ಪ್ರಗತಿ ಕ್ಲಬ್ ಮೇಲೆ ಪೋಲಿಸ್ ದಾಳಿ ಪಣಕ್ಕಿಟ್ಟಿದ್ದ ಮೂರು ಲಕ್ಷಕ್ಕೂ ಹೆಚ್ಚು ಹಣ ವಶ
ಚನ್ನಪಟ್ಟಣ: ನಗರದ ಹೊರ ಭಾಗದಲ್ಲಿರುವ ಪ್ರತಿಷ್ಠಿತ ಪ್ರಗತಿ ಕ್ಲಬ್ ಮೇಲೆ ರಾತ್ರಿ ೦೭:೩೦ ರ ಸಮಯದಲ್ಲಿ ಎ ಎಸ್ ಪಿ ರಾಮರಾಜನ್ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಪೋಲಿಸರು ದಾಳಿ ನಡೆಸಿದರು.
ದಾಳಿ ಸಮಯದಲ್ಲಿ ಜೂಜಾಟಕ್ಕೆಂದು ಪಣಕ್ಕಿಟ್ಟಿದ್ದ ೩,೧೩,೫೦೦ ರೂಪಾಯಿ ನಗದು ಮತ್ತು ಸೇವಿಸಲು ಇಟ್ಟಿದ್ದ ಸಹಸ್ರಾರು ರೂಪಾಯಿಗಳ ಮದ್ಯವನ್ನು ವಶ ಪಡಿಸಿಕೊಂಡು ೩೫ ಮಂದಿಯನ್ನು ಬಂಧಿಸಿ ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ನಿಯಮಗಳನ್ನು ಮೀರಿ ಮದ್ಯಪಾನ ಮತ್ತು ಜೂಜಾಟ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ಪೋಲಿಸರು ಈ ದಾಳಿ ನಡೆಸಿದ್ದು ತಾಲ್ಲೂಕಿನ ಗಣ್ಯರು, ಗುತ್ತಿಗೆದಾರರು, ಪಕ್ಷಗಳ ಮುಖಂಡರು ಸೇರಿದಂತೆ ೩೫ ಮಂದಿಯನ್ನು ಬಂಧಿಸಿ ಆರಕ್ಷಕ ಮತ್ತು ಅಬಕಾರಿ ಕಾಯ್ದೆಯಡಿ ದೂರು ದಾಖಲಿಸಿ ಬಿಡುಗಡೆಗೊಳಿಸಿರುವುದಾಗಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚು ಜೂಜಾಟದ ಹಣ ವಶ ಮತ್ತು ಹೆಚ್ಚು ಮಂದಿಯನ್ನು ಬಂಧಿಸಿದ ಪ್ರಕರಣ ಇದಾಗಿದ್ದು ಎಲ್ಲಾ ಬಂಧಿತರು ನ್ಯಾಯಾಲಯದಲ್ಲಿ ದಂಡ ಕಟ್ಟಿ ಬರಬೇಕು ಇಲ್ಲವೇ ವ್ಯಾಜ್ಯ ಮುಂದುವರೆಸಬೇಕಾಗಿದೆ.
ದಾಳಿಯಲ್ಲಿ ವೃತ್ತ ನಿರೀಕ್ಷಕ ವಸಂತ್, ಸಬ್ ಇನ್ಸಪೆಕ್ಟರ್ ಪ್ರಕಾಶ್, ಕುಮಾರಸ್ವಾಮಿ ಹಾಗೂ ಇಪ್ಪತೈದಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು