Tel: 7676775624 | Mail: info@yellowandred.in

Language: EN KAN

    Follow us :


ಕನಕ ಜಯಂತಿ ಪೂರ್ವಭಾವಿ ಸಭೆ ಮುಂದೂಡಿಕೆ

Posted date: 08 Nov, 2019

Powered by:     Yellow and Red

ಕನಕ ಜಯಂತಿ ಪೂರ್ವಭಾವಿ ಸಭೆ ಮುಂದೂಡಿಕೆ

ಚನ್ನಪಟ್ಟಣ: ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಇದೇ ತಿಂಗಳ ಹದಿನೈದನೇ ತಾರೀಖು ನಡೆಯಲಿರುವ ಕನಕ ಜಯಂತಿ ಯ ಪೂರ್ವಭಾವಿ ಸಭೆಯನ್ನು ಶಿರಸ್ತೇದಾರ ಮಹದೇವಯ್ಯ ಮುಂದಿನ ಸೋಮವಾರ ಅಂದರೆ ಹನ್ನೊಂದನೇ ತಾರೀಖಿಗೆ ಮುಂದೂಡಿದರು.


ತಹಶಿಲ್ದಾರ್ ಸುದರ್ಶನ್ ರವರು ಕಾರ್ಯನಿಮಿತ್ತ ಮಾಗಡಿ ತಾಲ್ಲೂಕಿಗೆ ಹೋಗಿದ್ದ ಕಾರಣ ಅವರ ಅನುಪಸ್ಥಿತಿಯಲ್ಲಿ ಶಿರಸ್ತೇದಾರ ಮಹದೇವಯ್ಯ ಅಧ್ಯಕ್ಷತೆ ಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದ್ದು ಬಹುತೇಕ ಅಧಿಕಾರಿಗಳು ಮತ್ತು ಮುಖಂಡರು ಗೈರು ಹಾಜರಾಗಿದ್ದರು.


ಸಮುದಾಯದ ಮುಖಂಡರು ಕನಕ ಜಯಂತಿಯನ್ನು ಸರಳವಾಗಿ ಆಚರಸಿವುದು ಬೇಡ, ಕನಕದಾಸ ರ ಇತಿಹಾಸವನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಿರುವುದರಿಂದ ಅದ್ದೂರಿಯಾಗಿ ಆಚರಿಸಬೇಕಿದೆ. ಹಾಗಾಗಿ ಎಲ್ಲಾ ಮುಖಂಡರು ಮತ್ತು ಅಧಿಕಾರಿಗಳ ಸಮಕ್ಷಮದಲ್ಲಿ ಮತ್ತೊಮ್ಮೆ ಸಭೆ ಕರೆಯಬೇಕೆಂಬ ಮನವಿಯ ಮೇರೆಗೆ ಮಹದೇವಯ್ಯ ನವರು ಸೋಮವಾರ ಕ್ಕೆ ಸಭೆ ಮುಂದೂಡಿದರು.


ಸಭೆಯಲ್ಲಿ ಬಿಇಓ ಇಲಾಖೆಯ ನರಸಿಂಹಯ್ಯ, ಸಮುದಾಯದ ಮುಖಂಡರಾದ ಶಿವಬೀರಯ್ಯ, ಮಂಜುನಾಥ್, ಪರಮೇಶ್, ರವಿ ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑