Tel: 7676775624 | Mail: info@yellowandred.in

Language: EN KAN

    Follow us :


ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ

Posted date: 21 Sep, 2019

Powered by:     Yellow and Red

ಅಕ್ಟೋಬರ್ ೨೧ ಉಪಚುನಾವಣೆ, ಅನರ್ಹ ಶಾಸಕರು ಗಡಗಡ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರದ ೧೭ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದ 

ಶಾಸಕರನ್ನು ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು.


ಈ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇರುವಾಗಲೇ ಚುನಾವಣೆ ಘೋಷಣೆ ಆಗಿದೆ. ಇದು ಅನರ್ಹ ಶಾಸಕರನ್ನು ಚಿಂತೆಗೀಡು ಮಾಡಿ ಸಂಕಷ್ಟ ಉಂಟು ಮಾಡಿದೆ.


ಚುನಾವಣಾ ಆಯೋಗವು ಮುಂದಿನ ತಿಂಗಳು ೨೧ ರಂದು ದಿನಾಂಕ ನಿಗದಿ ಮಾಡಿದ್ದು, ಒಂದೇ ಹಂತ ದಲ್ಲಿ ಚುನಾವಣೆ ನಡೆಯ ಲಿದೆ ಎಂದು ಚುನಾವಣಾ ಧಿಕಾರಿಗಳು ತಿಳಿಸಿದ್ದಾರೆ.


ಸೆಪ್ಟಂಬರ್ ೨೩ರಂದು ಅಧಿಸೂಚನೆ ಪ್ರಕಟವಾಗಿ, ಅದೇ ತಿಂಗಳ ೩೦ ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ವಾಗಿದ್ದು, ನಾಮಪತ್ರ ಹಿಂಪಡೆಯಲು  ಅಕ್ಟೋಬರ್ ೩ ರಂದು ಕೊನೆಯ ದಿನವಾಗಿರುತ್ತದೆ. ಇದೇ ತಿಂಗಳು ೨೧ಕ್ಕೆ ಚುನಾವಣೆ ನಡೆಯಲಿದ್ದು,  ೨೪ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.


ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ನ್ಯಾಯಾಲಯ ತಡೆ ನೀಡಿರುವುದರಿಂದ ಈ ಎರಡು ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿಲ್ಲ.


ಇದೇ ವೇಳೆ ಮಾತನಾಡಿದ ಚುನಾವಣಾ ಆಯೋಗದ ಮುಖ್ಯಸ್ಥ ಸಂಜೀವ್ ಕುಮಾರ್ ಶಾಸಕರಾಗಿ ಅನರ್ಹಗೊಂಡಿರುವವರು ಸ್ಪೀಕರ್ ರೂಲಿಂಗ್ ಪ್ರಕಾರ ೨೦೨೩ ರವರೆಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಒಂದು ವೇಳೆ ನ್ಯಾಯಾಲಯ ತಡೆಯಾಜ್ಞೆ ನೀಡಿದರೆ ಸ್ಪರ್ಧಿಸಲು ಅವಕಾಶ ಇದೆ.


ಗೋಕಾಕ್, ಅಥಣಿ, ರಾಣೆಬೆನ್ನೂರು, ಕಾಗವಾಡ, ಹಿರೆಕೆರೂರು, ವಿಜಯನಗರ, ಯಲ್ಲಾಪುರ, ಚಿಕ್ಕಾಬಳ್ಳಾಪುರ, ಹುಣಸೂರು, ಕೆ.ಆರ್ ಪೇಟೆ, ಹೊಸಕೋಟೆ , ಕೆ.ಆರ್ ಪುರಂ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ ಮತ್ತು ಶಿವಾಜಿನಗರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑