Tel: 7676775624 | Mail: info@yellowandred.in

Language: EN KAN

    Follow us :


ಭಾರತಕ್ಕೆ 66 ಪದಕಗಳು

ದೆಹಲಿ: ಮತ್ತೊಂದು ಚಿನ್ನದ ಭರವಸೆ ಮೂಡಿಸಿದ್ದ ವಿಶ್ವದ ನಂ.1 ಬ್ಯಾಡ್ಮಿಂಟನ್‌ ತಾರೆ ಕಿಡಂಬಿ ಶ್ರೀಕಾಂತ್‌, ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ನಿರಾಶೆ ಅನುಭವಿಸಿ  ಬೆಳ್ಳಿ ಪದಕಕ್ಕೆ ಕೊರಳೊಡಿದ್ದಾರೆ. ಮೂರು ಬಾರಿ ಒಲಿಂಪಿಕ್ಸ್ ಬೆಳ್ಳಿ ಪದಕ ಜಯಿಸಿರುವ ಮಲೇಷ್ಯಾದ ಲೀ ಚಾಂಗ್‌ ವೆಯ್‌, ಫೈನಲ್ ಪಂದ್ಯದ ಆರಂಭದ ಗೇಮ್‌ನಲ್ಲಿ ಹಿನ್ನಡೆ ಕಂಡರೂ ಮುಂದಿನ ಎರಡು

ಸನ್ ರೈಸಸ್ ಹೈದರಾಬಾದ್ ತಂಡಕ್ಕೆ ಜಯ

  ಕೋಲ್ಕತಾ: ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡ ತವರಿನಲ್ಲೇ ಮುಖಭಂಗ ಅನುಭವಿಸಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 5 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ. ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ನೀಡಿದ್ದ 139 ರನ್ ಗಳ ಸಾಮಾನ್ಯ ಗುರಿಯನ್ನು ಬೆನ್ನ ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 19 ಓವರ್ ನಲ್ಲಿ 5 ವಿಕೆಟ

ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಜಯ

ಮುಂಬೈ: ಐಪಿಎಲ್ 2018ರ ಟೂರ್ನಿಯಲ್ಲಿ ಪ್ರಬಲ ತಂಡವಾಗಿ ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ 7 ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಮುಂಬೈ ತಂಡ ನೀಡಿದ 195 ರನ್ ಗಳ ಬೃಹತ್ ಗುರಿಯನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಸಾಧಿಸಿದೆ. ಬೃಹತ್ ಮೊತ್ತದ ಹೊರತಾಗಿಯೂ ಬೌಲಿಂಗ್ ನಲ್ಲಿ ತಿಣುಕಾಡಿದ ಮುಂಬೈ ಅಕ್ಷರಶ

ಸನ್ ರೈಸಸ್ ಹೈದರಾಬಾದ್ ತಂಡಕ್ಕೆ ಜಯ

ಹೈದರಾಬಾದ್: ಅಂತಿಮ ಓವರ್​ನಲ್ಲಿ ಜಯ ಸಾಧಿಸಲು ಅಗತ್ಯವಿದ್ದ 11ರನ್ ಗಳಿಸಲು ಯಶಸ್ವಿಯಾದ ದೀಪಕ್ ಹೂಡಾ (32*ರನ್, 25ಎಸೆತ, 1 ಬೌಂಡರಿ, 1ಸಿಕ್ಸರ್) ಹಾಗೂ ಬಿಲ್ಲಿ ಸ್ಟಾನ್​ಲೇಕ್ (5*) ಜೋಡಿ, ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಐಪಿಎಲ್-11ರಲ್ಲಿ ಸತತ 2ನೇ ಜಯ ತಂದುಕೊಟ್ಟಿತು. ಕೊನೇ ಮೂರು ಓವರ್​ಗಳಲ್ಲಿ ಪಂದ್ಯ ನಾಟಕೀಯ ತಿರುವು ಪಡೆದರೂ ಸನ್​ರೈಸರ್ಸ್ ತಂಡ 1 ವಿಕೆಟ್ ರೋಚಕ ಗೆಲುವು ಪಡೆಯಲು ಯಶಸ್ವಿಯಾಯಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ

ವಿಶ್ವದ ನಂ.1 ಪುರುಷರ ಷಟ್ಲರ್ ಕಿಡಂಬಿ ಶ್ರೀಕಾಂತ್
ವಿಶ್ವದ ನಂ.1 ಪುರುಷರ ಷಟ್ಲರ್ ಕಿಡಂಬಿ ಶ್ರೀಕಾಂತ್

ದೆಹಲಿ: ಭಾರತದ ಭರವಸೆಯ ಬ್ಯಾಡ್ಮಿಂಟನ್‌ ತಾರೆ, ಕಿಡಂಬಿ ಶ್ರೀಕಾಂತ್‌ ವಿಶ್ವದ ನಂ.1 ಪುರುಷ ಶಟ್ಲರ್‌ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ವಿಶ್ವ ಬ್ಯಾಡ್ಮಿಂಟನ್‌ ಒಕ್ಕೂಟ(ಬಿಡ್ಲ್ಯೂಎಫ್‌)ದ ಪುರುಷರ ರ‍್ಯಾಂಕಿಂ

ಪಂಜಾಬ್ ಕಿಂಗ್ಸ್ ಇಲೆವೆನ್ ತಂಡಕ್ಕೆ ಜಯ

ಮೊಹಾಲಿ: ಅತಿ ವೇಗದ ಅರ್ಧ ಶತಕ ಬಾರಿಸಿದ ಕನ್ನಡಿಗ ಲೋಕೇಶ್ ರಾಹುಲ್ ಹಾಗೂ ಕರುಣ್ ನಾಯರ್ ಅವರ ಬ್ಯಾಟಿಂಗ್ ಅಬ್ಬರಕ್ಕೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಬೆಚ್ಚಿತು. ಭಾನುವಾರ ನಡೆದ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಆರು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್ ಇಲೆವನ್ ತಂಡ ಶುಭಾರಂಭ ಮಾಡಿತು. ಇಲ್ಲಿನ ಐಸ್ ಬಿಂದ್ರಾ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ನಿ

ಚನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರೋಚಕ ಜಯ
ಚನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರೋಚಕ ಜಯ

ಮುಂಬೈ: ಎರಡು ವರ್ಷಗಳ ನಿಷೇಧ ಶಿಕ್ಷೆ ಮುಗಿಸಿ ಮರಳಿರುವ ಸ್ಟಾರ್ ನಾಯಕ ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್ 11ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 1 ವಿಕೆಟ್​ಗಳ ರೋಚಕ ಜಯ ದಾಖಲಿಸಿದೆ. 166 ರನ್​ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡ 19.5 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 169 ರನ್​ ಗಳಿಸುವ ಮೂಲಕ ಐಪಿಎಲ್​ 11ನೇ ಆವೃತ್ತಿಯಲ್

ರಾಜ್ಯ ಸಭಾ ಸದಸ್ಯತ್ವದ ವೇತನ ಹಾಗೂ ಭತ್ಯೆಯನ್ನೆಲ್ಲಾ ಪ್ರಧಾನಿ ಪರಿಹಾರ ನಿಧಿಗೆ ನೀಡಿದ ಸಚಿನ್ ತೆಂಡೂಲ್ಕರ್
ರಾಜ್ಯ ಸಭಾ ಸದಸ್ಯತ್ವದ ವೇತನ ಹಾಗೂ ಭತ್ಯೆಯನ್ನೆಲ್ಲಾ ಪ್ರಧಾನಿ ಪರಿಹಾರ ನಿಧಿಗೆ ನೀಡಿದ ಸಚಿನ್ ತೆಂಡೂಲ್ಕರ್

ನವದೆಹಲಿ : ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಇತ್ತೀಚಿಗೆ ಮುಗಿದಿದ್ದು, ಅವರು ಸಂಸದರ ವೇತನ ಹಾಗೂ ಭತ್ಯೆಯನ್ನೆಲ್ಲಾ ಪ್ರಧಾನಿ ಪರಿಹಾರ ನಿಧಿಗೆ ನೀಡಿದ್ದಾರೆ.ಆರು ವರ್ಷದಲ್ಲಿ ತೆಂಡೂಲ್ಕರ್‌ ಅವರು ₹90 ಲಕ್ಷ ವೇತನ ಹಾಗೂ ಇತರೆ ಮಾಸಿಕ ಭತ್ಯೆ ಪಡೆದಿದ್ದರು. ಸಚಿನ್‌ ಅವರಿಂದ ವೇತನದ ಹಣ ಪಡೆದಿರುವುದನ್ನು ಪ್ರಧಾನಮಂತ್ರಿ ಕಾರ್ಯಾಲಯ ಕೂಡ ಇತ್ತೀಚೆಗೆ ದೃಢಪಡಿಸಿತ್ತು. ಪ್ರಧಾನಿಯವರು  ಸಚಿನ್‌ ಅವರಿಗೆ

ಜನರಿಂದ ಹಲ್ಲೆಗೊಳಗಾಗಿ ಸಾವಿಗೀಡಾಗಿದ್ದ ಬುಡಕಟ್ಟು ಯುವಕ ಮಧುವಿನ ಕುಟುಂಬಕ್ಕೆ ವೀರೇಂದ್ರ ಸೆಹ್ವಾಗ್ ನೆರವು
ಜನರಿಂದ ಹಲ್ಲೆಗೊಳಗಾಗಿ ಸಾವಿಗೀಡಾಗಿದ್ದ ಬುಡಕಟ್ಟು ಯುವಕ ಮಧುವಿನ ಕುಟುಂಬಕ್ಕೆ ವೀರೇಂದ್ರ ಸೆಹ್ವಾಗ್ ನೆರವು

ಪಾಲಕ್ಕಾಡ್: ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಜನರ ಹಲ್ಲೆಗೊಳಗಾಗಿ ಸಾವಿಗೀಡಾಗಿದ್ದ ಬುಡಕಟ್ಟು ಜನಾಂಗದ ಯುವಕ ಮಧುವಿನ ಕುಟುಂಬಕ್ಕೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹಾಯಧನ ನೀಡಿದ್ದಾರೆ. ಮಧುವಿನ ಅಮ್ಮ ಮಲ್ಲಿ ಅವರಿಗೆ ಸೆಹ್ವಾಗ್ ರೂ. 1.5 ಲಕ್ಷ ಚೆಕ್ ನೀಡಿದ್ದಾರೆ ಎಂದು ಕೇರಳದ ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್ ಟ್ವೀಟ್ ಮಾಡಿದ್ದಾರೆ. ಸೆಹ್ವಾಗ್ ಅವರ ಫೌಂಡೇಶನ್ ಈ ಚೆಕ್ ನೀಡಿದ್ದು ಇದನ್ನು ಏಪ್ರಿಲ್ 11ರಂದು ಮಲ್ಲಿ ಅವರಿಗೆ ಹಸ್ತಾಂತರಿಸಲಾಗುವುದು ಎಂದು ದ

ಐಪಿಎಲ್ 11 ನೇ ಆವೃತ್ತಿಯ ವೇಳಾಪಟ್ಟಿ
ಐಪಿಎಲ್ 11 ನೇ ಆವೃತ್ತಿಯ ವೇಳಾಪಟ್ಟಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಲ್) ಟ್ವೆಂಟಿ-20 ಚಾಂಪಿಯನ್‌ಶಿಪ್ 11ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಐಪಿಎಲ್ ಸೀಸನ್ 11ನ ಉದ್ಧಾಟನಾ ಸಮಾರಂಭ ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

Top Stories »  



Top ↑