Tel: 7676775624 | Mail: info@yellowandred.in

Language: EN KAN

    Follow us :


ಕೆಂಪು (ರಕ್ತ) ಹುಣಸೆ ಗಾಬರಿಯಾಗಬೇಕಿಲ್ಲ. ಆಯುರ್ವೇದದಲ್ಲಿ ಇದರ ಮಹತ್ವ ಅಪಾರ*

Posted date: 17 Oct, 2019

Powered by:     Yellow and Red

ಕೆಂಪು (ರಕ್ತ) ಹುಣಸೆ ಗಾಬರಿಯಾಗಬೇಕಿಲ್ಲ. ಆಯುರ್ವೇದದಲ್ಲಿ ಇದರ ಮಹತ್ವ ಅಪಾರ*

ಎನ್ ಆರ್ ಕಾಲೋನಿಯ ತೋಟವೊಂದರಲ್ಲಿರುವ ಕೆಂಪು ಹುಣಸೆ ಹಣ್ಣಿನ ಮರ.

ಚನ್ನಪಟ್ಟಣ: ತಾಲ್ಲೂಕಿನ ಬ್ರಹ್ಮಣೀಪುರ ದಾಖಲೆಯ ಎನ್ ಆರ್ ಕಾಲೋನಿಯ ತೋಟವೊಂದರ ಹುಣಸೆ ಮರದಲ್ಲಿ ಬಿಟ್ಟಿರುವ ಹುಣಸೆ ಕಾಯಿಯನ್ನು ಬಿಡಿಸಿದರೆ ರಕ್ರದಂತೆ ರಸ ಒಸರುತ್ತದೆ ! ಯಾರೂ ನೋಡಿರದ ವಿಷ್ಮಯ ! ಇದು ಯಾವುದೋ ದೆವರು ಇಲ್ಲವೇ ದೆವ್ವದ ಶಾಪವೇ ಎಂಬ ಊಹಾಪೋಹಗಳು ಬಂದ ಹಿನ್ನೆಲೆಯಲ್ಲಿ ಅದರ ಬೆನ್ನತ್ತಿ ಹೋಗಿ ಅದರ ಹಿನ್ನೆಲೆ ಮತ್ತು ಉಪಯೋಗಗಳ ಬಗ್ಗೆ ಕೆದಕಿದಾಗ ಸಿಕ್ಕ ಮಾಹಿತಿ ಎಂದರೆ ಅದೊಂದು ಅತ್ಯದ್ಭುತ ಔಷಧೀಯ ಗುಣಗಳುಳ್ಳ ಮರ ಎಂದು ತಿಳಿದುಬಂತು. ಇದರ ಬಗ್ಗೆ ತಿಳಿದುಕೊಳ್ಳಲು ಸಂಪೂರ್ಣವಾಗಿ ಓದಿ;*


ಸದ್ಯ ನಮ್ಮ ಮತ್ತು ನಮ್ಮ ಹಿರಿಯ ಪೀಳಿಗೆಯವರಿಗೆ ಅದರಲ್ಲೂ ನಮ್ಮ ಜಿಲ್ಲೆಗೆ ಸಂಬಂಧಿಸಿದಂತೆ ಇದರ ಮಾಹಿತಿ ಮತ್ತು ಮರಗಳ ಸಂಖ್ಯೆ ಬಹಳ ಕಡಿಮೆ. ಭಾಷಾ ಎಂಬುವ ರ ತೋಟದಲ್ಲಿ ತಾನೆ ಹುಟ್ಟಿರುವ (ವಲಸೆ ಹಕ್ಕಿಯ ಪಿಕ್ಕೆಯಿಂದ ಇರಬಹುದು) ಈ ಹುಣಸೆ ಮರದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಕಡಿಮೆ ಕಾಯಿ ಬಿಡುತ್ತಿದೆ, ಫಸಲು ಹೆಚ್ಚಾಗಿ ಬಾರದ್ದರಿಂದ ಯಾರೂ ಸಹ ಇದರ ಗೋಜಿಗೆ ಹೋಗಿರಲಿಲ್ಲ, ಕೆಲಸಗಾರರು ಬಿಡುವಿನ ವೇಳೆಯಲ್ಲಿ ಇದನ್ನು ಹಿಚುಕಿ ನೋಡಿದಾಗಲೇ ಗಾಬರಿಗೊಂಡು ವಿಷಯ ಹರಿದಾಡಿ ಈ ಆವಾಂತರಕ್ಕೆ ಕಾರಣವಾಗಿದೆ.


*ಹುಣಸೆಯಲ್ಲಿ ಹಲವು ವಿಧ*


ಹುಣಸೆಯಲ್ಲಿ ಹುಣಸೆ, ಮಲೆನಾಡ ಹುಣಸೆ, ಕೆಂಪು ಹುಣಸೆಗಳೆಂದು ಬೇರೆಬೇರೆ ತಳಿಗಳ ಪ್ರಬೇಧಗಳಿದ್ದು, ಎಲ್ಲವೂ ಉಪಯುಕ್ತವಾಗಿವೆ. ನಿತ್ಯೋಪಯೋಗಿ ಹುಣಸೆ ಹಣ್ಣಿನ ಮರಗಳು ಅಲ್ಲಲ್ಲಿ ಕಂಡು ಬರುತ್ತಿದ್ದರೂ ಬಹುಪಯೋಗಿ ಕೆಂಪು ಹುಣಸೆ ಮರಗಳು ವಿರಳವಾಗುತ್ತಿವೆ. ಶಿರಸಿ, ಸಿದ್ದಾಪುರ ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಕೆಂಪು ಹುಣಸೆ ಮರಗಳು ಗದಗ ಜಿಲ್ಲೆಯಲ್ಲಿ ಅಲ್ಲೋ ಇಲ್ಲೋ ತಾವಾಗಿಯೇ ಬೆಳೆದಿವೆ.


ಅನೇಕ ಜೀವವೈವಿಧ್ಯ ಹೊಂದಿರುವ ಕಪ್ಪತ್ತಗುಡ್ಡದಲ್ಲಿ ಕೆಂಪು ಹುಣಸೆ ಮರಗಳು ಕೆಲವು ಇವೆ. ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ನರ್ಸರಿಯಲ್ಲಿ ಅರಣ್ಯ ಇಲಾಖೆ ಎರಡು ಮರಗಳನ್ನು ಬೆಳೆಸಿದೆ. ಹಣ್ಣಿನ ಒಳ ತಿರುಳು ನೋಡಲು ಕೆಂಪಗೆ ರಕ್ತದ ಬಣ್ಣದಂತೆ ಕಾಣುವುದರಿಂದ ಇದನ್ನು ಕೆಲವು ಕಡೆಗಳಲ್ಲಿ ರಕ್ತ ಹುಣಸೆ ಎಂದು ಕರೆಯುತ್ತಾರೆ. ಈ ಹಣ್ಣು ಆಯುರ್ವೇದದಲ್ಲಿ ಅನೇಕ ವಿಧದಲ್ಲಿ ಬಳಕೆಗೆ ಉಪಯುಕ್ತವಾಗಿದ್ದರೂ ಆ ಬಗ್ಗೆ ರೈತರಿಗೆ ತಿಳುವಳಿಕೆ ಮೂಡಿಸದಿರುವುದರಿಂದ ಕೆಂಪು ಹುಣಸೆ ಹಣ್ಣಿನ ಮರಗಳನ್ನು ರೈತರು ವಾಣಿಜ್ಯ ದೃಷ್ಟಿಯಿಂದ ಬೆಳೆಯುತ್ತಿಲ್ಲ.


*ರುಚಿವೃದ್ಧಿಗೆ ಬಳಕೆ*


ಹುಣಸೆ ಹಣ್ಣು ಎಲ್ಲರಿಗೂ ಬೇಕಾದ ವಸ್ತುವಾಗಿದ್ದರೂ ಕೆಂಪು ಹುಣಸೆ ಅದಕ್ಕಿಂತ ಮಹತ್ವದ್ದು. *ಕರುಳಿಗೆ ಸಂಬಂಧಿಸಿದ ರೋಗಗಳು, ಕಾಮಾಲೆ, ಅತಿಸಾರ, ಪಿತ್ತ ವಿಕಾರ, ಕಾಡಿಗೆಮ್ಮು* ಮುಂತಾದ ರೋಗಗಳನ್ನು ಗುಣಪಡಿಸಲು ಕೆಂಪು ಹುಣಸೆ ಹಣ್ಣನ್ನು ಔಷಧಿಯಾಗಿ ಬಳಸಲಾಗುತ್ತಿದೆ.ಕೆಂಪು ಹುಣಸೆ ಹಣ್ಣಿನಲ್ಲಿ ಟರ್ಟಾರಿಕ್ ಆಸಿಡ್ ಇರುವುದರಿಂದ ಅದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಆಹಾರ ಹೆಚ್ಚು ರುಚಿಸುವಂತೆ ಮಾಡುವುದು ಇದರ ಮುಖ್ಯ ಗುಣವಾಗಿದೆ.


*ಸಹ ಕುಟುಂಬ*


ಸಮರಿಂದಸ್ ಇಂಡಿಕಸ್ ಹೆಸರಿನ ಕೆಂಪು ಹುಣಸೆ ಫಬೇಸಿಯಾ ಕುಟುಂಬಕ್ಕೆ ಸೇರಿದ್ದಾಗಿದೆ ಎಂದು ಹೇಳಲಾಗುತ್ತಿದೆ. ಅಡೆನ್ಸೊನಿಯಾ ಡೆಸಿಡಾಸಾ ಬಾಂಬೂಸಾಸಿಯಾ ಕುಟುಂಬಕ್ಕೆ ಸೇರಿದ್ದೆಂದು ಹೇಳಲಾಗುತ್ತದೆ. ಪಾರಿಭಾಷಿಕ ಶಬ್ದಗಳಲ್ಲಿ ಕೋರಕ್ಷಿ ಚಿಂಚಾ ಶೀತಫಲ ರಾವಣಾಮ್ಲಿಕಾ ಎಂದು ಕರೆಯಲಾಗುತ್ತದೆ. ಇದು ಶೇಧಜನಕವಾಗಿದ್ದು, ಶರೀರದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಬೆವರಿನ ಮೂಲಕ ಹೊರ ಹಾಕುತ್ತದೆ. ಕೀವು, ಮಲ ರೋಗಿಗಳಿಗೆ ಈ ಹಣ್ಣಿನ ರಸ ಕೊಡಲಾಗುತ್ತದೆ.


ಬಸ್‌ನಲ್ಲಿ ಸಂಚರಿಸುವಾಗ ವಾಂತಿ ಬರುವವರಿಗೆ, ಎತ್ತರಕ್ಕೆ ಏರಿದಾಗ ವಾಂತಿ ಮಾಡಿಕೊಳ್ಳುವವರಿಗೆ ವಾಂತಿ ಬರುವುದನ್ನು ತಡೆಗಟ್ಟಲು ಕೆಂಪು ಹುಣಸೆ ಹಣ್ಣು ತಿನ್ನಿಸಲಾಗುತ್ತದೆ. ಇನ್ನೂ ಅನೇಕ ರೀತಿಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಕೆಂಪು ಹುಣಸೆ ಹಣ್ಣು ಬಳಸಲಾಗುತ್ತದೆ.


*ಅರಣ್ಯ ಇಲಾಖೆ ಉತ್ತೇಜನ ನೀಡಲಿ;*


ಭೂಮಿಯ ಫಲವತ್ತತೆ ಮತ್ತು ಅಂತರ್ಜಲ ಕ್ಕೆ ಮಾರಕವಾಗುವಂತಹ ಗಿಡಗಳನ್ನು ಕಾಡಿನಲ್ಲಿ ಮತ್ತು ರೈತರ ಜಮೀನಿನಲ್ಲಿ ಬೆಳೆಸುವ ಅರಣ್ಯ ಇಲಾಖೆಯು ತೊಗಟೆ, ಎಲೆ ಮತ್ತು ಹಣ್ಣುಗಳಾದಿಯಾಗಿ ಔಷಧೋಪಚಾರಕ್ಕೆ ಬರುವುದರಿಂದ ಹಾಗೂ ಪಕ್ಷಿಗಳಿಗೂ ಉಪಯೋಗವಾಗುವುದರಿಂದ ಅಳಿವಿನಂಚಿನಲ್ಲಿರುವ ಕೆಂಪು ಹುಣಸೆ ಗಿಡಗಳನ್ನು ಬೆಳೆಸಲು ಮುಂದಡಿ ಇಡಬೇಕಾಗಿದೆ.


ಕೆಂಪು ಹುಣಸೆ ಬಗ್ಗೆ ಮಾಹಿತಿ;

*(-ಡಾ.ಎಸ್.ಬಿ.ನಿಡಗುಂದಿ,ಡಿಜಿಎಂ ಆಯುರ್ವೇದ ಮಹಾ ವಿದ್ಯಾಲಯ ಆಸ್ಪತ್ರೆ ಗದಗ.)*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑