ಮನುಷ್ಯರಿಗೆ ಕೊಡುವ ಗುಣಮಟ್ಟದ ಆಹಾರದಷ್ಟೇ ಪ್ರಾಣಿಗಳಿಗೂ ಕೊಡಬೇಕು ರುದ್ರಮುನಿ
ಮನುಷ್ಯರು ಯಾವ ಗುಣಮಟ್ಟದ ಆಹಾರಗಳನ್ನು ಸೇವಿಸುತ್ತಾರೋ ಅದೇ ಗುಣಮಟ್ಟದ ಆಹಾರವನ್ನು ಪಶುಗಳು ಮತ್ತು ಕೋಳಿಗಳಿಗೂ ನೀಡಿದರೆ ಅದರಿಂದಲೂ ನಾವು ಗುಣಮಟ್ಟದ ಹಾಲು ಮತ್ತು ಮಾಂಸವನ್ನು ಪಡೆಯಲು ಸಾಧ್ಯ ಎಂದು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿ' ದ ಉಪಾಧ್ಯಕ್ಷರಾದ ಡಿ ಎಸ್ ರುದ್ರಮುನಿ ಹೇಳಿದರು.
ಅವರು ಇಂದು ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಕುಕ್ಕುಟ ಮಹಾಮಂಡಳದ ಪಶು ಆಹಾರ ಮತ್ತು ಕುಕ್ಕುಟ ಆಹಾರ ಗುಣಮಟ್ಟದ ಜಾಗೃತಿ ಮತ್ತು ತಾಂತ್ರಿಕ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಕ್ಕುಟ ಮಹಾಮಂಡಳದ ಅಧ್ಯಕ್ಷರಾದ ಡಿ ಕೆ ಕಾಂತರಾಜುರವರು ಕೋಳಿ ಸಾಕಣೆ ಇಂದು ಬೃಹತ್ ಉದ್ಯಮವಾಗಿ ಬೆಳೆದಿದ್ದು ಇಡೀ ದೇಶದಲ್ಲಿಯೇ ಉನ್ನತ ಸ್ಥಾನ ಪಡೆದುಕೊಂಡಿದೆ, ಕೋಳಿ ಸಾಕಣಿಕೆದಾರರಿಗೆ ಕುಕ್ಕುಟ ಮಹಾಮಂಡಳವೂ ಅನೇಕ ಸೌಲಭ್ಯಗಳನ್ನು ಕೊಡುತ್ತಿದೆ, ಹೊಸದಾಗಿ ಉದ್ದಿಮೆ ಆರಂಭಿಸುವವರಿಗೆ ಬ್ಯಾಂಕ್ ನಲ್ಲಿ ಸಾಲಸೌಲಭ್ಯ, ಉತ್ತಮ ಗುಣಮಟ್ಟದ ಆಹಾರ ಇನ್ನಿತರೆ ಸೌಲಭ್ಯಗಳನ್ನು ನೀಡಲು ಸಶಕ್ತವಾಗಿದೆ ಎಂದರು.
ಕರ್ನಾಟಕ ಕೋಳಿ ಸಾಕಾಣಿಕಾ ಆಹಾರ ಮತ್ತು ಮಾರಾಟ ದ ಸಹಾಯಕ ನಿರ್ದೇಶಕ ಡಾ ಜಯಪ್ರಕಾಶ್ ಮಾತನಾಡಿ ಬೇಸಿಗೆಯಲ್ಲಿ ಮಾತ್ರ ನಾವು ಮೇವುಹುಡುಕುವ ಕೆಲಸ ಮಾಡಬಾರದು, ಮುಂದಾಗಿಯೇ ಶೇಖರಿಸುವ ಕೆಲಸ ಮಾಡಿಕೊಳ್ಳಬೇಕು, ಕರ್ನಾಟಕದಲ್ಲಿ ಒಂದು ದಿನಕ್ಕೆ ಎಪ್ಪತೈದು ಲಕ್ಷ ಹಾಲು ಉತ್ಪಾದನೆಯಾಗುತ್ತಿದೆ, ಐದು ಸಾವಿರ ಟನ್ ಆಹಾರ ಬೇಕಾಗಿದೆ ಎಂದು ಮಾಹಿತಿ ನೀಡಿದರು.
ಸಿಪಿಡಿಓ ನಿರ್ದೇಶಕರಾದ ಡಾ ಪಿ ಎಸ್ ಮಹೇಶ್ ನಮ್ಮ ದೇಶ ಐದನೇ ಶ್ರೀಮಂತ ದೇಶವಾಗಿದೆ, ೨೦೬೦ ನೇ ಇಸವಿಗೆ ೩೫ ಲಕ್ಷ ಟ್ರಿಲಿಯನ್ ಡಾಲರ್ ಗೆ ಬಂದು ಜಗತ್ತಿನ ಮೂರನೇ ಶ್ರೀಮಂತ ದೇಶವಾಗಲಿದೆ, ಮುಂದಿನ ಪೀಳಿಗೆ ಹೊರದೇಶಕ್ಕೆ ಹೋಗಿ ದುಡಿಯ ಬೇಕಾಗಿಲ್ಲ ಎಂದು ಅಭಿಪ್ರಾಯ ಪಟ್ಟರು, ಸಾಫ್ಟವೇರ್ ೧೨೦ ಲಕ್ಷ ಕೋಟಿ, ೩೦ ಲಕ್ಷ ಕೋಟಿ ರೈತರಿಂದ, ೬೫ ಲಕ್ಷ ಕೋಟಿ ಕಾರ್ಖಾನೆಗಳಿಂದ ಬರುತ್ತದೆ, ನಾವು ಸಣ್ಣದಾಗಿ ಪ್ರಾರಂಭಿಸಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂದು ಹಲವಾರು ಉದಾಹರಣೆಗಳ ಸಮೇತ ಉದಾಹರಿಸಿದರು.
ಆಹಾರ ಗುಣಮಟ್ಟದ ಜಂಟಿ ನಿರ್ದೇಶಕ ಡಾ ಹೆಚ್ ಕೆ ಚನ್ನೇಗೌಡರವರು ಪಶು ಮತ್ತು ಕೋಳಿ ಆಹಾರದ ಗುಣಮಟ್ಟದ ಬಗ್ಗೆ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಕ ಸ ಕು ಮ ಮಂಡಳದ ವ್ಯವಸ್ಥಾಪಕ ನಿರ್ದೇಶಕ ಡಾ ಬಿ ಎನ್ ಶಿವರಾಮ್, ಡಾ ಬಿ ಎಸ್ ವೆಂಕಟರಾಮಿರೆಡ್ಡಿ, ಡಾ ಪಿ ಶ್ರೀನಿವಾಸ, ಡಾ ಹೆಚ್ ಎಸ್ ಜಯಣ್ಣ, ಎನ್ ಎಸ್ ಶಂಕರ್, ಡಾ ವರದರಾಜುಕುಮಾರ್ ಹಾಜರಿದ್ದರು.
ತಾಲ್ಲೂಕಿನ ಕೋಳಿ ಸಾಕಾಣಿದಾರರು, ಪಶು ಮತ್ತು ಕೋಳಿ ಆಹಾರ ಉತ್ಪಾದಕರು, ಪ್ರಗತಿ ಪರ ರೈತರು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ರಾಮನಗರ, ಫೆ. 16 ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ
ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ
ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು, ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ರಾಮನಗರ, ಫೆ. 12: ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ
ಪ್ರತಿಕ್ರಿಯೆಗಳು