Tel: 7676775624 | Mail: info@yellowandred.in

Language: EN KAN

    Follow us :


ಕೃಷ್ಣೇಗೌಡರ ಶಾಶ್ವತ ಹೆಸರಿಗೆ ದತ್ತಿ ಸ್ಥಾಪನೆ ಅವಶ್ಯ ಸು ತ ರಾಮೇಗೌಡ

Posted date: 07 Aug, 2019

Powered by:     Yellow and Red

ಕೃಷ್ಣೇಗೌಡರ ಶಾಶ್ವತ ಹೆಸರಿಗೆ ದತ್ತಿ ಸ್ಥಾಪನೆ ಅವಶ್ಯ ಸು ತ ರಾಮೇಗೌಡ

ಚನ್ನಪಟ್ಟಣ: ನಿನ್ನೆ ನಿಧನರಾದ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ತೋಟದಮನೆ ಕೃಷ್ಣೇಗೌಡರ ನೆನಪು ತಾಲ್ಲೂಕಿನಲ್ಲಿ ಶಾಶ್ವತವಾಗಿ ಉಳಿಯಬೇಕಾದರೆ ಅವರ ಹೆಸರಿನಲ್ಲಿ ದತ್ತಿ ಸ್ಥಾಪನೆ ಅತ್ಯವಶ್ಯಕವಾಗಿದೆ ಎಂದು ಬಯಲುಸೀಮೆ ಪತ್ರಿಕೆಯ ಸಂಪಾದಕ ಸು ತ ರಾಮೇಗೌಡ ಅಭಿಪ್ರಾಯ ಪಟ್ಟರು.

ಅವರು ಚನ್ನಪಟ್ಟಣ ಕಸಾಪ ಮತ್ತು ಕನ್ನಡಾಭಿಮಾನಿಗಳು ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ಕೃಷ್ಣೇಗೌಡರ ಕುಟುಂಬದ ಜೊತೆ ಚರ್ಚಿಸಿ ದತ್ತಿ ನೀಡುವಂತೆ ಕೇಳುವುದು, ಇಲ್ಲವಾದರೆ ಸಮಾನ ಮನಸ್ಕರು ಸೇರಿ ನಮ್ಮ ಹಣವನ್ನೇ ಅವರ ಹೆಸರಿನಲ್ಲಿ ದತ್ತಿ ಇಟ್ಟು ಕಾರ್ಯಕ್ರಮ ನಡೆಸಲು ತೀರ್ಮಾನ ಕೈಗೊಂಡರೆ ಅವರ ಹೆಸರನ್ನು ಶಾಶ್ವತವಾಗಿ ಉಳಿಸಬಹುದು ಎಂದರು.


ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಮಾತನಾಡಿ ಕೃಷ್ಣೇಗೌಡರು ಅಧಿಕಾರಿಯಾಗಿದ್ದವರು, ಅಧಿಕಾರಿಗಳಾಗಿದ್ದವರು ಬರವಣಿಗೆಗೆ ಒಗ್ಗಿಕೊಳ್ಳುವುದು ಕಡಿಮೆ, ಆದರೆ ಕೃಷ್ಣೇಗೌಡರ ನಿಗರ್ವಿ ಮೃದು ಹೃದಯ ಇವರನ್ನು ಸಾಹಿತ್ಯ ಕ್ಷೇತ್ರಕ್ಕೆ ಎಳೆದು ತಂದಿದ್ದು ತಮ್ಮ ಭಾವನೆಗಳು ಮತ್ತು ಅನುಭವಗಳನ್ನು ಕವನ ರಚಿಸುವ ಮೂಲಕ  ಸಾಹಿತ್ಯ ಲೋಕಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದರು ಎಂದು ಸ್ಮರಿಸಿದರು.


ಜಿಲ್ಲಾ ಕಸಾಪ ಅಧ್ಯಕ್ಷ ಸಿಂಲಿಂ ನಾಗರಾಜು ಮಾತನಾಡಿ ಕೃಷ್ಣೇಗೌಡರು ಸ್ನೇಹ ಜೀವಿಯಾಗಿದ್ದವರು, ನಾಡು ನುಡಿಯ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದವರು, ತಾಲ್ಲೂಕು ಕಸಾಪ ಅಧ್ಯಕ್ಷ ರಾಗಿದ್ದ ಸಂದರ್ಭದಲ್ಲಿ ಅವರ ಕಾರ್ಯಕ್ರಮಗಳು ಮತ್ತು ಸಂಘಟನೆ ನೆನಪಿನಲ್ಲಿಯುಳಿವಂತವು ಎಂದು ನುಡಿದರು.


ಹಿರಿಯ ಪತ್ರಕರ್ತ ಶಿವಮಾದು, ಹಿರಿಯ ಸಾಹಿತಿ ಬೊಮ್ಮನಾಯಕನಹಳ್ಳಿ ಕೃಷ್ಣಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಬಿ ಚಲುವರಾಜು ಮತ್ತು ಅಧ್ಯಾಪಕ ರಾಜಶೇಖರ್ ಮಾತನಾಡಿದರು.


ಶ್ರದ್ಧಾಂಜಲಿ ಸಭೆಯಲ್ಲಿ ಶ್ರೀನಿವಾಸ ರಾಂಪುರ, ಮಂಜೇಶ್ ಬಾಬು, ಗೋ ರಾ ಶ್ರೀನಿವಾಸ, ಚುಟುಕು ಕವಿ ನಾಗರಾಜು, ಮಂಜು ಸೇರಿದಂತೆ ಅನೇಕರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮಿ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑