ಕಳೆಗಟ್ಟುತ್ತಿರುವ ಅಯ್ಯನಗುಡಿ ಜಾತ್ರೆ
ಚನ್ನಪಟ್ಟಣ: ತಾಲ್ಲೂಕಿನ ಸುಪ್ರಸಿದ್ಧ ಅಯ್ಯನಗುಡಿ (ಕೆಂಗಲ್) ಜಾತ್ರೆಗೆ ಸಂಕ್ರಾಂತಿ ಹಬ್ಬದ ಹಿಂದಿನ ದಿನದಿಂದಲೇ ದೂರದೂರುಗಳಿಂದ ಜಾನುವಾರುಗಳು ಆಗಮಿಸುತ್ತಿದ್ದು ಜಾತ್ರೆಯು ಕಳೆಗಟ್ಟುತ್ತಿದೆ.
ಈಗಾಗಲೇ ನೂರಾರು ಜೋಡೆತ್ತುಗಳು, ಕರುಗಳು, ಒಂಟೆತ್ತುಗಳು ಸಹ ಆಗಮಿಸಿದ್ದು ದೇವಾಲಯದ ಆವರಣ, ಹೊರಭಾಗದ ಖಾಲಿ ಜಮೀನುಗಳಲ್ಲದೆ ಹೆದ್ದಾರಿಯ ಇಕ್ಕೆಲಗಳಲ್ಲೂ ಜಾನುವಾರುಗಳು ಬೀಡು ಬಿಟ್ಟಿದ್ದು, ಮಾರುವವರು ಮತ್ತು ಕೊಂಡುಕೊಳ್ಳುವ (ಉತ್ತರ ಕರ್ನಾಟಕದವರು ಬಂದಿರುವುದು ವಿಶೇಷ) ಗಿರಾಕಿಗಳು ಎತ್ತುಗಳನ್ನು ಮೈದಡವಿ, ಹಲ್ಲಿಡಿದು ನೋಡುತ್ತಿದ್ದದ್ದು ಅಲ್ಲಲ್ಲಿ ಕಂಡು ಬರುತ್ತಿತ್ತು.
ಜಾತ್ರೆಯ ವಿಶೇಷವಾಗಿ ಅಂಗಡಿಗಳು, ಹೋಟೆಲ್ ಗಳು, ಸಿಹಿತಿನಿಸುಗಳ ಅಂಗಡಿಗಳಲ್ಲದೆ ಆಟಿಕೆಗಳ ಅಂಗಡಿಗಳು ತಲೆ ಎತ್ತಿವೆ. ರಥೋತ್ಸವಕ್ಕಾಗಿ ಎರಡು ರಥಗಳ ಜೋಡಣೆ ನಡೆಯುತ್ತಿದೆ. ದೇವಾಲಯದ ಆಡಳಿತ ಮಂಡಳಿಯು ಜನ, ಜಾನುವಾರುಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುತ್ತಿರುವುದಾಗಿ ತಿಳಿಸಿವೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು