Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಶೇ 75. ಚನ್ನಪಟ್ಟಣ ಶೇ 70:99 ಮತದಾನ. ಶಾಂತಿಯುತ ಮತದಾನ. ಫಲಿತಾಂಶಕ್ಕಾಗಿ ಕಾದು ನಿಂತ ಚಾತಕ ಪಕ್ಷ(ಕ್ಷಿ)ಗಳು

Posted date: 28 Apr, 2021

Powered by:     Yellow and Red

ರಾಮನಗರ ಶೇ 75. ಚನ್ನಪಟ್ಟಣ ಶೇ 70:99 ಮತದಾನ. ಶಾಂತಿಯುತ ಮತದಾನ. ಫಲಿತಾಂಶಕ್ಕಾಗಿ ಕಾದು ನಿಂತ ಚಾತಕ ಪಕ್ಷ(ಕ್ಷಿ)ಗಳು

ಜಿಲ್ಲೆಯ ರಾಮನಗರ ಹಾಗೂ ಚನ್ನಪಟ್ಟಣ ನಗರ ಸಭೆಗಳ 62 ವಾರ್ಡ್ಗ ಳಿಗೆ ಇಂದು ಚುನಾವಣೆಯು ನಡೆಯಿತು, ಒಟ್ಟು 1.38 ಲಕ್ಷ ಮತದಾರರು ಮತ ಚಲಾವಣೆಯ ಹಕ್ಕು ಹೊಂದಿದ್ದು, 236 ಅಭ್ಯರ್ಥಿಗಳು ಕಣದಲ್ಲಿ ಇದ್ದರು. 132 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, 336 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.


ರಾಮನಗರ ನಗರ ಸಭೆಯ 31 ವಾರ್ಡ್ಗಳಲ್ಲಿ, 124 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಇಲ್ಲಿ ಕಾಂಗ್ರೆಸ್- 31, ಜೆಡಿಎಸ್-31, ಬಿಜೆಪಿ-21 ಬಿಎಸ್ಪಿ-2 ಎಸ್‌ಡಿಪಿಐ-8, ಕೆಆರ್ ಆರ್‌ಎಸ್-7 ಎಎಪಿ ಯಿಂದ 4 ಮತ್ತು 20 ಮಂದಿ ಪಕ್ಷೇತರರು ಕಣದಲ್ಲಿದ್ದರು

.

ಚನ್ನಪಟ್ಟಣದಲ್ಲಿ 31 ಸ್ಥಾನಗಳಿಗೆ, 112 ಜನ ಕಣದಲ್ಲಿದ್ದು, ಕಾಂಗ್ರೆಸ್-29, ಬಿಜೆಪಿ-21, ಜೆಡಿಎಸ್-31, ಎಎಪಿ-4, ಎಸ್‌ಡಿಪಿಐ-5 ಹಾಗೂ 22 ಜನ ಪಕ್ಷೇತರರು ಕಣದಲ್ಲಿಉಳಿದು ಕೊಂಡಿದ್ದರು.


ಜಿಲ್ಲಾ ಚುನಾವಣಾಧಿಕಾರಿಗಳು ಹಾಗು ಜಿಲ್ಲಾಧಿಕಾರಿಗಳಾದ ಡಾ ರಾಕೇಶ್ ಕುಮಾರ್ ಅವರ ಸೂಚನೆಯ ಮೇರೆಗೆ ಪ್ರತಿಯೊಂದು ಮತಗಟ್ಟೆಯಲ್ಲಿಯೂ ಕೋವಿಡ್ ನಿಯಮವನ್ನು ಪಾಲಿಸಲಾಗಿದೆ.

ರಾಮನಗರ-ಚನ್ನಪಟ್ಟಣ ನಗರಸಭೆಯ ಎಲ್ಲಾ ವಾರ್ಡ್ಗಳಲ್ಲಿಯೂ ಇಂದು ಏಳು ಗಂಟೆ ಯಿಂದಲೇ ಮತದಾನ ಆರಂಭವಾಗಿದ್ದು, ಕರೊನಾ ನಡುವೆಯೂ ಉತ್ಸಾಹದಿಂದ ಮತದಾನ ಮಾಡಲು ನಾಗರಿಕರು ಆಗಮಿಸುತ್ತಿದ್ದು, ಚುನಾವಣಾ ಸಿಬ್ಬಂದಿ ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್ ಮಾಡಿದರು. ಮತಗಟ್ಟೆಗೆ ಬಂದ ಮತದಾರರು ಗುರುತು ಮಾಡಿರುವ ಬಾಕ್ಸ್ನೊಳಗೆ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನ ಮಾಡಲು ವ್ಯವಸ್ಥೆ ಮಾಡಿಸಿದರು.


ಚುನಾವಣೆ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕರೊನಾ ಸೋಂಕಿತರಿಗೂ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಮತದಾನ ಮುಕ್ತಾಯಕ್ಕೆ ಒಂದು ಗಂಟೆ ಮುಂಚೆ ಮತದಾನ ಮಾಡಲು ಅವಕಾಶ ಮಾಡಲಾಗಿದ್ದು, ಪಿಪಿಇ ಕಿಟ್ ಧರಿಸಿ ಮತದಾನ ಮಾಡಲು ಅವಕಾಶ ಮಾಡಲಾಗಿತ್ತಾದರೂ ಬಹುತೇಕ ಯಾವುದೇ ಸೋಂಕಿತರು ಮತ ಚಲಾಯಿಸಿದ್ದು ಕಂಡು ಬರಲಿಲ್ಲ.


*ಜಿಲ್ಲಾಧಿಕಾರಿ ಭೇಟಿ*

ಚನ್ನಪಟ್ಟಣದಲ್ಲಿ ನಡೆಯುತ್ತಿರುವ ನಗರಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ.ರಾಕೇಶ್ ಕುಮಾರ್ ಕೆ ಅವರು  ಇಲ್ಲಿನ ೩೦,೩೧,೦೭ ಹಾಗೂ ಇನ್ನಿತರೆ ವಾರ್ಡ್ಗಳಿಗೆ ಭೇಟಿ ನೀಡಿ ಮಸ್ಟರಿಂಗ್ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಾವುಗಳೆಲ್ಲರೂ ಮಾಸ್ಕ್ ಧರಿಸಿಯೇ ಕೆಲಸ ನಿರ್ವಹಿಸಬೇಕು, ಬರುವ ಮತದಾರರಿಗೂ ಸಹ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಂಡು ಬರುವಂತೆ ತಿಳಿಹೇಳಬೇಕು ಎಂದು ಸೂಚಿಸಿದರು.


*ಭಣಗುಟ್ಟಿದ 29 ಮತ್ತು 26 ನೇ ವಾರ್ಡ್*

ತಮಿಳರು ಮತ್ತು ಮುಸ್ಲಿಂ ಮತದಾರರು ಹೆಚ್ಚಿರುವ 29 ನೇ ವಾರ್ಡ್ ನಲ್ಲಿ ಆನಂದಪುರ ಶಾಲೆ ಹಾಗೂ ಕಾವೇರಿ ನೀರು ಸರಬರಾಜು ನಿಗಮ ಕಛೇರಿಯಲ್ಲಿ 2 ಮತಗಟ್ಟೆಗಳಿದ್ದು, ಆನಂದಪುರ ಶಾಲೆಯಲ್ಲಿ ವಾರ್ಡ್ ವಿಂಗಡಣೆಯ ಗೊಂದಲದಿಂದ ಮತದಾರರಿಲ್ಲದೆ ಭಣಗುಡುತಿತ್ತು.

ಮಾಜಿ ನಗರಸಭಾ ಸದಸ್ಯ ವಿಲ್ಸನ್ ಮಾತನಾಡಿ, ಈ ಹಿಂದೆ ವಾರ್ಡ್ ವಿಂಗಡಣೆ ಮಾಡುವಾಗ ಮತದಾರರಿಗೆ ಸಂಪೂರ್ಣ ಮಾಹಿತಿ ಕೊಟ್ಟಿಲ್ಲ, ಹಾಗಾಗಿ ಎಷ್ಟೋ ಮಂದಿ ಮತದಾನದಿಂದ ವಂಚಿತರಾಗಿದ್ದಾರೆ. ಹಲವು ಮಂದಿ ಹೊರಗಡೆ ನೆಲೆಸಿದ್ದು, ಕೋವಿಡ್ ಕಾರಣದಿಂದ ಮತಚಲಾಯಿಸಲು ಬರಲಾಗುತ್ತಿಲ್ಲ ಇದಕ್ಕೆಲ್ಲಾ ವಾರ್ಡ್ ವಿಂಗಡಣೆ ಮಾಡಿದ ಅಧಿಕಾರಿಗಳೇ ಕಾರಣ ಎಂದು ದೂರಿದರು. ಆದರೆ ಸಂಜೆ ಐದು ಗಂಟೆಯ ವೇಳೆಗೆ ಮತದಾರರು ಸಾಲುಗಟ್ಟಿ ಮತ ಚಲಾಯಿಸಿದರು.


ಕಲಾನಗರ ಮತ್ತು ತಟ್ಟೆಕೆರೆ ಪ್ರದೇಶದ ವಾರ್ಡ್ ನಂ.26 ರಲ್ಲಿ ಎರಡು ಮತ ಗಟ್ಟೆಗಳಿದ್ದು, ಒಂದು ಮತ ಗಟ್ಟೆಯಲ್ಲಿ ಮತದಾನ ಮಾಡುವವರ ಸಂಖ್ಯೆ ಕ್ಷೀಣವಾಗಿತ್ತು. ಮತ್ತೊಂದರಲ್ಲಿ ಸಾಧಾರಣವಾಗಿ ಮತದಾನ ನಡೆಯಿತು.


*ಗುಂಪು ಗೂಡಿ ಮತದಾನ*

ನಗರದ 23 ಹಾಗೂ 24 ನೇ ವಾರ್ಡ್ನ ಮತಗಟ್ಟೆಗಳಲ್ಲಿ ಮತದಾರರು ಅತಿ ಹೆಚ್ಚು ಗುಂಪು ಗೂಡಿ ಮತಚಲಾಯಿಸಿದರು. ಪೊಲೀಸರ ಮಾತಿಗೂ ಬೆಲೆ ನೀಡದೆ, ಗುಂಪು ಗುಂಪಾಗಿ ಬೆಂಬಲಿಗರು ನಿಂತಿದ್ದರು.

ಮತದಾರರೂ ಸಹ ಕನಿಷ್ಠ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಒತ್ತೊ ತ್ತಾಗಿ ನಿಂತು ಮತ ಚಲಾಯಿಸಿದರು.

ಪೊಲೀಸ್ ಸಿಬ್ಬಂದಿಗಳ ಯಾವ ಮಾತಿಗೂ ಬೆಲೆ ನೀಡದ ಮತದಾರರಿಗೆ ಕಾಂಗ್ರೆಸ್ ಅಭ್ಯರ್ಥಿ ಮಥೀನ್ ಖಾನ್ ರವರು, ಕೊರೊನಾದ ಎರಡನೆಯ ಅಲೆಯು ಅತಿಯಾಗಿ ಕಾಣಿಸಿಕೊಂಡಿರುವುದರಿಂದ ಮತದಾರರು ಅಂತರ ಕಾಯ್ದುಕೊಂಡು ಮತದಾನ ಮಾಡಬೇಕು ಎಂದು ಮನವಿ ಮಾಡಿಕೊಂಡರು.


ಅಲ್ಲಲ್ಲಿ ಕೆಲವರ ಮಾತಿನ ಚಕಮಕಿ ಮತ್ತು ಡಿ ಟಿ ರಾಮು ವೃತ್ತದಲ್ಲಿ ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ಹೊರತುಪಡಿಸಿದರೆ ಸಂಪೂರ್ಣ ಮತದಾನ ಶಾಂತಿಯುತವಾಗಿ ನಡೆಯಿತು.


ಪೆಟ್ಟಾ ಶಾಲೆ, ಕೇಂದ್ರೀಯ ಶಾಲೆ, ಕೋಟೆ, ಮಂಗಳವಾರಪೇಟೆ ಸೇರಿದಂತೆ ಬಹುತೇಕ ಎಲ್ಲಾ ವಾರ್ಡ್ ಗಳಲ್ಲಿಯೂ ಸಹ ಮತ ದಾನವು ನೀರಸವಾಗಿ ನಡೆಯಿತು. ಬಾಡೂಟ, ಬಹುಮಾನ ನೀಡಿ, ತಮ್ಮ ಗೆಲುವಿಗೆ ಹರಸಾಹಸ ಪಟ್ಟಿರುವ ಎಲ್ಲಾ ವಾರ್ಡ್ ನ, ಎಲ್ಲಾ ಪಕ್ಷದ ಅಭ್ಯರ್ಥಿಗಳು ಮುಂಬರುವ ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಕುತೂಹಲದಿಂದ ಕಾಯುತ್ತಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑