ತಾಳೆಯೋಲೆ ೧೦೮: ರಾತ್ರಿ ಸಮಯದಲ್ಲಿ ಮಲಗುವ ಕೋಣೆಯ ಕಿಟಕಿಗಳನ್ನು ಏಕೆ ತೆಗೆದಿರಿಸಬಾರದು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ರಾತ್ರಿ ಸಮಯದಲ್ಲಿ ಮಲಗುವ ಕೋಣೆಯ ಕಿಟಕಿಗಳನ್ನು ಏಕೆ ತೆಗೆದಿರಿಸಬಾರದು ?
ರಾತ್ರಿ ವೇಳೆಯಲ್ಲಿ ಭೂತ ಪ್ರೇತಗಳು ತಿರುಗುತ್ತವೆಂದು ಕಿಟಕಿಗಳು ತೆರೆದಿದ್ದರೆ ನಿದ್ರೆ ಮಾಡುವವರ ಮೇಲೆ ಆವರಿಸಿ ಕೆಟ್ಟದ್ದನ್ನು ಉಂಟುಮಾಡುತ್ತದೆಂದು ನಂಬಲಾಗಿದೆ.
ದೆವ್ವಗಳ ಮಾತು ಹೇಗಿದ್ದರೂ, ರಾತ್ರಿ ಸಮಯದಲ್ಲಿ ನಿದ್ರೆ ಮಾಡುವ ಕೊಠಡಿಯ ಕಿಟಕಿ ಬಾಗಿಲನ್ನು ತೆಗೆದು ನಿದ್ರಿಸಿದರೆ, ಮುಖ್ಯವಾಗಿ *ಚಳಿಗಾಲದಲ್ಲಿ ನಮಗೆ ನೆಗಡಿಯಾಗುವುದು, ಜ್ವರ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆಗ ದೆವ್ವ ಹಿಡಿದವರ ಹಾಗೆ ಗಡಗಡಾ ನಡುಗುವುದು ಸಹಜ.* ಚಳಿಯ ಕಾರಣದಿಂದ ಆರೋಗ್ಯ ಕ್ಷೀಣಿಸಿ ದೆವ್ವ ಹಿಡಿದವನ ಹಾಗೆ ನಡುಗುತ್ತಾ ಪ್ರವರ್ತಿಸುವುದು ಇದರಲ್ಲಿರುವ ವಾಸ್ತವ.
೧೦೩ ಡಿಗ್ರಿ ಸೆಲ್ಸಿಯಸ್ ಉಷ್ಣಗ್ರತೆ ಇದ್ದರೆ ಮನುಷ್ಯರು ಗಡಗಡ ಎಂದು ನಡುಗುವುದು ತಪ್ಪದು. ಈ ರೀತಿ ನಡುಗುವುದನ್ನು ದೆವ್ವ ಹಿಡಿದಿದೆ ಎಂದು ತಪ್ಪಾಗಿ ಭಾವಿಸುವರು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು