Tel: 7676775624 | Mail: info@yellowandred.in

Language: EN KAN

    Follow us :


ಹೆಲ್ಮೆಟ್, ಸೀಟ್ ಬೆಲ್ಟ್ ಜೀವ ರಕ್ಷಕ : ನ್ಯಾ. ಪ್ರಕಾಶ್ ಎಲ್ ನಾಡಿಗೇರ್

Posted date: 07 Feb, 2018

Powered by:     Yellow and Red

ಹೆಲ್ಮೆಟ್, ಸೀಟ್ ಬೆಲ್ಟ್ ಜೀವ ರಕ್ಷಕ : ನ್ಯಾ. ಪ್ರಕಾಶ್ ಎಲ್ ನಾಡಿಗೇರ್

ರಾಮನಗರ : ರಸ್ತೆ ಅಪಘಾತಗಳಲ್ಲಿ ಸಾವು-ನೋವುಗಳಿಂದ ರಕ್ಷಿಸಿಕೊಳ್ಳಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಮುಖ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಪ್ರಕಾಶ್ ಎಲ್ ನಾಡಿಗೇರ್ ಅವರು ಅಭಿಪ್ರಾಯಪಟ್ಟರು.

ಅವರು ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಮನಗರ ಸಂಚಾರಿ ಪೊಲೀಸ್ ಠಾಣೆ, ಜಿಲ್ಲಾ ವಕೀಲರ ಸಂಘ ಹಾಗೂ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಹಾಕುವ ಬಗ್ಗೆ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಲ್ಮೆಟ್ ಜೀವ ರಕ್ಷಕ ಕವಚವಾಗಿದೆ, ಅದನ್ನು ಕಡ್ಡಾಯ ಮಾಡಿರುವುದು ನಮ್ಮ ರಕ್ಷಣೆಗಾಗಿ, ಯಾವುದೇ ತರಹದ ದ್ವಿಚಕ್ರ ವಾಹನವನ್ನು ಚಲಿಸುವ ಮುನ್ನ ಹೆಲ್ಮೆಟ್‍ನ್ನು ಧರಿಸಿ ಸುರಕ್ಷಿತವಾಗಿ ವಾಹನವನ್ನು ಚಲಾಯಿಸಬೇಕು ಹಾಗೂ ಕಾರುಗಳನ್ನು ಬಳಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು,  ಸಾರ್ವಜನಿಕರಿಗೆ ಜನರಿಗೆ ಉಪಯೋಗವಿಲ್ಲದೆ, ಹೊರೆಯಾಗುವ ಕಾನೂನುಗಳಿಗೆ ನ್ಯಾಯಾಲಯದಲ್ಲಿ ಮಾನ್ಯತೆ ದೊರೆಯುವುದಿಲ್ಲ ಎಂದು ಅವರು ಹೇಳಿದರು.
ಕಾರುಗಳಲ್ಲಿ ತಂತ್ರಜ್ಞಾನ ಬಳಸಲಾಗುತ್ತಿದೆ, ಸೀಟ್ ಬೆಲ್ಟ್ ಹಾಕಿಕೊಳ್ಳದೆ ಇದ್ದಲ್ಲಿ ಜೀವ ರಕ್ಷಣ ಏರ್ ಬ್ಯಾಗ್ ತೆರೆದುಕೊಳ್ಳುವುದಿಲ್ಲ. ನಮ್ಮ ಜೀವ ರಕ್ಷಣೆ ನಮ್ಮ ಕೈಯಲ್ಲೇ ಇದೆ. ಜಾಗರೂಕತೆ ವಹಿಸಿದರೆ ಸಾಕು. ಈ ಬಗ್ಗೆ ಸಾರ್ವಜನಿಕರು  ಆತ್ಮವಲೋಕನ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್ ಅವರು ಮಾತನಾಡಿ,  ಜಿಲ್ಲೆಯಲ್ಲಿ ವರ್ಷಕ್ಕೆ 400ಕ್ಕೂ ಅಧಿಕ ಅಪಘಾತಗಳು ಸಂಭವಿಸುತ್ತವೆ, ಇವುಗಳಲ್ಲಿ ಬಹುತೇಕ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದರಿಂದ ನಡೆಯುತ್ತವೆ. ಹೆಲ್ಮೆಟ್‍ನ್ನು ಧರಿಸದೆ ಹಲವರು ರಸ್ತೆ ಅಪಘಾತದಲ್ಲಿ ಮರಣ ಹೊಂದುತ್ತಿದ್ದಾರೆ, ವಾಹನವನ್ನು ಚಲಿಸುವಾಗ ವಾಹನದ ಎಲ್ಲಾ ದಾಖಲೆಗಳನ್ನು ಹೊಂದಿ ವಾಹವನ್ನು ಚಲಿಸುವುದು ಉತ್ತಮ, ಇಲ್ಲವಾದಲ್ಲಿ ಸÀರ್ಕಾರವು ಕಾನೂನಿನ ಪ್ರಕಾರ ದಂಡ ವಿಧಿಸಲು ಸೂಚಿಸಲಾಗಿದೆ  ಎಂದು ತಿಳಿಸಿದರು.ಹೆಲ್ಮೆಟ್ ಧರಿಸದ ಕಾರಣ ಹೆಚ್ಚಿನ ಸಂಖ್ಯೆಯ ದ್ವಿಚಕ್ರ ಸವಾರರು ಮೃತರಾಗುತ್ತಿರುವುದು ಕಂಡುಬಂದಿದೆ. ಹೆಲ್ಮೆಟ್ ದಂಢ ವಿಧಿಸುವುದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಎಂದರು.
ಆರ್‍ಟಿಒ ಗಂಗಾಧರ ಆಚಾರ್ ಉಪನ್ಯಾಸ ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕರಾದ ಸದಸ್ಯ ಕಾರ್ಯದರ್ಶಿ ಬಿ.ಎಸ್. ಹೊನ್ನಸ್ವಾಮಿ, ಡಿವೈಎಸ್ಪಿ ಎಂ.ಕೆ. ತಮ್ಮಯ್ಯ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಶಾಂತಪ್ಪ, ಉಪಾಧ್ಯಕ್ಷ ವಿ.ಪಿ. ರಮೇಶ್, ಸಿಪಿಐ ನವೀನ್, ಸಂಚಾರಿ ನಿರೀಕ್ಷರಾದ ನಂಜಪ್ಪ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. 
 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑