನು ಬಿಸಾಕಿದೆವು, ಇರುವುದು ಬಾಡಿಗೆ ಮನೆಯಲ್ಲಿ ಅವುಗಳನ್ನೆಲ್ಲಾ, ಸಾವಿರಾರು ಪತ್ರಿಕೆಗಳನ್ನು ಎಲ್ಲಿ ಇಟ್ಟುಕೊಳ್ಳುವುದು' ಎಂದು ಪ್ರಶ್ನಿಸಿದರು.

'ಇವರು ಚೆನ್ನಾಗಿದ್ದಾಗ ಎಲ್ಲರೂ ಬರುತ್ತಿದ್ದರು. ಆರೋಗ್ಯ ಹದಗೆಟ್ಟ ಮೇಲೆ ಇವರನ್ನು ನೋಡಲು ಯಾರೂ ಬರುತ್ತಿಲ್ಲ. ಇವರ ಚಿಕಿತ್ಸೆಯ ವೆಚ್ಚವನ್ನು ಭರಿಸುವುದೇ ನಮಗೆ ಕಷ್ಟವಾಗಿತ್ತು’ ಎಂದು ಕಣ್ಣೀರು ಹಾಕಿದರು.

ಜನರಿಗಿಂತ ಪತ್ರಿಕೆಗಳನ್ನು ಇಷ್ಟಪಡುತ್ತಿದ್ದರು : 'ನಮ್ಮ ತಂದೆ ಜನರಿಗಿಂತ ಹೆಚ್ಚಾಗಿ ಪತ್ರಿಕೆಗಳನ್ನು ಇಷ್ಟಪಡುತ್ತಿದ್ದರು. ತಮ್ಮ ದುಡಿಮೆಯನ್ನೆಲ್ಲಾ ಪತ್ರಿಕೆಗಳಿಗೆ ಸುರಿದು ರಾಜ್ಯದಲ್ಲಿರುವ ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿದ್ದರು. ಪತ್ರಿಕೆಗಳ ಪ್ರದರ್ಶನ ಏರ್ಪಡಿಸಿದ್ದಾಗಲೆಲ್ಲಾ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಆಗ ಇವರನ್ನು ಎಲ್ಲರೂ ಹೊಗಳುತ್ತಿದ್ದರು. ಆದರೆ ನಮ್ಮ ತಂದೆಯ ಕಷ್ಟದ ಸಮಯದಲ್ಲಿ ಚೆನ್ನಾಗಿದ್ದೀರಾ ಎಂದು ಯಾರೂ ವಿಚಾರಿಸಲಿಲ್ಲ’ ಎಂದು ಕೃಷ್ಣೇಗೌಡರ ಪುತ್ರ ಸುದರ್ಶನ್ ಬೇಸರ ವ್ಯಕ್ತಪಡಿಸಿದರು.

2018 ರಲ್ಲಿ ನಿಧನ : ಕಾಮಗೆರೆ ಲ ಕೃಷ್ಣೇಗೌಡ ಅವರು ಮೂರು ಸಾವಿರಕ್ಕೂ ಹೆಚ್ಚು ಪತ್ರಿಕೆಗಳನ್ನು ಸಂಗ್ರಹಿಸಿದ್ದರು. ಪತ್ರಿಕೆಗಳನ್ನು ಸಂಗ್ರಹಿಸುವುದು ಉತ್ತಮವಾದ ಹವ್ಯಾಸವಾಗಿದೆ. ಕಳೆದ 35 ವರ್ಷಗಳಿಂದ ಪತ್ರಿಕೆಗಳ ಸಂಗ್ರಹಕ್ಕಾಗಿಯೇ ತಮ್ಮ ಜೀವನದ ದುಡಿಮೆಯನ್ನು ಉಪಯೋಗಿಸಿದ್ದ ಕೃಷ್ಣೇಗೌಡ ಅವರು 2018ರ ಡಿಸೆಂಬರ್ 31ರಂದು ನಿಧನರಾದರು.

ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಮಾಧ್ಯಮ ಕ್ಷೇತ್ರವೂ ತನ್ನದೇ ಆದ ಗುರುತರವಾದ ಕೊಡುಗೆಯನ್ನು ನೀಡಿದೆ. ಕನ್ನಡ ಸಾಹಿತ್ಯ, ಭಾಷೆ, ಸಂಸ್ಕೃತಿಯ ದೃಷ್ಟಿಯಿಂದ ಮಾಧ್ಯಮ ಕ್ಷೇತ್ರವು ಪ್ರಮುಖವಾದ ಕೆಲಸವನ್ನು ಮಾಡುತ್ತಿದೆ. ಕನ್ನಡ ಭಾಷೆಗೆ ಹೊಸ ಶಬ್ದಗಳು ಪ್ರತಿದಿನ ಮಾಧ್ಯಮದಿಂದ ಸೇರ್ಪಡೆಯಾಗುತ್ತಿವೆ.

ಮಾಧ್ಯಮ ಕ್ಷೇತ್ರದಲ್ಲಿ ಮುದ್ರಣ ಮಾಧ್ಯಮವು ಪ್ರಾಮುಖ್ಯತೆಯನ್ನು ಪಡೆದಿದೆ. ಇಂದಿನ ದೃಶ್ಯ ಮಾಧ್ಯಮಗಳ ಆರ್ಭಟದಲ್ಲೂ ಮುದ್ರಣ ಮಾಧ್ಯಮ ತನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಂಡು ಬರುತ್ತಿದೆ. ವಸ್ತು ನಿಷ್ಠ ವರದಿಗಳನ್ನು ನೀಡುತ್ತಿರುವ ಮುದ್ರಣ ಮಾಧ್ಯಮವು ಇಂದಿಗೂ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಮಹತ್ತರವಾದ ಕೊಡುಗೆ ನೀಡುತ್ತಿದೆ.


-ಎಸ್. ರುದ್ರೇಶ್ವರ

ಸಾಹಿತ್ಯ ಮತ್ತು ಸಂಶೋಧನಾ ವಿದ್ಯಾರ್ಥಿ.



ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑