Tel: 7676775624 | Mail: info@yellowandred.in

Language: EN KAN

    Follow us :


ಕರಡಿಗಳ ದಾಳಿ ಗಂಭೀರ ಗಾಯ

Posted date: 18 Oct, 2019

Powered by:     Yellow and Red

ಕರಡಿಗಳ ದಾಳಿ ಗಂಭೀರ ಗಾಯ

ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಗಿರೀಶ್ ಎಂಬುವವರಿಗೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿವೆ.

ತೆಂಗಿನಕಲ್ಲು ಅರಣ್ಯ ಪ್ರದೇಶದ ಅಂಚಿನಲ್ಲಿರುವ ಅವರ ತೋಟದಲ್ಲಿ ಸಂಜೆ ಕೆಲಸ ಮಾಡುತ್ತಿರುವಾಗ ಎರಡು (ಗಂಡು-ಹೆಣ್ಣು) ಕರಡಿಗಳು ಒಟ್ಟಾಗಿ ದಾಳಿ ನಡೆಸಿದ್ದು ಬಚಾವಾಗಿ ಓಡಿ ಹೋಗುವಾಗ ಹಿಂದಿರುಗಿ ಬಂದ ಹೆಣ್ಣು ಕರಡಿ ಮತ್ತೆ ದಾಳಿ ನಡೆಸಿ ಅವರ ಕೂಗಾಟಕ್ಕೆ ಹೆದರಿ ಓಡಿ ಹೋದುದಾಗಿ ಗಾಯಾಳು ಗಿರೀಶ್ ತಿಳಿಸಿದರು.


ತಲೆ, ಕೆನ್ನೆ, ಎಡಗೈ, ಬಲ ಮುಂಗಾಲಿಗೆ ಗಾಯಗಳಾಗಿದ್ದು ಎಡಗಣ್ಣಿಗೆ ಗಂಭೀರ ಗಾಯವಾಗಿದ್ದು ಶೀಘ್ರವಾಗಿ ಚಿಕಿತ್ಸೆ ಪಡೆಯಬೇಕೆಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ ಗಿರೀಶ್ ತಿಳಿಸಿದ್ದಾರೆ.


ಆಸ್ಪತ್ರೆಗೆ ಅರಣ್ಯಾಧಿಕಾರಿ ಮನ್ಸೂರ್ ಮತ್ತು ಸಿಬ್ಬಂದಿ ಭೇಟಿ‌ ನೀಡಿ ಗಾಯಾಳು ಗಿರೀಶ್ ಗೆ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು.


*ಗಾಯಾಳುವಿಗೆ ಸರ್ಕಾರದಿಂದ ಬರಬೇಕಾದ ಪರಿಹಾರವನ್ನು ಶೀಘ್ರವಾಗಿ ತಲುಪಿಸಲು ಕ್ರಮಕೈಗೊಳ್ಳುವುದಲ್ಲದೆ ಸರ್ಕಾರಕ್ಕೆ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.*

*ಮನ್ಸೂರ್ ಅರಣ್ಯಾಧಿಕಾರಿ*


*ಇತ್ತೀಚೆಗೆ ಕರಡಿಗಳು, ಹಂದಿಗಳು ಮತ್ತು ಆನೆಗಳ ದಾಳಿ ಹೆಚ್ಚಾಗಿದ್ದು ರೈತ ಬೆಳೆದ ಬೆಳೆ ಹಾಳಾಗುವುದರ ಜೊತೆಗೆ ರೈತನ ಜೀವಕ್ಕೂ‌ ಸಂಚಕಾರ ಬಂದಿದೆ, ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಪ್ರದೇಶ ಮತ್ತು ರೈತರ ಜಮೀನಿನ ನಡುವೆ ಸೋಲಾರ್ ಬೇಲಿಯ ಜೊತೆಗೆ ದೊಡ್ಡ ಮಟ್ಟದ ಕಾಲುವೆ ತೋಡುವುದರ ಮೂಲಕ ರೈತರ ನೆರವಿಗೆ ಧಾವಿಸಬೇಕಾಗಿದೆ.*.

*ಸಿ ಪುಟ್ಟಸ್ವಾಮಿ ಹಿರಿಯ ರೈತ ಮುಖಂಡರು.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑