Tel: 7676775624 | Mail: info@yellowandred.in

Language: EN KAN

    Follow us :


*ಹಾರುತಿಹುದು, ತೂರುತಿಹುದು, ನಗರಸಭೆಯ ಕಸವೂ, ವಿಲೇವಾರಿ ಆಗದೆ ಮನೆಯ ಮುಂದೆಮುಂದೆ.*

Posted date: 16 Oct, 2020

Powered by:     Yellow and Red



ಚನ್ನಪಟ್ಟಣ:ಅ/16/20/ಶುಕ್ರವಾರ.

ಬೊಂಬೆನಗರಿ ಕಸದನಗರಿಯಾಗಿ ಮಾರ್ಪಟ್ಟು ಹಲವು ತಿಂಗಳುಗಳೇ ಕಳೆದುಹೋಗಿವೆ. ನೈಸರ್ಗಿಕ ಬಣ್ಣದ ಗೊಂಬೆಯ ತಯಾರಿಕೆ ಮತ್ತು ಅಂದಚಂದಕ್ಕೆ ವಿಶ್ವದಾದ್ಯಂತ ಹೆಸರುವಾಸಿಯಾದ ಚನ್ನಪಟ್ಟಣ ಇಂದು ಕಸದಕೊಂಪೆಯಾಗಿ ಅಷ್ಟೇ ಕೆಟ್ಟ ಹೆಸರು ಪಡೆಯಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೇರ ಕಾರಣವಾಗಿದ್ದರೂ ಸಹ ಅದರರ್ಧ ಪಾಲು ಸಾರ್ವಜನಿಕರದ್ದೂ ಆಗಿದೆ.

ನಗರದ ಪ್ರತಿ ತಿರುವಿನಲ್ಲೂ, ಪಾದಚಾರಿಗಳು ಸಂಘ ದಿದ ರಸ್ತೆ ಬದಿಯಲ್ಲೂ, ನಗರದಾದ್ಯಂತ ಇರುವ ಖಾಲಿ ನಿವೇಶನಗಳಲ್ಲೂ, ತೆರೆದ ಮತ್ತು ಮುಚ್ಚಿದ ಚರಂಡಿಗಳಲ್ಲೂ, ಕನ್ಸರ್ವೆನ್ಸಿ ಗಲ್ಲಿಗಳಲ್ಲೂ ಅಷ್ಟೇ ಏಕೆ ಎರಡ್ಮೂರು ದಿನ ಬಾಗಿಲು ಹಾಕಿದ ಮನೆಗಳ ಮುಂದೆಯೂ ಸಹ ಕಸದ ರಾಶಿ ಬಿದ್ದಿದ್ದೂ ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರು ಓಡಾಡದ ಸ್ಥಿತಿಗೆ ತಲುಪಲು ಈ ಮೇಲಿನ ಎಲ್ಲರೂ ಕಾರಣರಾಗಿದ್ದಾರೆ.

ನಗರಸಭೆಯ ಅಧಿಕಾರಿಗಳಾದಿಯಾಗಿ ಎಲ್ಲಾ ಸಿಬ್ಬಂದಿಗಳು, ಮತ್ತು ನಮಗೂ ಇದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ವರ್ತಿಸುವ ಜನಪ್ರತಿನಿಧಿಗಳು ಸಹ ನಮ್ಮನ್ನು ಆಳುವವರೇ ಇರುವಾಗ ಸಾಮಾನ್ಯ ಜನರು ಕೇಳುವುದು ಯಾರನ್ನೂ ಎನ್ನುವಂತಾಗಿದೆ. ಹಾಗಾಗಿ ನಗರದಲ್ಲಿ ಖಾಲಿ ಇರುವ ಮತ್ತು ರಸ್ತೆ ಬದಿಯ ಜಾಗಗಳೆಲ್ಲವೂ ಕಸಮಯವಾಗಿ ಕೊರೊನಾ ವನ್ನು ಮೀರಿಸುವ ರೋಗಗಳು ಜನರನ್ನು ಆಕ್ರಮಿಸುವ ಸಮಯ ದೂರದಲ್ಲಿಲ್ಲ ಎಂಬುದನ್ನು ಸಾರುತ್ತಿವೆ.

ಕಸವನ್ನೇನೋ‌ ದಿನನಿತ್ಯವೂ ಸಂಗ್ರಹಿಸಲೂ ನಾವು ಬದ್ದ. ಆದರೆ ಅದನ್ನು ಎಲ್ಲಿ ಸುರಿಯುವುದು‌ ಎಂಬ ಜಾಣ್ಮೆಯ ಪ್ರಶ್ನೆ ಎಸೆಯುವ ನಗರಸಭೆಯವರೂ ಒಂದೆಡೆಯಾದರೆ, ನಗರಸಭೆಯವರು ಕಸ ಸಂಗ್ರಹಿಸಲು ಬಾರದಿರಂದಲೇ‌ ನಾವು ಬೀದಿಗೆ ತಂದು ಸುರಿಯುತ್ತಿದ್ದೇವೆ ಎನ್ನುವ ನಯನಾಜೂಕಿನ ಉತ್ತರ ಸಾರ್ವಜನಿಕರದ್ದು. ಇವೆರಡಕ್ಕೂ ಕಲಶವಿಟ್ಟಂತೆ ಕೇವಲ ರಾಜಕೀಯ ದೊಂಬರಾಟಕ್ಕೆ ಸೀಮಿತವಾದವರು ಶಾಸಕರೀರ್ವರು.

ಕಸದ ರಾಶಿಯಿಂದ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗ ಹರಡುತ್ತದೆ ಎಂಬ ಭಯ ಒಂದೆಡೆಯಾದರೆ, ಕಸದಲ್ಲಿ ತುಂಬಿರುವ ಪ್ಲಾಸ್ಟಿಕ್ ಕವರುಗಳು ಪ್ರತಿ ಮನೆ ಮತ್ತು ಅಂಗಡಿಗಳ ಮುಂದೆ ಗಾಳಿ‌ ಬಂದಾಗ ತೂರಿಕೋ ಎಂಬಂತೆ ಹಾರಾಡುತ್ತಿವೆ. ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ನೇರವಾಗಿ ಮುಖಕ್ಕೆ ರಾಚುತ್ತಿರುವುದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ.

ನಗರದಾದ್ಯಂತ ಮೂಲೆಮೂಲೆಗಳಲ್ಲೂ ಕಸದ ರಾಶಿ ಹೆಚ್ಚಾಗುತ್ತಿದ್ದಂತೆ ನಾಯಿಗಳ ಸಂಖ್ಯೆಯು ಅತ್ಯಧಿಕವಾಗಿವೆ. ಇವುಗಳ ಜೊತೆಗೆ ಬೀಡಾಡಿ ಜಾನುವಾರುಗಳು ಹಾಗೂ ಸಾಕು ಹಂದಿಗಳು ಯಥೇಚ್ಛವಾಗಿ ಬಂದು ಕಸದಲ್ಲಿರುವ ಆಹಾರವನ್ನು ಎಕ್ಕುತ್ತಿರುವುದಿಂದ ಇಡೀ ನಗರವೇ ಗಬ್ಬು ವಾಸನೆಯಿಂಸ ಕೂಡಿದೆ. ಇತ್ತೀಚಿಗಂತೂ ಕಸದ ರಾಶಿಗೆ ಬೆಂಕಿ‌ ಹಚ್ಚುತ್ತಿರುವುದರಿಂದ ನಗರದ ತುಂಬೆಲ್ಲಾ ದಟ್ಟವಾದ ಹೊಗೆ ತುಂಬಿ ಹಲವಾರು ರೋಗಗಳ ಜೊತೆಗೆ ವಾತಾವರಣವೂ ಕಲುಷಿತಗೊಳ್ಳುವಂತೆ ಮಾಡುತ್ತಿದ್ದಾರೆ.

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿದ್ದರೆ ಬೊಂಬೆನಗರಿ ಕಸದನಗರಿಯಾಗಿ ದೇಶದಲ್ಲೇ ನಂಬರ್ ಒನ್ ಆಗಲೂ ಹೆಚ್ಚು ಸಮಯ ಬೇಕಾಗಿಲ್ಲಾ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑