Tel: 7676775624 | Mail: info@yellowandred.in

Language: EN KAN

    Follow us :


ಹಾಡಹಗಲೇ ಸಾರ್ವಜನಿಕರ ಎದುರು ಯುವಕನನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು

Posted date: 07 Aug, 2019

Powered by:     Yellow and Red

ಹಾಡಹಗಲೇ ಸಾರ್ವಜನಿಕರ ಎದುರು ಯುವಕನನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು

ಮಂಡ್ಯ/ಮಳವಳ್ಳಿ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರಿನಲ್ಲಿ ಇಂದು ಬೆಳಿಗ್ಗೆ ೧೦:೪೦ ರ ಸಮಯದಲ್ಲಿ ಕೆಲ ದುಷ್ಕರ್ಮಿಗಳು ಅಂಗಡಿಯೊಳಗೆ ನುಗ್ಗಿ ಯುವಕನೋರ್ವನನ್ನು ನೂರಾರು ಸಾರ್ವಜನಿಕರ ಎದುರೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.


ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ, ಕೊಲೆಯಾದ ವ್ಯಕ್ತಿ ಕನಕಪುರ ತಾಲ್ಲೂಕಿನ ಕಾಳೇಗೌಡನದೊಡ್ಡಿ ಗ್ರಾಮದ ಚಿಕ್ಕಮಾದಯ್ಯನ ಪುತ್ರ ರಾಮು (೩೦) ಎಂದು ಗುರುತಿಸಲಾಗಿದ್ದು, ಈತ ಕಳೆದ ಹದಿಮೂರು ವರ್ಷಗಳಿಂದ ಬಿ ಕೆ ಪ್ರಾವಿಷನ್ ಸ್ಟೋರ್ ನಲ್ಲಿ ಸಹಾಯಕನಾಗಿ ಕೆಲಸ ನಿರ್ವಹಿಸುತಿದ್ದುದಾಗಿ ತಿಳಿದುಬಂದಿದೆ.


ನಾಲ್ಕೈದು ದಿನಗಳ ಹಿಂದೆ ವೈನ್ ಶಾಪ್ ಬಳಿ‌ ಹಣಕಾಸು ವಹಿವಾಟಿನ ಬಗ್ಗೆ ಸಣ್ಣ ಗಲಾಟೆ ನಡೆದಿದ್ದು ಆ ಗಲಾಟೆ ನಡೆಸಿದ ವ್ಯಕ್ತಿಯೇ ಇಂದು ನಾಲ್ಕೈದು ಮಂದಿ ಮುಸುಕುಧಾರಿಗಳೊಂದಿಗೆ ಆಗಮಿಸಿ ಮಚ್ಚು ಲಾಂಗುಗಳಂತಹ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಇರಿದು ಕೊಂದಿರುವುದಾಗಿ ವಿಶ್ವಸನೀಯ ಮೂಲಗಳು ತಿಳಿಸಿವೆ.


ಪ್ರಮುಖ ಆರೋಪಿ ಈ ಹಿಂದೆಯೂ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಳಿವು ದೊರೆತಿದ್ದು, ಪಲಾಯನಗೈದಿರುವ ಎಲ್ಲಾ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವುದಾಗಿ ಡಿವೈಎಸ್ಪಿ ಶೈಲೇಂದ್ರ ರವರು ತಿಳಿಸಿದ್ದಾರೆ.

ವೃತ್ತ ನಿರೀಕ್ಷಕ ಮಂಜುನಾಥ, ಸಬ್ ಇನ್ಸ್‌ಪೆಕ್ಟರ್ ಶಿವರುದ್ರ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಬಂದೋಬಸ್ತ್ ನಿಯೋಜನೆಗೊಳಿಸಿದ್ದು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.


ಹಾಡಹಗಲಿನ ಜನಜಂಗುಳಿಯ ನಡುವೆ ನಡೆದ ಈ‌ ಮಾರಣ ಹೋಮ ಸಾರ್ವಜನಿಕರಲ್ಲಿ ಆತಂಕ‌ಮೂಡಿಸಿದ್ದು ಪೋಲಿಸ್ ಇಲಾಖೆಯ ಅಧಿಕಾರಿಗಳು ಇಂತಹ ದುಷ್ಕರ್ಮಿಗಳನ್ಮು ಮಟ್ಟಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑