ತಾಳೆಯೋಲೆ ೫೮:ಗಂಧ ಲೇಪನವನ್ನು ನಡುವಿನ ಕೆಳಭಾಗದಲ್ಲಿ ಹಚ್ಚುವುದಿಲ್ಲವೇಕೆ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಗಂಧ ಲೇಪನವನ್ನು ನಡುವಿನ ಕೆಳಭಾಗದಲ್ಲಿ ಹಚ್ಚುವುದಿಲ್ಲವೇಕೆ ?
ಗಂಧಲೇಪನವನ್ನು ಧರಿಸುವುದು ಶುಭ ಸೂಚಕ. ಆದರೆ ಅದನ್ನು ನಡುವಿನ ಕೆಳಭಾಗದಲ್ಲಿ ಧರಿಸುವುದಿಲ್ಲ. ಹಾಗೆಯೇ ಚಿನ್ನವನ್ನು ಕಾಲಿಗೆ ಸರವನ್ನಾಗಿ ಧರಿಸಬಾರದೆಂಬ ನಿಯಮವೂ ಸಹ ಇದೆ. ಏಕೆಂದರೆ ಚಿನ್ನವೂ ಲಕ್ಷ್ಮಿ ನಿವಾಸವೆಂದು ತಿಳಿಯಪಡಿಸಿದೆ. ಇದರ ಹಿಂದೆ ಶಾಸ್ತ್ರೀಯ ಕಾರಣ ಅಡಗಿದೆ. *ಭಾರತೀಯ ವೈದ್ಯಶಾಸ್ತ್ರದ ಪ್ರಕಾರವಾಗಿ ಚಿನ್ನವನ್ನು ಪಾದಗಳಲ್ಲಿ ಧರಿಸುವುದರಿಂದ ಕೀಲುಗಳ ಖಾಯಿಲೆಗಳು ಬರುವ ಸಾಧ್ಯತೆ ಇದೆ.*
ದೈವಕ್ಕೆ ಪೂಜಿಸುವ ಗಂಧಲೇಪನ, ಕುಂಕುಮ ಮತ್ತು ವಿಭೂತಿ ನಡುವಿನ ಕೆಳಗಿನ ಭಾಗದಲ್ಲಿ ಧರಿಸಬಾರದೆಂದು ತಿಳಿಯಪಡಿಸಲಾಗಿದೆ. ಶಾಸ್ತ್ರೀಯ ವಾದವೆಂದರೆ *ಗಂಧಲೇಪನವು ಬಹಳ ತಣ್ಣಗಿನ ಗುಣವನ್ನು ಹೋಂದಿದ್ದು ಶರೀರಕ್ಕೆ ಹೆಚ್ಚಾಗಿ ಹಚ್ಚಿಕೊಳ್ಳುವುದರಿಂದ ಪುರುಷತ್ವವೂ ಕಡಿಮೆಯಾಗುವುದು* ನಿಸ್ಸಂಶಯದ ವಿಷಯವೇ ಆದ್ದರಿಂದ ಈ ನಿಯಮವನ್ನು ಹಿರಿಯರು ಸೂಚಿಸಿದ್ದಾರೆ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು