ಕೆಟ್ಟು ರಸ್ತೆ ಬದಿ ನಿಂತಿದ್ದ ಲಾರಿಗೆ ಢಿಕ್ಕಿಯಾದ ಬಸ್ಸು ಗಾಯ
ಚನ್ನಪಟ್ಟಣ: ನಗರದ ಸಾತನೂರು ರಸ್ತೆಯ ಆನಂದಪುರದಲ್ಲಿ ರಸ್ತೆ ಬದಿ ಕೆಟ್ಟು ರಿಪೇರಿಗೆಂದು ನಿಂತಿದ್ದ ಟಿಪ್ಪರ್ ಲಾರಿಗೆ (ಕೆಎ೪೨ಎ೧೫೫೪) ಸಾತನೂರು ಕಡೆಯಿಂದ ಬಂದ ಕೆ ಎಸ್ ಆರ್ ಟಿ ಸಿ (ಕೆಎ೪೨ಎಫ್೨೩೬) ಬಸ್ಸು ಹಿಂದಿನಿಂದ ಗುದ್ದಿದ ರಭಸಕ್ಕೆ ಲಾರಿ ಮಗುಚಿ ಬಿದ್ದಿದೆ.
ಹಿಂದಿನಿಂದ ಗುದ್ದಿದ ರಭಸಕ್ಕೆ ಲಾರಿ ಮಗುಚಿ ಬಿದ್ದಿದ್ದು ಯಾರು ಇಲ್ಲದ ಕಾರಣ ಹೆಚ್ಚಿನ ಅವಘಡ ಸಂಭವಿಸಿಲ್ಲ, ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಾಲಕ ಮತ್ತು ನಿರ್ವಾಹಕರಿಗೆ ಸ್ವಲ್ಪ ಹೆಚ್ಚಿನ ಗಾಯಗಳಾಗಿದ್ದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಟ್ಟು ನಿಂತಿದ್ದ ಲಾರಿಗೆ ಕೆಟ್ಟು ನಿಂತಿರುವ ಯಾವುದೇ ಉಪಕರಣ (ನಿಲುಗಡೆ ಸಿಗ್ನಲ್) ಅಳವಡಿಸದೆ ಹಾಗೂ ಅರ್ಧ ರಸ್ತೆಯಲ್ಲೇ ನಿಲ್ಲಿಸಿದ್ದರಿಂದ ಹಿಂದಿನಿಂದ ಬಂದ ಬಸ್ಸಿ ಚಾಲಕನಿಗೆ ತಕ್ಷಣ ಗೊತ್ತಾಗದೆ ಗುದ್ದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಸಂಚಾರಿ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವಕುಮಾರ್ ಮತ್ತು ಸಿಬ್ಬಂದಿಗಳು ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಉಪ ನಿರ್ದೇಶಕ ರಾಘವೇಂದ್ರ ರವರು ಸ್ಥಳದಲ್ಲಿ ಹಾಜರಿದ್ದು ಸಂಚಾರ ಸುಗಮ ವ್ಯವಸ್ಥೆಗೆ ಸಹಕರಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು