ಆಂಜನೇಯ ದೇವಾಲಯದಲ್ಲಿ ಹುಂಡಿ ದರೋಡೆ
ಚನ್ನಪಟ್ಟಣ: ನಗರದ ಕೋದಂಡರಾಮ ಬಡಾವಣೆಯ ಶ್ರೀ ರಾಮ ಮಂದಿರ ಹಾಗೂ ಆಂಜನೇಯ ದೇವಾಲಯದಲ್ಲಿ ಇಂದು ಮುಂಜಾನೆ ಹುಂಡಿ ಹೊಡೆದು ಹಣ ದೋಚಿದ್ದು ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದೇ ವರ್ಷದ ಜನವರಿ ತಿಂಗಳಲ್ಲಿ ಹುಂಡಿ ಹೊಡೆಯಲು ವಿಫಲ ಪ್ರಯತ್ನ ನಡೆದಿದ್ದು ಹೊಡೆಯಲಾಗದೆ ಬಿಟ್ಟು ಹೋಗಿದ್ದರು, ಅದೇ ತಂಡ ಈ ಬಾರಿ ವ್ಯವಸ್ಥಿತವಾಗಿ ಆಯುಧಗಳ ಮೂಲಕ ಹುಂಡಿ ಹೊಡೆದಿದ್ದು ನಲವತ್ತರಿಂದ ಐವತ್ತು ಸಾವಿರ ಹಣ ದೋಚಿರುವ ಸಾಧ್ಯತೆ ಇದೆ ಎಂದು ದೇವಾಲಯದ ಪುರೋಹಿತರಾದ ಚಂದ್ರಶೇಖರ ಆರಾಧ್ಯ ತಿಳಿಸಿದರು.
ಕಳೆದ ಬಾರಿ ವಿಫಲ ಯತ್ನ ನಡೆದಾಗಲೇ ಪೋಲಿಸರು ಎಚ್ಚೆತ್ತುಕೊಳ್ಳಬೇಕಾಗಿತ್ತು, ಇತ್ತೀಚಿಗೆ ನಗರದಲ್ಲಿ ದೇವಾಲಯ, ಕಾರು, ಬೈಕ್ ಗಳು ಸೇರಿದಂತೆ ಅನೇಕ ವಾಹನಗಳ ಮತ್ತು ಮೊಬೈಲ್ ಕಳ್ಳರು ನಗರದಲ್ಲಿ ಹೆಚ್ಚಾಗಿದ್ದು ಪೋಲಿಸರು ಶೀಘ್ರವಾಗಿ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಉಪಾಧ್ಯಕ್ಷ ಶ್ಯಾಮ್ ಕುಮಾರ್ ಆಗ್ರಹಿಸಿದರು.
*ನಗರದ ಎಲ್ಲಾ ಪೋಲೀಸರು ಕಳಪೆ ಹೆಲ್ಮೆಟ್ ಹಾಕಿಸುವುದರಲ್ಲೇ ತಲ್ಲೀನರಾಗಿದ್ದು ಇನ್ನಿತರ ಅಪರಾಧಗಳು ನಡೆಯಲು ......???*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು