ಹೋಟೆಲ್ ನಲ್ಲಿ ಕಳ್ಳತನ ದೂರು ದಾಖಲು
ಚನ್ನಪಟ್ಟಣ: ನಗರದ ಬೆಂಗಳೂರು ಮೈಸೂರು ಹೆದ್ದಾರಿಯ, ಪೋಲಿಸ್ ಠಾಣೆಯ ಕೂಗಳತೆಯ ದೂರದಲ್ಲಿರುವ *ಸಿಂಚನ ಹೋಟೆಲ್* ನಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದಿದೆ ಎಂದು ಮಾಲೀಕ ಲೋಕೇಶ್ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಹಾರೆಯಿಂದ ಹಿಂದಿನ ಬಾಗಿಲನ್ನು ಮೀಟಿ ಒಳಗೆ ನುಗ್ಗಿರುವ ದುಷ್ಕರ್ಮಿಗಳು ಗಲ್ಲಾ ಪೆಟ್ಟಿಗೆಯಲ್ಲಿ ಇಟ್ಟಿದ್ದ ೯,೪೦೦ ರೂಪಾಯಿಗಳನ್ನು ದೋಚಿರುವುದಲ್ಲದೆ, ನ್ಯಾಯಾಲಯದ ಹರಾಜಿನಲ್ಲಿ ಖರೀದಿಸಿದ್ದ ಚೂರಿಯಿಂದ ಅಡುಗೆ ಎಣ್ಣೆ ಪ್ಯಾಕೆಟ್ ಗಳನ್ನು ಚುಚ್ಚಿ ಚಲ್ಲಿರುವುದಲ್ಲದೆ ಅವರು ತಂದಿದ್ದ ಹರಿತವಾದ ಕುಡುಗೋಲು (ಮಚ್ಚು) ಬಿಟ್ಟು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹೆದ್ದಾರಿ ಅಗಲೀಕರಣದ ಸಮಯದಲ್ಲಿ ಹೋಟೆಲ್ ತೆರವುಗೊಳಿಸುವ ಸಂದರ್ಭ ಮಾಲೀಕರು ಮತ್ತು ಬಾಡಿಗೆದಾರರಿಗೆ ಕಲಹ ಉಂಟಾಗಿದ್ದು ನ್ಯಾಯಾಲಯದಲ್ಲಿ ದಾವೆ ಇದ್ದು ಶೀಘ್ರವಾಗಿ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕೆಂದು ದೂರು ನೀಡಲಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು