Tel: 7676775624 | Mail: info@yellowandred.in

Language: EN KAN

    Follow us :


ಮನೆಯಲ್ಲಿಟ್ಟಿದ್ದ ರೇಷ್ಮೆ ಗೂಡು ಕದ್ದ, ಪಸ್೯ ಬೀಳಿಸುವ ಮೂಲಕ ಸುಳಿವು ಬಿಟ್ಟ

Posted date: 10 Dec, 2019

Powered by:     Yellow and Red

ಮನೆಯಲ್ಲಿಟ್ಟಿದ್ದ ರೇಷ್ಮೆ ಗೂಡು ಕದ್ದ, ಪಸ್೯ ಬೀಳಿಸುವ ಮೂಲಕ ಸುಳಿವು ಬಿಟ್ಟ

ಚನ್ನಪಟ್ಟಣ: ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ರೈತ ಮೂರ್ತಿ ಎಂಬುವವರು ತಾನು ಬೆಳೆದ ರೇಷ್ಮೆ ಗೂಡನ್ನು ಚಂದ್ರಿಕೆಯಿಂದ ಬಿಡಿಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ತೋಟದ ಮನೆಯಲ್ಲಿ ಇಟ್ಟಿದ್ದ ೧೨೦ ಕಿಲೋ ರೇಷ್ಮೆ ಗೂಡನ್ನು ದುಷ್ಕರ್ಮಿಗಳು ತಡರಾತ್ರಿ ಕದ್ದೊಯ್ದಿದ್ದು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಸಂಜೆ ಗೂಡು ಬಿಡಿಸಿ ಬೆಳಿಗ್ಗೆ ಮಾರುಕಟ್ಟೆ ಗೆ ಕೊಂಡೊಯ್ಯಲು ತಾಟಿನಲ್ಲಿ ಇಟ್ಟಿದ್ದ ರೇಷ್ಮೇ ಗೂಡನ್ನು ತೋಟದ ಮನೆಯ ಬೀಗ ಮುರಿದು ಕದ್ದೊಯ್ದಿದ್ದಾರೆ.ಆಘಾತಗೊಂಡ ರೈತ ಮೂರ್ತಿ ಯವರು ತಕ್ಷಣ ಪೋಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.


ಗೂಡನ್ನು ಕಳ್ಳತನ ಮಾಡುವ ಸಮಯದಲ್ಲಿ ಹೇಗೋ ಒಂದು ಪಸ್೯ನ್ನು ಬೀಳಿಸಿ ಹೋಗಿದ್ದು ಅದರಲ್ಲಿ ಬುರ್ಖಧಾರಿ ಮಹಿಳೆಯ ಪೋಟೋ, ಒಬ್ಬ ಗಂಡಸಿನ ಪೋಟೋ, ವಿಳಾಸ ಹಾಗೂ ವಿದ್ಯುತ್ ಬಿಲ್ ದೊರೆತಿದ್ದು ಪೋಲಿಸರು ಸುಳುವಿನ ಮೇಲೆ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑