Tel: 7676775624 | Mail: info@yellowandred.in

Language: EN KAN

    Follow us :


ಶಿಬಿರದಲ್ಲಿ ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರ್ನಲ್ ರಾಜೀವ್ ವರ್ಮಾ ಕರೆ

Posted date: 06 Aug, 2019

Powered by:     Yellow and Red

ಶಿಬಿರದಲ್ಲಿ ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರ್ನಲ್ ರಾಜೀವ್ ವರ್ಮಾ ಕರೆ

ಚನ್ನಪಟ್ಟಣ:ಹತ್ತು ದಿನದ ಶಿಬಿರದಲ್ಲಿ ಎಲ್ಲರೊಳಗೊಂದಾಗಿ ಕಲಿತ ಶಿಸ್ತು ಸಂಯಮವನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಮುಂದಡಿ ಇಟ್ಟರೆ ಸಮಾಜದಲ್ಲಿ ಉತ್ತಮ ಹೆಸರು ಗಳಿಸಲು ಸಾಧ್ಯ ಎಂದು ಭಾರತೀಯ ಸೇನೆಯ ಕರ್ನಲ್ ರಾಜೀವ್ ವರ್ಮಾ ತಿಳಿಸಿದರು.

ಅವರು ನಗರದ ಹೊರವಲಯದಲ್ಲಿರುವ ಕರ್ನಾಟಕ ರಾಜ್ಯ ಪೋಲಿಸ್ ತರಬೇತಿ ಶಾಲೆಯಲ್ಲಿ (ಪಿಟಿಎಸ್) ಆಯೋಜಿಸಿದ ಎನ್ ಸಿ ಸಿ ತರಬೇತಿಯ ಸಮಾರೋಪ ಸಮಾರಂಭ ಕುರಿತು ಮಾತನಾಡಿದರು.


ಇಂದಿನ ವಿದ್ಯಾರ್ಥಿಗಳೇ ಭವಿಷ್ಯ ಭಾರತದ ರೂವಾರಿಗಳು, ಕೇವಲ ಅಂಕಗಳಿಗೆ ಸೀಮಿತವಾಗದೆ ದೇಶಾಭಿಮಾನವನ್ನು ರೂಢಿಸಿಕೊಳ್ಳಬೇಕು, ವಿದ್ಯಾರ್ಥಿ ಮತ್ತು ತರಬೇತಿ ಸಮಯದಲ್ಲಿ ಅಳವಡಿಸಿಕೊಂಡ ಶಿಸ್ತನ್ನು ಜೀವನದಲ್ಲಿಯೂ ಅಳವಡಿಸಿಕೊಂಡು ದೇಶ ಕಟ್ಟುವತ್ತ ಮುನ್ನುಗ್ಗಬೇಕು ಎಂದು ಎನ್ ಸಿ ಸಿ‌ ಕೆಡೆಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಶಿಬಿರದ ಎಲ್ಲಾ ಕಂಪನಿಗಳ ನಡುವೆ ಸ್ಪರ್ಧೆ ನಡೆದಿದ್ದು ಚಾಂಪಿಯನ್ ಷಿಪ್ ಮತ್ತು ಪಾರಿತೋಷಕವನ್ನು ನೀಡಲಾಯಿತು, ಪೋಲಿಸ್ ಗ್ರೂಪ್ ಕಮಾಂಡರ್‌ ಗ್ರೂಪ್ ನ ಕಂಪನಿ ಕಮಾಂಡರ್ ಅನಿಲ್ ಕುಮಾರ್ ಕಂಪನಿ ಸೀನಿಯರ್ ಮತ್ತು ಕೆಡೆಟ್ ಗಳಿಗೆ ರೂಲಿಂಗ್ ಶೀಲ್ಡ್ ನೀಡಿ ಅಭಿನಂದಿಸಲಾಯಿತು.


ಕಾರ್ಯಕ್ರಮದಲ್ಲಿ ವಿವಿಧ ಬೆಟಾಲಿಯನ್ ನ ಕಮಾಂಡಿಂಗ್ ಆಫೀಸರ್, ಆಡಂ ಆಫೀಸರ್ ಮತ್ತು ಕುಟುಂಬ, ಗ್ರೂಪ್ ಟ್ರೈನಿಂಗ್ ಆಫೀಸರ್ ಹಾಗೂ ಇನ್ನಿತರ ಆಫೀಸರ್ ಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑