ವಿದ್ಯಾರ್ಥಿಗಳ ನಡಿಗೆ ದೇಶದ ಏಳ್ಗೆಯ ಕಡೆಗೆ ತಹಶಿಲ್ದಾರ್ ಸುದರ್ಶನ್
ಚನ್ನಪಟ್ಟಣ: ಇಂದಿನ ವಿದ್ಯಾರ್ಥಿಗಳೇ ಮುಂದಿನ ರಾಷ್ಟ್ರ ನಿರ್ಮಾತೃಗಳು, ಇಂದಿನ ಶಿಸ್ತು, ಜೀವನದ ಮತ್ತು ದೇಶದ ಸಂಪತ್ತು, ತಮ್ಮ ಜೀವನದ ಶಕ್ತಿಯನ್ನು ಸದೃಢ ದೇಶ ಕಟ್ಟಲು ವಿನಿಯೋಗಿಸುವ ಮೂಲಕ ದೇಶದ ಏಳ್ಗೆಗೆ ಮೀಸಲಿಡಬೇಕೆಂದು ತಾಲ್ಲೂಕಿನ ದಂಡಾಧಿಕಾರಿ ಸುದರ್ಶನ್ ಕರೆ ನೀಡಿದರು.
ಅವರು ನಗರಸಭೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಎಪ್ಪತ್ಮೂರನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.
ನಗರಸಭೆಯ ಪ್ರಭಾರ ಆಯುಕ್ತ ಮಾಯಣ್ಣಗೌಡ ಮಾತನಾಡಿ ನಮ್ಮ ದೇಶಕ್ಕೆ ಹಲವಾರು ಚಳವಳಿಗಳ ಮೂಲಕ ಸ್ವಾತಂತ್ರ್ಯ ದೊರೆಯಿತು, ಇಂದು ನಾವೆಲ್ಲರೂ ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ, ಈ ಸ್ವಾತಂತ್ರ್ಯ ವನ್ನು ಅನುಭವಿಸುತ್ತಿರುವ ನಾವು ಧನ್ಯರು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ರಾಮಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು, ದೈಹಿಕ ಪರೀವೀಕ್ಷಕ ನರಸಿಂಹಯ್ಯ, ನಗರಸಭೆಯ ಅಧಿಕಾರಿ ವರ್ಗ, ಹಲವಾರು ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿ ವೃಂದ ಪಾಲ್ಗೊಂಡಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು