ತಾಳೆಯೋಲೆ ೦೭: ಗಂಜಿ/ಅಂಬಲಿ ಮತ್ತು ತುಪ್ಪವನ್ನು ಬೆಳಗಿನ ಉಪಹಾರಕ್ಕೆ ಉಪಯೋಗಿಸಬೇಕೆಂದು ಏಕೆ ಹೇಳುವರು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಗಂಜಿ/ಅಂಬಲಿ ಮತ್ತು ತುಪ್ಪವನ್ನು ಬೆಳಗಿನ ಉಪಹಾರಕ್ಕೆ ಉಪಯೋಗಿಸಬೇಕೆಂದು ಏಕೆ ಹೇಳುವರು ?
ಪ್ರಾಚೀನ ಭಾರತೀಯರು ಬೆಳಗಿನ ಉಪಹಾರಕ್ಕೆ ಗಂಜಿ ಅಂಬಲಿ ಜೊತೆಗೆ ತುಪ್ಪವನ್ನು ತೆಗೆದುಕೊಳ್ಳುವುದಕ್ಕೆ ಪ್ರಾಧಾನ್ಯತೆಯನ್ನು ಕೊಡುತ್ತಿದ್ದರು. ಅವರಿಗೆ ಈ ವಿಷಯದ ಬಗ್ಗೆ ಶಾಸ್ತ್ರೀಯವಾದ ತಿಳುವಳಿಕೆ ಇತ್ತು. ನಮ್ಮ ಹೊಸ ತಲೆಮಾರಿನವರು ಮಾತ್ರ ಆಧುನಿಕ ಶೈಲಿಯಿಂದ ಕೂಡಿದ ಆಹಾರ ಪದಾರ್ಥಗಳನ್ನು ಇಷ್ಟಪಡುತ್ತಾರೆ. ಈಗಿನ ಕಾಲದವರು ಗಂಜಿ, ತುಪ್ಪ ಸೊಪ್ಪುಗಳು ಮತ್ತು ಕಾಳುಗಳ ಕಡೆ ಹೆಚ್ಚು ಗಮನ ಹರಿಸುತ್ತಿಲ್ಲ.
ಯಾರು ಗಂಜಿ ಅಥವಾ ಅಂಬಲಿ ಜೊತೆಗೆ ತುಪ್ಪವನ್ನು ಬೆಳಗಿನ ಉಪಹಾರಕ್ಕಾಗಿ ಉಪಯೋಗಿಸುವರೋ ಅವರು ಬೇಳೆಕಾಳುಗಳು ಮತ್ತು ಎಲೆಗಳಿಂದ ಕೂಡಿದ ತರಕಾರಿಗಳನ್ನು ಉಪಯೋಗಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
ಸಸ್ಯಹಾರ ಊಟವು ಸತ್ವ ಗುಣಗಳನ್ನು ಹೊಂದಿದೆ, ಅನ್ನದ ಗಂಜಿ ಅಥವಾ ಅಂಬಲಿಯನ್ನು ಉಪಯೋಗಿಸಿದರೆ ರಕ್ತದಲ್ಲಿರುವ ವಿಷ ಪದಾರ್ಥಗಳನ್ನು ಮತ್ತು ಕೊಳೆಯನ್ನು ತೊಲಗಿಸುತ್ತದೆ. ಹಾಗೆಯೇ ಅಂಬಲಿಯಲ್ಲಿರುವ ವಿಟಮಿನ್ ಗಳು ಶರೀರದ ಆರೋಗ್ಯವನ್ನು ರಕ್ಷಿಸುತ್ತದೆ.
ತುಪ್ಪದಲ್ಲಿ ರಂಜಕ ಮತ್ತು ಕೊಬ್ಬು ಪದಾರ್ಥ ಹೆಚ್ಚಿದ್ದರೆ ಬೇಳೆ ಕಾಳುಗಳಲ್ಲಿ ಪ್ರೋಟೀನ್ ಗಳು ಇರುವವು. ಗಂಜಿ ಇಲ್ಲವೇ ಅಂಬಲಿಯನ್ನು ಕೂಡಿದ ಅನ್ನ, ಹಿಟ್ಟಿನ ಪದಾರ್ಥಗಳನ್ನು ಹೆಚ್ಚಾಗಿ ಆಹಾರವಾಗಿ ಉಪಯೋಗಿಸಬೇಕು.
ಈ ರೀತಿಯಾಗಿ ನಮ್ಮ ಭಾರತೀಯರು ಸಮತೋಲನ ಆಹಾರವನ್ನು ಉಂಡು ದೃಢವಾದ ಆರೋಗ್ಯಕರವಾದ ಶರೀರವನ್ನು ಹೊಂದಿದ್ದವರಾಗಿದ್ದರು.
ಸಂಗ್ರಹ ಮತ್ತು ಪ್ರಸಾರ;
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು