Tel: 7676775624 | Mail: info@yellowandred.in

Language: EN KAN

    Follow us :


ಸಿಂ ಲಿಂ ನಾಗರಾಜು ಸತ್ಯಸಂಧರು, ವಾಟಾಳ್ ನಾಗರಾಜು ಅಭಿಮತ

Posted date: 11 Nov, 2023

Powered by:     Yellow and Red

ಸಿಂ ಲಿಂ ನಾಗರಾಜು ಸತ್ಯಸಂಧರು, ವಾಟಾಳ್ ನಾಗರಾಜು ಅಭಿಮತ

ಚನ್ನಪಟ್ಟಣ; ಸಿಂ ಲಿಂ ನಾಗರಾಜು ಸತ್ಯಸಂಧರು, ಯೋಗ್ಯರು, ನಂಬಿಕಸ್ತರು, ವಿವೇಕವುಳ್ಳವರು, ವಿಚಾರವಂತರು, ಸರಳಜೀವಿ ಇಂತಹವರು ನನ್ನ ಸ್ನೇಹಿತರಾಗಿ, ಒಡನಾಡಿಯಾಗಿ, ಕನ್ನಡ ಪರ ಹೋರಾಟಗಾರರಾಗಿ ಕನ್ನಡಮ್ಮನ ಸೇವೆ ಮಾಡಿದವರು. ಇಂತಹ ಹೋರಾಟಗಾರರು ಈಗ ಇಲ್ಲ, ಮುಂದೆಯೂ ಕಷ್ಟ. ಇಂತಹ ಸರಳ, ಸತ್ಯವಂತನ್ನು ನೆನೆಯುವ ಕಾರ್ಯಕ್ರಮಕ್ಕೆ ಬರಲೇಬೇಕು ಎಂಬ ಅಭಿಲಾಷೆಯಿಂದಲೆ ಬಂದು ಭಾಗವಹಿಸಿದ್ದೇನೆ ಎಂದು ಕನ್ನಡ ಪರ ಹಿರಿಯ ಹೋರಾಟಗಾರ, ಮಾಜಿ ಶಾಸಕ ವಾಟಾಳ್ ನಾಗರಾಜು ತಿಳಿಸಿದರು. ಅವರು ಶನಿವಾರ ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ದೇವಮ್ಮ ಚಿಕ್ಕಣ್ಣ ಸಭಾಂಗಣದಲ್ಲಿ  ಸಿಂ ಲಿಂ ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಹಮ್ಮಿಕೊಂಡಿದ್ದ ಪ್ರತಿಭಾ  ಪುರಸ್ಕಾರ ಮತ್ತು ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.


ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ವಿ ವೆಂಕಟಪ್ಪ, ಬಿ ಜೆ ಲಿಂಗೇಗೌಡರ ಸಾಲಿನಲ್ಲಿ ನಿಲ್ಲುವಂತಹ ಸತ್ಯವಂತ ಸಿಂ ಲಿಂ ನಾಗರಾಜು, ಇವರು ಮೈಸೂರಿನಲ್ಲಿ ಆರಂಭಿಸಿದ ಕನ್ನಡ ಪರ ಹೋರಾಟದಲ್ಲಿ ನಾನು ಭಾಗವಹಿಸಿದ್ದೆ. ಅವರ ಮದುವೆಯನ್ನು ಸರಳವಾಗಿ, ಕುವೆಂಪು ಮಂತ್ರಮಾಂಗಲ್ಯದ ಮೂಲಕ ವಿಚಾರವಂತಿಕೆಯ ಮೂಲಕ ನಾನೇ ಮಾಡಿಸಿದೆ. ಇವರ ಹೆಸರು ಶಾಶ್ವತವಾಗಿ ಉಳಿಯಬೇಕಾದರೆ, ಯಾರ ಆಜ್ಞೆಗೂ ಕಾಯದೆ, ನಗರದ ಸಾತನೂರು ರಸ್ತೆಯಲ್ಲಿರುವ ಸರ್ಕಲ್ ನಿಂದ ಸಾತನೂರು ವರೆವಿಗೂ ಸಿಂ ಲಿಂ ನಾಗರಾಜು ಹೆಸರನ್ನಿಡುವ ಮೂಲಕ ಅವರ ಹೆಸರನ್ನು ಶಾಶ್ವತವಾಗಿಡಬೇಕೆಂದು ತಿಳಿಸಿದರು.


ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ ಮಾತನಾಡಿ, ಸಿಂ ಲಿಂ ರವರು ನಮ್ಮೆಲ್ಲರ ನಡುವೆ ಓಡಾಡಿದ ಅಪರೂಪದ ಕನ್ನಡಿಗರು ಮತ್ತು ಕನ್ನಡ ಪರ ಹೋರಾಟಗಾರರು. ಇವರು ಕೇವಲ ರಾಜಕೀಯ ಮಾಡದೆ, ಸರಳ ರಾಜಕೀಯ ಮಾಡುವ ಮೂಲಕ ಹೆಸರುವಾಸಿಯಾದವರು. ವ್ಯವಸಾಯದ ಜೊತೆಗೆ ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಇಂದು ಈ ಕಾರ್ಯಕ್ರಮಕ್ಕೆ ಕನ್ನಡದ ಕಟ್ಟಾಳು ವಾಟಾಳ್ ನಾಗರಾಜು ರವರು ಬಂದಿರುವುದೇ ಸಾಕ್ಷಿಯಾಗಿದೆ. ಇಂತಹ ಸರಳಜೀವಿಯ ಕಾರ್ಯಕ್ರಮ ನಿಲ್ಲದೆ ನಡೆಯಬೇಕು. ಕೇವಲ ಚನ್ನಪಟ್ಟಣ ಅಷ್ಟೇ ಅಲ್ಲದೆ ಕನ್ನಡಿಗರೆಲ್ಲರೂ ಸೇರಿ ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.


ನಗರ ವೃತ್ತ ನಿರೀಕ್ಷಕಿ ಶೋಭಾ ಮಾತನಾಡಿ, ಸಿಂ ಲಿಂ ನಾಗರಾಜು ರವರು ಅತ್ಯಂತ ಭಾವಜೀವಿಯಾಗಿದ್ದರು. ಅವರ ಕುಟುಂಬದ ಸದಸ್ಯರು ಈ ಕಾರ್ಯಕ್ರಮದಲ್ಲಿ ಅತ್ಯಂತ ಭಾವುಕರಾಗಿದ್ಧಾರೆ. ಇಂತಹ ಮಹಾನುಭಾವ, ಸರಳಜೀವಿ ಯ ಜೊತೆಗೆ ನಾನು ಹಲವಾರು ಬಾರಿ ಮಾತನಾಡಿದ್ದೇನೆ. ಅವರ ಅಂತಿಮ ನಮನದ ಕಾರ್ಯಕ್ರಮದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು ಅವರ ಅಂತಿಮ ದರ್ಶನ ಪಡೆಯಲು ಸಹಸ್ರಾರು ಮಂದಿಗೆ ನೆರವಾಗಿದ್ದು ನನ್ನ ಜೀವನದಲ್ಲಿ ಅವೀಸ್ಮರಣೀಯವಾಗಿದೆ ಎಂದರು.


ಸಹಕಾರ ಸಂಘಗಳ ನಿಬಂಧ ಕರಾದ ಲಕ್ಷ್ಮೀಪತಯ್ಯ ನವರು ಮಾತನಾಡಿ, ಸಿಂ ಲಿಂ ನಾಗರಾಜು ರವರ ಸಹಕಾರ ತತ್ವ ಬಹಳ ವಿಶೇಷವಾಗಿತ್ತು. ಅವರು ಕನ್ನಡ ಕಟ್ಟುವಲ್ಲಿ ಬಹಳ ಹೋರಾಟ ಮಾಡಿದ್ದಾರೆ. ಇಂತಹ ಸರಳಜೀವಿ ನಮ್ಮೊಡನೆ ಮತ್ತಷ್ಟು ಕಾಲ ಇದ್ದಿದ್ದರೆ ರಾಮನಗರ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಮತ್ತಷ್ಟು ಬೆಳೆಯಲು ಅವಕಾಶವಾಗುತ್ತಿತ್ತು ಎಂದರು.


ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಹೆಚ್ ಕೆ ವಿವೇಕಾನಂದ ರವರು, ಈ ನಾಡು, ನೆಲ ಕಂಡಂತಹ ಧೀಮಂತ ನಾಯಕ ಸಿಂ ಲಿಂ ನಾಗರಾಜು ರವರು. ಅವರ ಸರಳ ಜೀವನವೇ ನಮ್ಮೆಲ್ಲರನ್ನೂ ಅವರೆಡೆಗೆ ಸೂಜಿಗಲ್ಲಿನಂತೆ ಸೆಳೆಯಿತು. ಇಂತಹ ನಾಯಕರ ಹೆಸರಿನಲ್ಲಿ ಪ್ರತಿಷ್ಠಾನ ಮಾಡಿರುವುದು ತುಂಬಾ ಉತ್ತಮವಾದ ಕೆಲಸವಾಗಿದೆ. ಈ ಪ್ರತಿಷ್ಠಾನವು ಕೇವಲ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗದೆ, ಅವರ ವಿಚಾರಗಳನ್ನು ತಿಳಿಸುವ, ಅವರ ಉದ್ದೇಶಗಳನ್ನು ಈಡೇರಿಸುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಕೆಲಸ ಮಾಡಬೇಕು ಎಂದರು.


ಹಿರಿಯ ಸಹಕಾರಿ ಧುರೀಣರಾದ ಸುಧಾಕರ್ ರವರಿಗೆ ಸಿಂ ಲಿಂ ನಾಗರಾಜು ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕನ್ನಡ ವಿಷಯದಲ್ಲಿ ೧೨೫/೧೨೫ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಿಂ ಲಿಂ ನಾಗರಾಜು ರವರ ಪುತ್ರ ಆದರ್ಶಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಾನಪದ ಕಲಾವಿದ ಬೇವೂರು ರಾಮಯ್ಯ ಮತ್ತು ಸಂಗಡಿಗರು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷ ಶಂಭೂಗೌಡ ಕಾರ್ಯದರ್ಶಿ ರಜನಿ ಆದರ್ಶಕುಮಾರ್ ಮತ್ತು ಪದಾಧಿಕಾರಿಗಳು. ಡಾ ಭಗತ್ ರಾಮ್, ಕೂ ಗಿ ಗಿರಿಯಪ್ಪ, ಬೆಸಗರಹಳ್ಳಿ ಎಲ್ಲೇಗೌಡ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಕನ್ನಡದ ಕಟ್ಟಾಳು, ಸಹಕಾರಿ ಧುರೀಣ ಸಿಂ ಲಿಂ ನಾಗರಾಜು ಸ್ಮರಣ ಕಾರ್ಯಕ್ರಮ
ಕನ್ನಡದ ಕಟ್ಟಾಳು, ಸಹಕಾರಿ ಧುರೀಣ ಸಿಂ ಲಿಂ ನಾಗರಾಜು ಸ್ಮರಣ ಕಾರ್ಯಕ್ರಮ

ಚನ್ನಪಟ್ಟಣ:  ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಿಂ.ಲಿಂ.ನಾಗರಾಜು ಅವರು ವಯಕ್ತಿಕವಾಗಿ ಹಾಗೂ

ಕೌಟುಂಬಿಕವಾಗಿ ತಮಗೆ ಏ

ಬುಧವಾರ ಕೆಆರ್ ಪೇಟೆಯಲ್ಲಿ ನಡೆಯುವ ಕಸಾಪ ದತ್ತಿ ಪ್ರಶಸ್ತಿ ಸ್ವೀಕರಿಸಲಿರುವ ಜಿಲ್ಲೆಯ ಜಾನಪದ ಕಲಾವಿದೆ ಲಕ್ಷ್ಮಿ ಶ್ರೀನಿವಾಸ
ಬುಧವಾರ ಕೆಆರ್ ಪೇಟೆಯಲ್ಲಿ ನಡೆಯುವ ಕಸಾಪ ದತ್ತಿ ಪ್ರಶಸ್ತಿ ಸ್ವೀಕರಿಸಲಿರುವ ಜಿಲ್ಲೆಯ ಜಾನಪದ ಕಲಾವಿದೆ ಲಕ್ಷ್ಮಿ ಶ್ರೀನಿವಾಸ

ರಾಮನಗರ/ಚನ್ನಪಟ್ಟಣ:ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ೨೦೨೦ ೨೦೨೧ ಹಾಗೂ ೨೦೨೨ ನೇ ಸಾಲಿನ "ದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ ಪ್ರಶ

ತಾಲ್ಲೂಕು ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ ರೈತ ಸಂಘದ ವಿಭಾಗೀಯ ಅಧ್ಯಕ್ಷ ಮಲ್ಲಯ್ಯ
ತಾಲ್ಲೂಕು ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ ರೈತ ಸಂಘದ ವಿಭಾಗೀಯ ಅಧ್ಯಕ್ಷ ಮಲ್ಲಯ್ಯ

ಚನ್ನಪಟ್ಟಣ: ತಾಲ್ಲೂಕು ಆಡಳಿತ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ, ಇಡೀ ತಾಲ್ಲೂಕನ್ನು ನಿಯಂತ್ರಿಸಬೇಕಾದ ದಂಡಾಧಿಕಾರಿಗಳು ತೆಪ್ಪಗಿದ್ದಾರೆ. ಇದಕ್ಕೆ ಇತ್ತೀಚ

ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್, ಡಿಪೋ ತಡೆಗೋಡೆಗೆ ಢಿಕ್ಕಿ
ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್, ಡಿಪೋ ತಡೆಗೋಡೆಗೆ ಢಿಕ್ಕಿ

ಚನ್ನಪಟ್ಟಣ: ಇತ್ತೀಚೆಗೆ ತಾಲ್ಲೂಕಿನಾದ್ಯಂತ ಸಾರಿಗೆ ಬಸ್ಸುಗಳ ಅಪಘಾತ ಹೆಚ್ಚಾಗುತ್ತಿದ್ದು, ಅಮಾಯಕರ ಪ್ರಾಣವನ್ನು ಬಲಿ ಪಡೆಯುತ್ತಿವೆ. ರಸ್ತೆಯ ಮೇಲೆ ಸಂಚರಿ

ದೀಪಾವಳಿ ನೆಪದಲ್ಲಿ ಅನಾಥವಾದ ನೆಹರು/ಮಕ್ಕಳ ಜಯಂತಿ
ದೀಪಾವಳಿ ನೆಪದಲ್ಲಿ ಅನಾಥವಾದ ನೆಹರು/ಮಕ್ಕಳ ಜಯಂತಿ

ರಾಮನಗರ: ಇಂದು ನವೆಂಬರ್ ೧೪ ಮಕ್ಕಳ ದಿನಾಚರಣೆ, ಚಾಚಾಜಿ ಅಡ್ಡ ಹೆಸರಿನ ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ರವರ ಹೆಸರಿನಲ್ಲಿ ರ

ಸಾರಿಗೆ ಬಸ್ ಸ್ಟಿಯರಿಂಗ್ ಕಟ್, ಸ್ಕೂಟರ್ ಗೆ ಢಿಕ್ಕಿ ಇಬ್ಬರ ಸಾವು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಪಾರು
ಸಾರಿಗೆ ಬಸ್ ಸ್ಟಿಯರಿಂಗ್ ಕಟ್, ಸ್ಕೂಟರ್ ಗೆ ಢಿಕ್ಕಿ ಇಬ್ಬರ ಸಾವು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಪಾರು

ಚನ್ನಪಟ್ಟಣ: ನಗರಕ್ಕೆ ಹೊಂದಿಕೊಂಡಿರುವ ತಿಟ್ಟಮಾರನಹಳ್ಳಿ ಗ್ರಾಮದ ನಡುವಿನ ರಾಮಮ್ಮ ನ ಕೆರೆ ಏರಿಯ ಮೇಲೆ ಸೋಮವಾರ ಮುಂಜಾನೆ ಸಾರಿಗೆ ಬಸ್ ಮತ್ತು ಸ್ಕೂಟರ್ ನಡ

ತಾಲ್ಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಟಿ ವಿ ಗಿರೀಶ್ ಆಯ್ಜೆ, ಹಲವರಿಂದ ಅಭಿನಂದನೆ
ತಾಲ್ಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಟಿ ವಿ ಗಿರೀಶ್ ಆಯ್ಜೆ, ಹಲವರಿಂದ ಅಭಿನಂದನೆ

ಚನ್ನಪಟ್ಟಣ:ನಗರದ ನ್ಯಾಯಾಲಯದಲ್ಲಿರುವ ವಕೀಲರ ಸಂಘದ ಕಛೇರಿಯಲ್ಲಿ ತಾಲ್ಲೂಕು ವಕೀಲರ ಸಂಘದ ಚುನಾವಣೆಯು ಶನಿವಾರ ಜರುಗಿದ್ದು ಅತ್ಯಧಿಕ ಮತಗಳನ್ನು ಪಡೆಯುವ ಮೂಲ

ಸಿಂ ಲಿಂ ನಾಗರಾಜು ಸತ್ಯಸಂಧರು, ವಾಟಾಳ್ ನಾಗರಾಜು ಅಭಿಮತ
ಸಿಂ ಲಿಂ ನಾಗರಾಜು ಸತ್ಯಸಂಧರು, ವಾಟಾಳ್ ನಾಗರಾಜು ಅಭಿಮತ

ಚನ್ನಪಟ್ಟಣ; ಸಿಂ ಲಿಂ ನಾಗರಾಜು ಸತ್ಯಸಂಧರು, ಯೋಗ್ಯರು, ನಂಬಿಕಸ್ತರು, ವಿವೇಕವುಳ್ಳವರು, ವಿಚಾರವಂತರು, ಸರಳಜೀವಿ ಇಂತಹವರು ನನ್ನ ಸ್ನೇಹಿತರಾಗಿ, ಒಡನಾಡಿಯಾ

ತೌಟನಹಳ್ಳಿ ಬಳಿ ಹತ್ತಾರು ಎಕರೆ ಸರ್ಕಾರಿ ಗುಡ್ಡೆ, ದಲಿತರ ಜಮೀನು ಒತ್ತುವರಿ ಮಾಡಿದ ಬಿಜೆಪಿ ಮುಖಂಡ, ಕ್ರಮಕ್ಕೆ ಆಗ್ರಹ
ತೌಟನಹಳ್ಳಿ ಬಳಿ ಹತ್ತಾರು ಎಕರೆ ಸರ್ಕಾರಿ ಗುಡ್ಡೆ, ದಲಿತರ ಜಮೀನು ಒತ್ತುವರಿ ಮಾಡಿದ ಬಿಜೆಪಿ ಮುಖಂಡ, ಕ್ರಮಕ್ಕೆ ಆಗ್ರಹ

ಚನ್ನಪಟ್ಟಣ: ತಾಲ್ಲೂಕಿನ ಮಳೂರು ಹೋಬಳಿ ಯ ತೌಟನಹಳ್ಳಿ ಗ್ರಾಮದ ಸರ್ವೇ ನಂಬರ್ ೭೪ ರಲ್ಲಿ ೧೭೦ ಎಕರೆ ಸರ್ಕಾರಿ ಜಮೀನು ಇದ್ದು, ಸ್ಥಳೀಯ ರೈತರ ಜಾನುವಾರುಗಳಿಗೆ

ಹಲವು ಎಡವಟ್ಟುಗಳೊಂದಿಗೆ ರಾಜ್ಯೋತ್ಸವ ಆಚರಿಸಿದ ತಾಲ್ಲೂಕು ಆಡಳಿತ
ಹಲವು ಎಡವಟ್ಟುಗಳೊಂದಿಗೆ ರಾಜ್ಯೋತ್ಸವ ಆಚರಿಸಿದ ತಾಲ್ಲೂಕು ಆಡಳಿತ

ಚನ್ನಪಟ್ಟಣ: ಚನ್ನಪಟ್ಟಣ ನಗರ ಮತ್ತು ತಾಲ್ಲೂಕು ಕೇಂದ್ರವೂ ಪುರಾಣ, ಇತಿಹಾಸ, ಚಳವಳಿ ಸೇರಿದಂತೆ ಅನೇಕ ವಿಚಾರಗಳಲ್ಲಿ ಸ್ವಾತಂತ್ರ್ಯ ಪೂರ್ವ ಹಾಗೂ

Top Stories »  


Top ↑