ಕೋಟೆಯಲ್ಲಿನ ಓವರ್ ಹೆಡ್ ಟ್ಯಾಂಕ್ ನ ಪೈಪಿನಲ್ಲಿ ಮನುಷ್ಯನ ಕಾಲು ಪತ್ತೆ. ಕೊಲೆಯ ಶಂಕೆ !?
ಚನ್ನಪಟ್ಟಣ:ಅ/09/21. ನಗರದ ಕೋಟೆ ಪ್ರದೇಶದಲ್ಲಿರುವ, ಹೊಸ ನ್ಯಾಯಾಲಯದ ಬಳಿಯ ದೊಡ್ಡ ನೀರಿನ ಟ್ಯಾಂಕ್ ನ ಪೈಪಿನಲ್ಲಿ ಸ್ವಲ್ಪ ಕೊಳೆತ ಸ್ಥಿತಿಯಲ್ಲಿ ಮನುಷ್ಯನ ತೊಡೆ ಸಮೇತ ಕಾಲಿನ ಭಾಗ ದೊರೆತಿದ್ದು, ಹಲವು ಅನುಮಮಾನಗಳು ಹುಟ್ಟಿಕೊಂಡಿವೆ.
ಕಳೆದ ಮೂರ್ನಾಲ್ಕು ದಿನಗಳಿಂದ 8, 9 ಮತ್ತು 10 ನೇ ವಾರ್ಡ್ ಗಳ ನಿವಾಸಿಗಳು ನೀರಿನಲ್ಲಿ ಗಬ್ಬು ವಾಸನೆ ಬರುತ್ತಿದೆ ಎಂದು ದೂರುಗಳನ್ನು ಹೇಳಿದ ನಂತರ ಜಲಮಂಡಳಿಯವರು ಮತ್ತು ನಗರಸಭೆಯವರು ಇಂದು ಮುಂಜಾನೆ 06:30 ಸಮಯದಲ್ಲಿ ಟ್ಯಾಂಕ್ ಬಳಿ ವೀಕ್ಷಿಸಿದ್ದಾರೆ. ಟ್ಯಾಂಕ್ ಕೆಳಗಿನ ಹತ್ತು ಇಂಚಿನ ಪೈಪಿನ ವಾಲ್ವ್ ಬಳಿ ಮುಂಗಾಲು ಕಾಣಿಸಿದ ನಂತರ, ಕಾರ್ಯಾಚರಣೆಗೆ ಇಳಿದಿದ್ದು ಜೆಸಿಬಿ ಮೂಲಕ ಅಗೆದು, ಪೈಪ್ ತುಂಡರಿಸಿದಾಗ ತೊಡೆ ಸಮೇತ ಒಂಟಿ ಕಾಲು ದೊರೆತಿದೆ.
ಇದೇ ವೇಳೆ ಟ್ಯಾಂಕ್ ನ ಮೇಲಿನ ಭಾಗದಲ್ಲಿ ಒಂದು ಚೂಡಿದಾರ್, ಒಳಲಂಗ, ವೇಲ್, ಟಾಪ್ ಮತ್ತು ಒಂದು ಜೊತೆ ಚಪ್ಪಲಿ ದೊರೆತಿದ್ದು ಟ್ಯಾಂಕ್ ನ ಕೆಳಭಾಗದಲ್ಲಿ ಒಂದು ಛತ್ರಿ (ಕೊಡೆ) ದೊರೆತಿದೆ.
ಟ್ಯಾಂಕ್ ಮೇಲಿನ ಭಾಗದಿಂದ ಭೂಮಿಯವರೆಗೆ ಹತ್ತು ಇಂಚಿನ ಪೈಪ್ ಇದ್ದು ಒಂದು ವಾಲ್ವ್ ಇದೆ. ಅದೇ ಪೈಪು ಮೂವತ್ತು ಅಡಿಯಷ್ಟು ದೂರ ಹೋಗಿದ್ದು, ಅಲ್ಲಿಂದ ಮೂರು ಇಂಚಿನ ಪೈಪುಗಳಿವೆ. ಸಿಬ್ಬಂದಿಗಳು ಹತ್ತು ಇಂಚಿನ ಪೈಪ್ ಹೋಗಿರುವ ತನಕವೂ ಅಗೆದು ಸೋಸಿದ್ದಾರೆ. ಓವರ್ ಹೆಡ್ ಟ್ಯಾಂಕ್ ನ್ನು ಪೂರ್ಣ ಪ್ರಮಾಣದಲ್ಲಿ ಸ್ವಚ್ಚ ಮಾಡಿದರೂ ಸಹ ಯಾವುದೇ ಅಂಗ ದೊರೆಯದ ಕಾರಣ ಪೋಲೀಸರು ಮತ್ತು ಸಾರ್ವಜನಿಕರು ಇದು ಆತ್ಮಹತ್ಯೆ ಅಲ್ಲಾ, ಎಲ್ಲೋ ಕೊಲೆ ಮಾಡಿ ಪೋಲೀಸರನ್ನು ಮತ್ತು ವಾರಸುದಾರರನ್ನು ದಿಕ್ಕು ತಪ್ಪಿಸಲು ಒಂದೊಂದು ಅಂಗವನ್ನು ಬೇರೆಬೇರೆಯಾಗಿ ಎಸೆದು ಹೋಗಿರಬಹುದು ಎಂದು ಅನುಮಾನಗೊಂಡಿದ್ದಾರೆ.
ಈ ಸಂದರ್ಭದಲ್ಲಿ ತಹಶಿಲ್ದಾರ್ ನಾಗೇಶ್ ರವರು ಮಾತನಾಡಿ, ನಿವಾಸಿಗಳ ದೂರಿನ ಮೇರೆಗೆ ತಪಾಸಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಒಂದು ಕಾಲು ಮಾತ್ರ ದೊರೆತಿದ್ದು, ಅದನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿದ್ದೇವೆ. ಶವದ ಕಾಲಿನ ಪರೀಕ್ಷೆ ಯ ನಂತರ ಪೂರ್ವಾಪರ ತಿಳಿಯಬೇಕಾಗಿದೆ. ನೀರು ಸರಬರಾಜು ಮಾಡಲು ಗುತ್ತಿಗೆ ಪಡೆದಿರುವವರು, ಇದನ್ನೆಲ್ಲಾ ದಿನನಿತ್ಯವೂ ಪರೀಕ್ಷಿಸಬೇಕು. ಅವರಿಗೂ ಸಹ ನೋಟೀಸ್ ನೀಡುತ್ತವೆ ಎಂದರು.
ನಗರಸಭೆಯ ಪೌರಾಯುಕ್ತ ಶಿವನಂಕಾರಿಗೌಡ ಮಾತನಾಡಿ, ಇದು ಸಂಪೂರ್ಣವಾಗಿ ಜಲಮಂಡಳಿ ವ್ಯಾಪ್ತಿಗೆ ಬರುತ್ತದೆ. ನಮ್ಮ ಇಲಾಖಾ ವತಿಯಿಂದ ಸ್ವಚ್ಚತೆಯನ್ನು ಮಾಡುತ್ತೇವೆ. ಜಲಮಂಡಳಿಯ ಸಿಬ್ಬಂದಿಗಳೊಂದಿಗೆ ಇಂದು ನಮ್ಮ ಇಲಾಖೆಯು ಸೇರಿ ಕಾರ್ಯಾಚರಣೆ ನಡೆಸಿದ್ದೇವೆ. ಒಂದು ಕಾಲು ಹೊರತುಪಡಿಸಿ ಮತ್ತೇನು ಸಿಕ್ಕಿಲ್ಲ. ಶಾಸಕ ಕುಮಾರಸ್ವಾಮಿ ಯವರ ಸೂಚನೆ ಮೇರೆಗೆ ಸಂಬಂಧಿಸಿದ ವಾರ್ಡ್ ಗಳಿಗೆ ಟ್ರ್ಯಾಕ್ಟರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ ಎಂದರು.
ಶಾಸಕ ಕುಮಾರಸ್ವಾಮಿ ಯವರು ಚನ್ನಪಟ್ಟಣ ನಗರದ ಜನತೆಗೆ ಧೈರ್ಯ ತುಂಬುವ ಮಾತುಗಳನ್ನಾಡಿರುವ ವೀಡೀಯೋ ಒಂದನ್ನು ಕಳುಹಿಸಿದ್ದು, ನಿವಾಸಿಗಳಿಗೆ ಧೈರ್ಯ ತುಂಬಿ, ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸತತ ಮೂರು ಗಂಟೆಗಳ ಕಾಲ ಮೊದಲು ಕಾರ್ಯಾಚರಣೆ ನಡೆಸಿದ್ದು, ಪೈಪ್ ಗಳ ಕಾರ್ಯಾಚರಣೆ ತಡರಾತ್ರಿವರೆಗೂ ನಡೆಯಿತು. ಈ ವೇಳೆ ಸಾರ್ವಜನಿಕರು ಕುತೂಹಲದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಅವರನ್ನು ನಿಯಂತ್ರಿಸಲು ಪೋಲೀಸರು ಹರಸಾಹಸ ಪಡಬೇಕಾಯಿತು.
ಈ ಘಟನೆಯಿಂದ ಆತಂಕಗೊಂಡ ನಿವಾಸಿಗಳು ತಂತಮ್ಮ ಮನೆಯ ಸಂಪುಗಳು, ಮೇಲಿನ ಟ್ಯಾಂಕ್ ಗಳನ್ನ ಸ್ವಚ್ಚಗೊಳಿಸುವ ಕಾರ್ಯ ಸರ್ವೇಸಾಮಾನ್ಯವಾಗಿತ್ತು. ಸೇರಿದ್ದ ಜನಸ್ತೋಮ ಮತ್ತು ನಿವಾಸಿಗಳು ಬಹಿರಂಗವಾಗಿ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡುಬಂದಿತು. ಸ್ಥಳೀಯವಾಗಿ ನ್ಯಾಯಾಲಯ ಮತ್ತು ಅಬಕಾರಿ ಕಛೇರಿ ಇದ್ದರೂ ಸಹ ಅಲ್ಲೆಲ್ಲೂ ಸಿಸಿ ಟಿವಿ ಇಲ್ಲದಿರುವುದು ದುಷ್ಕರ್ಮಿಗಳಿಗೆ ವರದಾನವಾಗಿದೆ ಎಂಬುದು ನಾಗರೀಕರ ಆರೋಪವಾಗಿದೆ.
ಕಾರ್ಯಾಚರಣೆ ವೇಳೆ ಜಲಮಂಡಳಿಯ ಇಂಜಿನಿಯರ್ ಗಳು, ಡಿವೈಎಸ್ಪಿ ರಮೇಶ್, ನಗರ ವೃತ್ತ ನಿರೀಕ್ಷಕ ದಿವಾಕರ್, ಪುರ ಠಾಣೆಯ ಉಪ ನಿರೀಕ್ಷಕಿ ಮಮತಾ, ಸಂಚಾರಿ ಠಾಣೆಯ ಉಪ ನಿರೀಕ್ಷಕಿ ಶುಭಾಂಬಿಕಾ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು