ಕಾಡಾನೆ ದಾಳಿ ಬೆಳೆ ನಾಶ
ಚನ್ನಪಟ್ಟಣ: ತಾಲ್ಲೂಕಿನ ಬೆಂಗಳೂರು ಮೈಸೂರು ಹೆದ್ದಾರಿಯ ಕೆಂಗಲ್ ದೇವಾಲಯದ ಮುಂಭಾಗವಿರುವ ಜಾನಪದ ಲೋಕದ ಆಡಳಿತಾಧಿಕಾರಿ ರುದ್ರಪ್ಪ ನವರ ತೋಟಕ್ಕೆ ನುಗ್ಗಿದ ಒಂಟಿ ಸಲಗವೊಂದು ತಂತಿ ಬೇಲಿ ಮುರಿದು ನುಗ್ಗಿ ಬಾಳೆ ತೋಟವನ್ನು ತುಳಿದು ನಾಶ ಮಾಡಿದೆ.
ಜಿಲ್ಲಾಧಿಕಾರಿಗಳ ಮನೆಯ ಹಿಂಭಾಗದಿಂದ ಬಂದ ಸಲಗವು ಸಸ್ಯೋಧ್ಯಾನ ದ ಮೂಲಕ ಬಾಳೆ ತೋಟ ಪ್ರವೇಶಿಸಿ ಹಲಸಿನ ಕಾಯಿಗಳನ್ನು ಕಿತ್ತು ತಿಂದು ಬಾಳೆ ಗಿಡಗಳನ್ನು ಮುರಿದು ಹಾಕಿದ್ದು ಅಪಾರ ಬೆಳೆ ನಷ್ಟವಾಗಿದೆ.
ತಾಲ್ಲೂಕಿನಾದ್ಯಂತ ಗಜಪಡೆ ಹಾವಳಿ ತೀವ್ರವಾಗಿದ್ದು ಶಾನುಭೋಗನಹಳ್ಳಿ, ಬಿ ವಿ ಹಳ್ಳಿ, ಸಿಂಗರಾಜಪುರ ಸೇರಿದಂತೆ ಅನೇಕ ಕಡೆ ದಾಳಿ ಮಾಡುತ್ತಲೇ ಇದ್ದು ಇತ್ತೀಚೆಗೆ ನಗರದ ಸಮೀಪವೂ ಬಂದು ಹೋಗುತ್ತಿವೆ, ಅರಣ್ಯ ಇಲಾಖೆಯೂ ಶಾಶ್ವತ ಪರಿಹಾರ ಹುಡುಕದೆ ಬಂದಾಗ ಓಡಿಸುವುದು ಇಲ್ಲದಾಗ ಸುಮ್ಮನಿರುವುದಕ್ಕಷ್ಟೇ ಸೀಮಿತವಾಗಿರುವುದು ದುರದೃಷ್ಟಕರ ಎಂದು ತೋಟದ ಮಾಲಿಕ ರುದ್ರಪ್ಪ ಬೇಸರ ವ್ಯಕ್ತಪಡಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು