ಆರ್ ಜೆ ಎಸ್ ಪಿಯು ಕಾಲೇಜಿನ ಶಿಬಿರಾರ್ಥಿಗಳಿಂದ ಶ್ರಮದಾನ
ಚನ್ನಪಟ್ಟಣ: ಬೆಂಗಳೂರಿನ ಕೋರಮಂಗಲ್ಲಿರುವ ಆರ್ ಜೆ ಎಸ್ ಪದವಿ ಪೂರ್ವ ಕಾಲೇಜಿನ ಶಿಬಿರಾರ್ಥಿಗಳು ನಗರದಲ್ಲಿರುವ ಶಿಕ್ಷಣಾಧಿಕಾರಿಗಳ ಕಛೇರಿ ಆವರಣವನ್ನು ಇಂದು ಸ್ವಚ್ಛಗೊಳಿಸಿದರು.
ತಾಲ್ಲೂಕಿನ ಮೈಲನಾಯಕನಹೊಸಹಳ್ಳಿ ಗ್ರಾಮದಲ್ಲಿ ಒಂದು ವಾರದಿಂದ ಶ್ರಮದಾನ ಮಾಡುತ್ತಿರುವ ಶಿಬಿರಾರ್ಥಿಗಳು ತಾಲ್ಲೂಕು ಶಿಕ್ಷಣ ಸಂಯೋಜಕ ಶಿವಣ್ಣ ನವರ ಮನವಿ ಮೇರೆಗೆ ಶಿಕ್ಷಣಾಧಿಕಾರಿಗಳ ಕಛೇರಿಯ ಆವರಣದ ತುಂಬೆಲ್ಲಾ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಕಡಿದು ಆವರಣವನ್ನು ಶುಚಿಗೊಳಿಸಿದರು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಸಂಯೋಜಕ ಸುಂದರಮೂರ್ತಿ, ಶಿಬಿರಾಧಿಕಾರಿ
ಶ್ರೀನಿವಾಸ, ಶಿಕ್ಷಕರಾದ ಸಂತೋಷ, ಕೇಶವ, ಸಂತೋಷ ಕುಮಾರ್, ಸುಧಾಕರ, ಕಿರಣ ಮತ್ತು ಮೂವತ್ತು ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು