ತಾಳೆಯೋಲೆ ೧೧೮: ಪ್ರಯಾಣ ಹೋಗುವವರನ್ನು ಹಿಂದಿನಿಂದ ಕರೆಯುವುದು ಸರಿಯಲ್ಲ ಏಕೆ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಪ್ರಯಾಣ ಹೋಗುವವರನ್ನು ಹಿಂದಿನಿಂದ ಕರೆಯುವುದು ಸರಿಯಲ್ಲ ಏಕೆ ?
ಆಗಾಗ ಮಕ್ಕಳು ಅವರ ಹಿರಿಯರು ಪ್ರಯಾಣ ಹೊರಡುವಾಗ ಯಾವುದೋ ವಿಷಯಕ್ಕೆ ಕರೆಯುತ್ತಾ ಹಿಂಬಾಲಿಸುತ್ತಾರೆ. ಈ ರೀತಿ ಮಾಡುವುದಕ್ಕೆ ಬೈಗುಳಗಳನ್ನು ಸಹ ತಿನ್ನುವರು.
*ಇದರ ಹಿಂದೆ ಯಾವುದೇ ರೀತಿಯ ಶಾಸ್ತ್ರೀಯವಾದ ಅಂಶ ಅಡಗಿಲ್ಲ.* ಆದರೆ ನೈತಿಕ ಪರವಾಗಿ, ಮಾನಸಿಕವಾಗಿ ವೀ ವಿಷಯಕ್ಕೆ ಬಹಳಷ್ಟು ಮೌಲ್ಯವಿದೆ. ಒಂದಾನೊಂದು ಕೆಲಸದ ಮೇಲೆ ನಿಶ್ಚಯ ದೃಷ್ಟಿಯಲ್ಲಿ ಹೋಗುತ್ತಿರುವವರನ್ನು ಹಿಂದಿನಿಂದ ಕರೆಯುವುದರಿಂದ ಅಡಚಣೆಯಾಗುತ್ತದೆ. ಅವರು ಯಾವುದಾದರೂ ಅತಿ ಮುಖ್ಯವಾದ ಕೆಲಸದ ಮೇಲೆ ಹೋಗುತ್ತಿರಬಹುದು. ಈ ವಿಧವಾಗಿ ಹಿಂದಿನಿಂದ ಮತ್ತೆ ಕರೆಯುವುದರಿಂದ ಕೆಲಸದ ಮೇಲೆ ಹೋಗುತ್ತಿರುವವರಿಗೆ ಅಡಚಣೆ ಉಂಟಾಗಿ ಅವರಿಗೆ ಇರುಸು ಮುರುಸಾಗಿ ಮಾನಸಕ
ಒತ್ತಡ ಉಂಟಾಗುವ ಅವಕಾಶವಿರುವುದು.
ಈ ರೀತಿ ಕಾರ್ಯದ ಮೇಲೆ ಹೋಗುತ್ತಿರುವವರನ್ನು ಕರೆದು ಅಡಚಣೆ ಮಾಡುವುದು ಅಪಶಕುನವಾಗಿ ತಿಳಿದು, ಅವರು ಆಂದೋಳನಕ್ಕೂ ಸಹ ಗುರಿಯಾಗುವ ಅವಕಾಶವಿದೆ. ಅದಕ್ಕೆಂದು ನಮ್ಮ ಹಿರಿಯರು ಇಟ್ಟಿರುವ ನಿಷೇಧಗಳನ್ನು ಚನ್ನಾಗಿ ಅರ್ಥ ಮಾಡಿಕೊಂಡು ಆಚರಿಸಬೇಕು. ಇಲ್ಲದಿದ್ದರೆ ಅವು ನಮ್ಮ ಮನೋವ್ಯಥೆಗೆ ಕಾರಣವಾಗುವವು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು