ಅಯ್ಯಪ್ಪ ಭಕ್ತರಿದ್ದ ಮಿನಿ ಬಸ್ ಉರುಳಿ ಇಬ್ಬರು ಸಾವು*
ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿಗೆ ತೆರಳಲು ಮಾಲೆ ಧರಿಸಿದ ಭಕ್ತರು ಇಂದು ಅದೇ ಗ್ರಾಮದ ಬೆಟ್ಟದಲ್ಲಿ ನೆಲೆಸಿರುವ ಬೆಟ್ಟದ ತಿಮ್ಮಪ್ಪ ಸ್ವಾಮಿಯ ದರ್ಶನ ಮಾಡಿ ಪ್ರಸಾದ ಸೇವಿಸಿ ಹಿಂದಿರುಗುವ ವೇಳೆ ವಾಹನ ಉರುಳಿದ್ದು ಇಬ್ಬರು ಸ್ಥಳದಲ್ಲಿಯೇ ಅಸುನೀಗಿ ಐದಾರು ಮಂದಿಗೆ ಗಾಯಗಳಾಗಿವೆ.ಬ
ಮಧುಕರ್ ಶೆಟ್ಟಿ ಸಾವು ತನಿಖೆಗೆ ಒತ್ತಾಯ
ದಕ್ಷ ಪ್ರಾಮಾಣಿಕ ಐಪಿಎಸ್ ಅಧಿಕಾರಿ ಡಾ ಮಧುಕರ್ ಶೆಟ್ಟಿಯವರ ಸಾವು ದೇಶಕ್ಕೆ ತುಂಬಲಾರದ ನಷ್ಟವಾಗಿದೆ, ಅವರ ದೇಹ ಇಂತಹ ಖಾಯಿಲೆಗೆ ಸಾಯುವಂತದ್ದಲ್ಲ, ಸಮಾಜದ ಒಳಿತಿಗಾಗಿ ಸದಾ ಮಿಡಿಯುವ ಹೃದಯವಂತ ಹೆಚ್೧ಎನ್೧ ಖಾಯಿಲೆಗೆ ಮರಣಹೊಂದುತ್ತಾರೆಂದರೆ ಅವರನ್ನು ಕಂಡ ಸಾರ್ವಜನಿಕರು ನಂಬಲು ಸಾಧ್ಯವಿಲ್ಲ, ಅವರ ಸಾವು ಖಾಯಿಲೆಯ ಸೋಂಕಿನಿಂದಾದ ಸಾವೋ ? ಅಥವಾ ಸಂಚು ಮಾಡಿ ಯಾರಾದರೂ ಕೊಲೆಗೈದಿದ್ದಾರೋ ? ಎಂದು ಸಾರ್ವಜನಿಕರಿಗೆ ತಿಳಿಯಬೇಕೆಂದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉನ್ನತ ಮಟ್ಟದ ತನಿಖೆಗೆ ಆದ
ಮಧುಕರ್ ಶೆಟ್ಟಿ ಎಂಬ ಅನರ್ಘ್ಯ ರತ್ನ
(ಆತ್ಮೀಯ ಓದುಗರೇ ಪ್ರತಿ ಸೋಮವಾರ ಪ್ರಕಟವಾಗುವ ಈ ಅಂಕಣದಲ್ಲಿ ತಾಲ್ಲೂಕಿನ ಅಧಿಕಾರಿ ಮತ್ತು ಇಲಾಖೆಯ ಬಗ್ಗೆ ಬರೆಯುತ್ತಿದ್ದೆ, ಆದರಿಂದು ಚನ್ನಪಟ್ಟಣದಲ್ಲಿ ಕೇವಲ ಹದಿನೆಂಟು ತಿಂಗಳು ಕೆಲಸ ಮಾಡಿ ಹದಿನೆಂಟು ವರ್ಷವಾದರು ಜನರು ಮರೆಯದ ಈ ಮಹಾನ್ ಚೇತನವನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಎಂದಿನ ಸಹಕಾರವಿರಲಿ.)ಹದಿನೆಂಟು ವರ್ಷಗಳಲ್ಲಿ ಹತ್ತು ಕಡೆ ವರ್ಗಾವಣೆಖ್ಯಾತ ಪತ್ರಕರ್
ಮೊದಲು ನನ್ನ ಮನೆಯ ದೀಪ ಬೆಳಗಬೇಕು, ಆ ದೀಪದಿಂದ ಬೇರೆಯವರ ಮನೆ ಬೆಳಗಬೇಕು ಚಕ್ಕೆರೆ ಶಿವಶಂಕರ್
ಮೊದಲು ನಮ್ಮ ಮನೆಯ ದೀಪ ಉರಿದು ಬೆಳಗಬೇಕು, ಆ ದೀಪದಿಂದ ಬೇರೆಯವರ ಮನೆಯ ದೀಪ ಬೆಳಗಬೇಕೆ ವಿನಹ ನಮ್ಮ ಮನೆಯನ್ನೇ ಉರಿಸಿಕೊಂಡು ಬೇರೆಯವರ ಮನೆಯ ದೀಪ ಬೆಳಗಲು ಬಿಡಬಾರದು ಎಂದು ಮಾರ್ಮಿಕವಾಗಿ ನುಡಿದರು, ಅದಕ್ಕೆ ವಿವರಣೆ ನೀಡಿದ ಶಿವಶಂಕರ್ ರವರು ಮೊದಲು ನನ್ನೂರಿನ ಸಾಧಕರನ್ನು ಮೊದಲು ನೆನೆದು ರಾಜ್ಯ, ರಾಷ್ಟ್ರದ ಸಾಧಕರನ್ನು ನೆನೆಯಬೇಕು ಎಂದರು.
ಕೂಡ್ಲೂರು ಕೆರೆ ಕೋಡಿಯಿಂದ ರೈತರ ಬೆಳೆ ನೀರು ಪಾಲು
ಹದಿನೈದು ವರ್ಷಗಳಿಂದ ತುಂಬದಿದ್ದ ಕೂಡ್ಲೂರು ಕೆರೆಯು ಏತ ನೀರಾವರಿ ಮೂಲಕ ತುಂಬಿ ತುಳುಕುತಿದ್ದು ಕೋಡಿ ಹರಿಯಲಾರಂಭಿಸಿದೆ, ಕೆರೆಯ ನೀರು ಮತ್ತು ಬೋರ್ ವೆಲ್ಲ ನೀರನ್ನು ನಂಬಿ ವ್ಯವಸಾಯ ಮಾಡುತ್ತಿದ್ದ ರೈತರಿಗೆ ಒಂದು ಕಡೆ ಸಂತಷವಾದರೆ ಅದೇ ನೀರು ಮತ್ತೊಂದು ಕಡೆ ಶಾಪವಾಗಿ ಪರಿಣಮಿಸಿದೆ.ಕೂಡ್ಲೂರು ಗದ್ದೆ ಬಯಲು ಎಂದೇ ಹೆಸರಾದ ಸಹಸ್ರಾರು ಎಕರೆ ವಿಶಾಲವಾದ ಪ್ರದೇಶಕ್ಕೆ ನೀರುಣಿಸಿ ರೈತನ ಆದಾಯಕ್ಕೆ ಮುನ್ನುಡಿ ಬರೆಯುವುದು ಈ
ಇರುಳಿಗ ಸಮುದಾಯದ ಕುಟುಂಬಳಿಗೆ ಸ್ವೆಟರ್ ವಿತರಣೆ
ತಾಲ್ಲೂಕಿನ ಕೂಟಗಲ್ ಬಳಿ ಇರುವ ಇರುಳಿಗ ಸಮುದಾಯದ ಕುಟುಂಬಗಳಿಗೆ ಸಂಶೋಧನಾವಿದ್ಯಾರ್ಥಿ ಎಸ್. ರುದ್ರೇಶ್ವರ ಅವರಿಂದ ಸ್ವೆಟರ್ ವಿತರಣಾ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೀಯ ಗ್ರ
ಚನ್ನಪಟ್ಟಣದ ಚಚ್೯ಗಳಲ್ಲಿ ಕ್ರಿಸ್ತನ ಆರಾಧನೆ
ಇಂದು ಡಿಸೆಂಬರ್ ೨೫ ಕ್ರೈಸ್ತ ಭಾಂಧವರಿಗೆ ಎಲ್ಲಿಲ್ಲದ ಸಡಗರ ಸಂಭ್ರಮ, ನಗರದಲ್ಲಿರುವ ಎಲ್ಲಾ ಚಚ್೯ಗಳಲ್ಲಿಯೂ ಕ್ರೈಸ್ತಮತದವರೆಲ್ಲರೂ ಒಗ್ಗೂಡಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಿಹಿಯನ್ನು ಹಂಚಿ ಸಂಭ್ರಮಿಸುವ ಸಮಯವಿದು.ನಗರದಲ್ಲಿನ ಎಲ್ಲಾ ಚಚ್೯ಗಳು ಇಂದು ಜಗಮಗಿಸುವ ಅಲಂಕಾರದಿಂದ ಕೂಡಿದ್ದು ಬೆಳಿಗ್ಗೆಯಿಂದಲೇ ಪಾದ್ರಿಗಳ ಸಮ್ಮುಖದಲ್ಲಿ ದೇವರ ಆರಾಧನೆಯನ್ನು ಮಾಡಿ ತಮ್ಮ ಸ್ನೇಹಿತರು, ಹಿತೈಷಿಗಳು ಮತ್ತು ಬಂಧುಗಳ ಮನೆಗೆ
ಹಲವಾರು ಅಡೆತಡೆಗಳ ನಡುವೆ ಎದ್ದು ನಿಲ್ಲುವ ಪ್ರಯತ್ನ , ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು
ತಾಲ್ಲೂಕಿನಲ್ಲಿ ಹದಿನೈದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಅರವತ್ತೊಂದು ಉಪ ಆರೋಗ್ಯ ಕೇಂದ್ರಗಳಿವೆ, ಗ್ರಾಮೀಣ ಪ್ರದೇಶದ ರೋಗಿಗಳಿಗೆ ಸ್ಥಳಿಯವಾಗಿಯೇ ಚಿಕಿತ್ಸೆ ನೀಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೇ ಇನ್ನೂ ಹೆಚ್ಚಿನ ರೀತಿಯಲ್ಲಿ ಚಿಕಿತ್ಸೆ ದೊರಕುವಂತೆ ಮಾಡಲು ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗುವುದು ಎಂದು ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ ಟಿ ಹೆಚ್ ರಾಜು ರವರು ತಿಳಿಸಿದರು.
25ರಂದು ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ ಅವರಿಂದ ಸ್ವೆಟರ್ ವಿತರಣೆ
ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ ಅವರಿಂದ ತಾಲ್ಲೂಕಿನ ಕೂಟಗಲ್ ಬಳಿ ವಾಸವಾಗಿರುವ ಇರುಳಿಗ ಸಮದಾಯದ ಕುಟುಂಬಗಳಿಗೆ ಸ್ವೆಟರ್ ವಿತರಣಾ ಕಾರ್ಯಕ್ರಮ ದಿನಾಂಕ 25ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಸರ್ಕಾರಿ ಮಾದರಿ ಮಾಧ್ಯಮಿಕ ಶಾಲೆಯಲ್ಲಿ ಉಚಿತ ಯೋಗಾಸನ
ಬೆಂಗಳೂರಿನ ಆಯುಷ್ಮಾ ಯೋಗಾಸನ ಕೇಂದ್ರದ ವತಿಯಿಂದ ನಗರದ ಮಂಗಳವಾರಪೇಟೆಯ ಸರ್ಕಾರಿ ಮಾದರಿ ಮಾಧ್ಯಮಿಕ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಬೆಳಿಗ್ಗೆ ಎಂಟೂವರೆಯಿಂದ ಒಂಭತ್ತೂವರೆ ಗಂಟೆಯವರೆಗೆ ಒಂದು ಗಂಟೆಯ ಕಾಲ ಆಯುಷ್ಮಾ ಯೋಗ ಕೇಂದ್ರದ ಗೀತಾ ಲಕ್ಷ್ಮಣ ಮತ್ತು ಪ್ರದೀಪ್ ಕುಮಾರ್ ರವರು ಎಲ್ಲಾ ವಯೋಮಾನದ ಮಕ್ಕಳಿಗೆ ಹಲವು ರೀತಿಯ ಯೋಗ ಭಂಗಿಗಳನ್ನು ಲೀಲಾಜಾಲವಾಗಿ ಪ್ರದರ್ಶಿಸುವ ಮೂಲಕ ಮಕ್ಕಳಿಗೆ ಯೋಗಾಸನ ಕಲಿಸಿಲಾಯಿತು.