ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ಕರೆ
ಚನ್ನಪಟ್ಟಣ: ಭಾರತ ಸರ್ಕಾರದ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ರೈತರು ತಮ್ಮ ಖಾತೆ ಹೊಂದಿರುವ ಬ್ಯಾಂಕ್ ನಲ್ಲಿ ನೋಂದಣಿ ಮಾಡಿಕೊಂಡು ಫಸಲು ನಸ್ಟವಾದರೆ ವಿಮೆಯ ಸೌಲಭ್ಯವನ್ನು ಪಡೆಯುವ ಮೂಲಕ ಇಲಾಖೆಯ ನೆರವನ್ನು ಪಡೆದುಕೊಳ್ಳಬೇಕೆಂದು ತಾಲ್ಲೂಕು ಕೃಷಿ ಅಧಿಕಾರಿ ಅಪರ್ಣಾ ತಿಳಿಸಿದರು.
ಅವರು ಕೃಷಿ ಇಲಾಖೆಯ ಕಛೇರಿಯ ಬಳಿ ರೈತರಿಗೆ ವಿಮಾ ಸೌಲಭ್ಯ ಕುರಿತು ಮಾಹಿತಿ ನೀಡಲು ಹೋಬಳಿ ಮಟ್ಟದಲ್ಲಿ ಪ್ರಚಾರ ಕೈಗೊಳ್ಳುವ ಆಟೋ ರಿಕ್ಷಾಗಳಿಗೆ ಚಾಲನೆ ನೀಡಿ ಮಾತನಾಡಿದರು.
೨೦೧೯ ರ ಮುಂಗಾರು ಹಂಗಾಮಿ ನಲ್ಲಿ ಫಸಲ್ ಬಿಮಾ ಯೋಜನೆಯನ್ನು ರಾಮನಗರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದ್ದು ದಿನಾಂಕ ೧೦/೦೪/೨೦೧೯ ರಲ್ಲಿ ಮಂಜೂರು ನೀಡಿದೆ.
೨೦೧೯ ರ ಮುಂಗಾರು ಹಂಗಾಮಿಗೆ ಫಸಲ್ ಬಿಮಾ ಯೋಜನೆ ಗೆ ಹೆಸರು ನೋಂದಾಯಿಸಲು ಇಚ್ಚೆಯುಳ್ಳ ಬೆಳೆ ಸಾಲ ಪಡೆಯದ ರೈತರು ನಿಗದಿತ ಅರ್ಜಿಯೊಂದಿಗೆ ಪಹಣಿ, ಖಾತೆ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಕಾಡ್೯ ಪ್ರತಿಗಳನ್ನು ನೀಡಬೇಕು ಎಂದು ಅವರು ಹೇಳಿದರು.
ಹೋಬಳಿ ಮಟ್ಟದಲ್ಲಿ ಆಟೋರಿಕ್ಷಾ ಸಂಚರಿಸಲಿದ್ದು ಮಾಹಿತಿಯನ್ನು ನೀಡಲಾಗುತ್ತದೆ, ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯ ಕಛೇರಿಯನ್ನು ಸಂಪರ್ಕಿಸಬೇಕೆಂದು ಇದೇ ವೇಳೆ ತಿಳಿಸಿದರು.
ಹೋಬಳಿ ಮಟ್ಟದಲ್ಲಿ ನೋಂದಾಯಿಸುವ ಅಧಿಸೂಚಿತ ಬೆಳೆಗಳೆಂದರೆ, "ಕಸಬಾ* ಹೋಬಳಿಯಲ್ಲಿ ಮಳೆಯ ಆಶ್ರಯ ಮತ್ತು ನೀರಾವರಿ ಯಲ್ಲಿ ಬೆಳೆಯುವ ಅಲಸಂದೆ, ನೆಲಗಡಲೆ, ಮುಸುಕಿನ ಜೋಳ, ಹುರಳಿ, ಭತ್ತ, ರಾಗಿ. *ಮಳೂರು* ಹೋಬಳಿಯಲ್ಲಿ ಅಲಸಂದೆ, ನೆಲಗಡಲೆ, ಭತ್ತ, ಮುಸುಕಿನ ಜೋಳ, ರಾಗಿ ಮತ್ತು ಹುರುಳಿ ಹಾಗೂ *ವಿರುಪಾಕ್ಷಿಪುರ* ಹೋಬಳಿಯಲ್ಲಿ ಅಲಸಂದೆ, ಎಳ್ಳು, ಕೆಂಪು ಮೆಣಸಿನಕಾಯಿ, ತೊಗರಿ, ನೆಲಗಡಲೆ, ಭತ್ತ, ಮುಸುಕಿನ ಜೋಳ ರಾಗಿ ಮತ್ತು ಹುರುಳಿ ಬೆಳೆಗಳಿಗೆ ವಿಮಾ ಯೋಜನೆಯ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿಸಿದರು.
ಕೃಷಿ ಸಮಾಜದ ಅಧ್ಯಕ್ಷ ಬಸವೇಗೌಡ, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಮಂಜುನಾಥ, ರುದ್ರಪ್ಪ, ತಾಂತ್ರಿಕ ಅಧಿಕಾರಿ ಬೊಮ್ಮೇಶ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು