Tel: 7676775624 | Mail: info@yellowandred.in

Language: EN KAN

    Follow us :


ಬ್ರಹ್ಮಣಿಪುರ ಮತ್ತು ಕೆಂಚಯ್ಯನದೊಡ್ಡಿಯಲ್ಲಿ‌ ಅನಧಿಕೃತ ಬಾರ್ ತಹಶಿಲ್ದಾರ್ ದಾಳಿ

Posted date: 07 Jan, 2020

Powered by:     Yellow and Red

ಬ್ರಹ್ಮಣಿಪುರ ಮತ್ತು ಕೆಂಚಯ್ಯನದೊಡ್ಡಿಯಲ್ಲಿ‌ ಅನಧಿಕೃತ ಬಾರ್ ತಹಶಿಲ್ದಾರ್ ದಾಳಿ

ಚನ್ನಪಟ್ಟಣ: ಪ್ರಾವಿಷನ್ ಸ್ಟೋರನ್ನೇ ಬಾರ್ ಅಂಡ್ ರೆಸ್ಟೋರೆಂಟ್ ಮಾಡಿಕೊಂಡಿದ್ದ ಪ್ರಾವಿಷನ್ ಸ್ಟೋರ್ ಹಾಗೂ ಐನಾತಿ ಮಾಲೀಕರ ಮೇಲೆ ದಂಡಾಧಿಕಾರಿ ಸುದರ್ಶನ್ ರವರು ದಾಳಿ ಮಾಡಿ ದಾಸ್ತಾನು ವಶಪಡಿಸಿಕೊಂಡು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.


ನಗರದ ಬಾರ್ ಗಳಂತೆಯೇ ಅಂಗಡಿ ತುಂಬಾ ಕ್ರಮವಾಗಿ ಮದ್ಯವನ್ನು ಜೋಡಿಸಿಕೊಂಡಿದ್ದನ್ನು ನೋಡಿದ ತಹಶಿಲ್ದಾರ್ ಹೌಹಾರಿದ್ದು, ಇಷ್ಟೊಂದು ಬಹಿರಂಗವಾಗಿ, ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದರು ಅಬಕಾರಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಯಾಕೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.


ಬ್ರಹ್ಮಣಿಪುರ ದ ಸುರೇಶ್ ಗೌಡ ಮಾಲೀಕತ್ವದ ಶ್ರೀ ವೆಂಕಟೇಶ್ವರ ಪ್ರಾವಿಷನ್ ಸ್ಟೋರ್ ಹಾಗೂ ಕೆಂಚಯ್ಯನದೊಡ್ಡಿ ಗ್ರಾಮದ ಕಿರಾಣಿ‌ ಅಂಗಡಿಯೊಂದರ ಮೇಲೆ ಖಚಿತ ಮಾಹಿತಿಯನ್ನಾಧರಿಸಿದ ದಂಡಾಧಿಕಾರಿಗಳು ದಾಳಿ‌ ಮಾಡಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.


ಸುರೇಶ್ ಗೌಡ ಸದ್ಯ ತಲೆ ಮರೆಸಿಕೊಂಡಿದ್ದು ಕೆಂಚಯ್ಯನದೊಡ್ಡಿ ಗ್ರಾಮದ ಕಿರಾಣಿ ಅಂಗಡಿಯ ಮಾಲೀಕ ಪೋಲೀಸರ ವಶದಲ್ಲಿದ್ದಾನೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑