Tel: 7676775624 | Mail: info@yellowandred.in

Language: EN KAN

    Follow us :


ಬದುಕು ವ್ಯಸ್ತ ವಾಗಿರಲಿ ಅಸ್ತವ್ಯಸ್ತವಾಗುವದು ಬೇಡ ಆಚಾರ್ಯ ಮಹಾ ಶ್ರಮಣಜೀ

Posted date: 15 Nov, 2019

Powered by:     Yellow and Red

ಬದುಕು ವ್ಯಸ್ತ ವಾಗಿರಲಿ ಅಸ್ತವ್ಯಸ್ತವಾಗುವದು  ಬೇಡ ಆಚಾರ್ಯ ಮಹಾ ಶ್ರಮಣಜೀ

ಚನ್ನಪಟ್ಟಣ: ನಮ್ಮ ಇಂದಿನ ಸಾಮಾಜಿಕ ಬದುಕು ವ್ಯಸ್ತವಾಗಿರಬೇಕು, ಅಲ್ಲ ಸಲ್ಲದ ವಿಚಾರಗಳಲ್ಲಿ  ಮುಳುಗಿ ಅಸ್ತವ್ಯಸ್ತವಾಗುವದು ಬೇಡ ಎಂದು ಜೈನ ಧರ್ಮದ ಗುರುಗಳಾದ ಆಚಾರ್ಯ ಮಹಾ ಶ್ರಮಣಜೀ ಯವರು ಕರೆ ನೀಡಿದರು.

ಆಚಾರ್ಯರು ೪೫,೦೦೦ ಕಿಲೋಮೀಟರ್ ಪಾದಯಾತ್ರೆ ಹಮ್ಮಿಕೊಂಡಿದ್ದು ಚನ್ನಪಟ್ಟಣ ದ ಮೂಲಕ ಹಾದು ಹೋಗುವ ಸಂದರ್ಭದಲ್ಲಿ ಚನ್ನಪಟ್ಟಣ ದ ಜೈನ ಸಂಘದ ವತಿಯಿಂದ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.


ನೈತಿಕ ಪ್ರಜ್ಞೆ, ಜಾಗೃತಿ, ಸಾಮರಸ್ಯ ಸ್ಥಾಪನೆ ಮತ್ತು ವ್ಯಸನ ಮುಕ್ತ ಸಮಾಜ ನಿರ್ಮಾಣ ದಂಥ ಮಹೋನ್ನತ ಧ್ಯೇಯಗಳನ್ನು ಇಟ್ಟುಕೊಂಡು  ೪೫,೦೦೦ ಕಿಲೋಮೀಟರ್ ಪಾದಯಾತ್ರೆ ಹಮ್ಮಿಕೊಂಡ ಗುರೂಜಿಯವರು ಇಂದು ಚನ್ನಪಟ್ಟಣ ಕ್ಕೆ ಆಗಮಿಸಿದ ಸಂದರ್ಭದಲ್ಲಿ ೧೮,೦೦೦ ಕಿಲೋಮೀಟರ್ ಕ್ರಮಿಸಿದ್ದರು. ಮಹಾವೀರ ಮಾರ್ಗ ಕುರಿತಂತೆ ಪ್ರವಚನ ನೀಡಿದ ಅವರು ನಾವು ಸ್ವಾರ್ಥವನ್ನು ತ್ಯಜಿಸಿ ಸಮಾಜ ಮುಖಿಯಾಗಿ ಆಲೋಚಿಸಿ ಜೀವನ ಸಾಗಿಸಬೇಕು ಎಂದು ಆಶೀರ್ವಚನ ನೀಡಿದರು


೧೪ ನವೆಂಬರ್ ೨೦೧೪ ರಂದು ದೆಹಲಿಯ ಕೆಂಪು ಕೋಟೆಯಿಂದ ಆರಂಭವಾದ ಈ ಪಾದಯಾತ್ರೆ ೪೫೦೦೦ ಕಿ ಮೀ ಕ್ರಮಿಸುವ ದಾರಿಯಲ್ಲಿ ೧೮೦೦೦ ಕಿ ಮೀ ಗಳನ್ನು ಕ್ರಮಿಸಿದ್ದು ೩ ದೇಶಗಳು ಹಾಗೂ ೨೦ ರಾಜ್ಯಗಳಲ್ಲಿ ಸಂಚರಿಸಿ ಮುಂದಿನ ದಿನಗಳಲ್ಲಿ ಹೈದ್ರಾಬಾದ್ ತಲುಪಲಿದೆ.


ಮುಖ್ಯ ಭಾಷಣ ಕಾರರಾಗಿ ಮಾತನಾಡಿದ ಡಾ ಮಧುಸೂದನ್ ಜೋಷಿ ಯವರು ದಾನವತ್ವದಿಂದ ಮಾನವನನ್ನು ಪಾರುಮಾಡಿ ದೈವತ್ವದೆಡೆಗೆ ಕೊಂಡೊಯ್ಯುವದೇ ಜೈನ ಧರ್ಮ ದ ಗುರಿ ಯಾಗಿದೆ ಎಂದು ಶ್ಲಾಘಿಸಿದರು.


ಈ ಸಂದರ್ಭದಲ್ಲಿ ನಗರದ ಜೈನ ಸಂಘದ ಪದಾಧಿಕಾರಿಗಳು, ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑