ಇಂದಿನಿಂದ ಹೆಲ್ಮೆಟ್ ಕಡ್ಡಾಯ, ತಪ್ಪಿದರೆ ಭಾರಿ ದಂಡ ಡಿಎಲ್ ರದ್ದು.
ರಾಮನಗರ: ಆಗಸ್ಟ್ ೧೫ ಭಾರತ ಸ್ವತಂತ್ರವಾದ ದಿನ, ಈ ಸ್ವಾತಂತ್ರ್ಯ ಬ್ರಿಟೀಷರಿಂದ ಮುಕ್ತಿ ದೊರಕಿಸಿ ಭಾರತೀಯರೆಲ್ಲರೂ ಸ್ವತಂತ್ರವಾಗಿ ಬದುಕಲು ಅನುವು ಮಾಡಿಕೊಟ್ಟಿತು. ಅದೇ ರೀತಿ ಜಿಲ್ಲೆಯಲ್ಲಿ ಪೋಲಿಸರು ದ್ವಿಚಕ್ರ ವಾಹನ ಸವಾರರಿಗೆ ಇಂದಿನಿಂದಲೇ ಹೆಲ್ಮೆಟ್ ಕಡ್ಡಾಯಗೊಳಿಸಿ ತಮ್ಮ ಜೀವವನ್ನು ಆಯಸ್ಸು ಪೂರ್ಣ ಸ್ವತಂತ್ರವಾಗಿರುವಂತೆ ಕಾಪಾಡಲು ಕ್ರಮ ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಶೇಕಡಾ ನಲವತ್ತರಷ್ಟು ಸಾವು ಹೆಚ್ಚಾಗಿದ್ದು ಅತ್ಯಮೂಲ್ಯವಾದ ಅವರ ಪ್ರಾಣವನ್ನು ಕಾಪಾಡಿಕೊಂಡು ಕುಟುಂಬಕ್ಕೆ ಆಸರೆಯಾಗಿರಬೇಕೆಂದರೆ ಅವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅನೂಪ್ ಎ ಶೆಟ್ಟಿ ಯವರು ತಿಳಿಸಿದ್ದಾರೆ.
*ಹೆಲ್ಮೆಟ್ ಧರಿಸದ ಸವಾರರಿಗೆ ಮೊದಲು ಈಗಿನ ದಂಡ ೫೦೦ ರೂಪಾಯಿಗಳು, ಎರಡನೇ ಬಾರಿಗೆ ೧,೦೦೦ ರೂಪಾಯಿ ದಂಡದ ಜೊತೆಗೆ ಚಾಲನಾ ಪರವಾನಗಿಯನ್ನು ರದ್ದು ಪಡಿಸಲಾಗುವುದು, ದ್ವಿಚಕ್ರ ವಾಹನ ಸವಾರರಲ್ಲದೆ ಎಲ್ಲಾ ವಾಹನಗಳ ಏಕಮುಖ ಸಂಚಾರ, ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದು, ಶಾಲಾ ಕಾಲೇಜುಗಳ ಬಸ್ಸುಗಳಲ್ಲಿ ಹೆಚ್ಚು ಮಕ್ಕಳನ್ನು ತುಂಬುವುದು, ಪ್ರಯಾಣಿಕರ ಆಟೋಗಳಲ್ಲಿ ಸರಕು ಸಾಗಣೆ ಮತ್ತು ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವುದು, ಸಮವಸ್ತ್ರ ಧರಿಸದಿರುವುದು ಮತ್ತು ವಾಹನಗಳ ವಿಮೆ, ದಾಖಲೆಗಳು ಸಮರ್ಪಕವಾಗಿ ಇಲ್ಲದಿದ್ದರೂ ಮೊದಲಿಗೆ ದಂಡ ನಂತರ ಪರವಾನಗಿ ರದ್ದು ಮಾಡಲಾಗುವುದು ಎಂದು ತಿಳಿಸಿದ್ದಾರೆ.*
*ಚನ್ನಪಟ್ಟಣದ ವರದಿ:*
ನಗರವಷ್ಟೇ ಅಲ್ಲದೆ ಗ್ರಾಮೀಣ ಭಾಗವೂ ಸೇರಿದಂತೆ ಎಲ್ಲಾ ಕಡೆಯೂ ಹೆಲ್ಮೆಟ್ ಕಡ್ಡಾಯ ಮಾಡಲಾಗುವುದು, ಮೊದಲಿಗೆ ಸವಾರರಿಗೆ ಮಾತ್ರ ಕಡ್ಡಾಯ ಮಾಡಿ ಹಂತಹಂತವಾಗಿ ಆರು ತಿಂಗಳೊಳಗಾಗಿ ಹಿಂಬದಿ ಸವಾರರಿಗೂ ಕಡ್ಡಾಯ ಮಾಡುತ್ತೇವೆ, ಯಾವ ಮುಲಾಜಿಗೂ ಒಳಗಾಗದೆ ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನು ಪಾಲಿಸಲಾಗುವುದು.
ಈ ದಿನ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಮೊದಲಿಗೆ ಅರಿವು ಮೂಡಿಸಲಾಗುವುದು ನಂತರ ಕಠಿಣ ಕ್ರಮ ಕೈಗೊಳ್ಳಲು ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೂ ಈಗಾಗಲೇ ಸೂಚಿಸಲಾಗಿದೆ, ಹಾಗೂ ಸಾರ್ವಕನಿಕರ ಗಮನಕ್ಕೂ ಆಟೋ ಪ್ರಚಾರದ ಮೂಲಕ ತಿಳಿಸಲಾಗಿದೆ.
*ಶಿವಕುಮಾರ್ ಚನ್ನಪಟ್ಟಣ ಸಂಚಾರಿ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು