Tel: 7676775624 | Mail: info@yellowandred.in

Language: EN KAN

    Follow us :


ಭ್ರಷ್ಟಾಚಾರ ನಿಗ್ರಹ ದಳ ಸಭೆ, ದೂರುದಾರರ ನಿರಾಸಕ್ತಿ

Posted date: 17 Jan, 2020

Powered by:     Yellow and Red

ಭ್ರಷ್ಟಾಚಾರ ನಿಗ್ರಹ ದಳ ಸಭೆ, ದೂರುದಾರರ ನಿರಾಸಕ್ತಿ

ಚನ್ನಪಟ್ಟಣ: ಸರ್ಕಾರಿ ಅಧಿಕಾರಿಗಳು ಲಂಚ ಕೇಳಿದರೆ, ಕೆಲಸ ಮಾಡಲು ಸತಾಯಿಸುತ್ತಿದ್ದರೆ, ಸಕಾರಣ ನೀಡದೆ ಅಲೆದಾಡಿಸುತ್ತಿದ್ದರೆ ಇನ್ನಿತರ ಯಾವುದೇ ರೀತಿಯ ದೂರುಗಳಿರಲಿ, ನಮಗೆ ಲಿಖಿತ ದೂರು ನೀಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ಘಳಿಗೆಯಲ್ಲೂ ಸಹ ನೀವು ದೂರು ಬರೆದುಕೊಟ್ಟರೆ ಪರಿಶೀಲಿಸಿ ನೀವು ಮುಂದೆ ಯಾವ ರೀತಿ ದೂರು ನೀಡಬೇಕು ಎಂದು ತಿಳಿಸಿಕೊಡುತ್ತೇನೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಪೋಲಿಸ್ ಇನ್ ಸ್ಪಕ್ಟರ್ ಸತ್ಯನಾರಾಯಣ ದೂರುದಾರರಿಗೆ ಮಾಹಿತಿ ನೀಡಿದರು.

ಅವರು ಇಂದು ನಗರಸಭೆಯ ಸಭಾಂಗಣದಲ್ಲಿ ಮಾಸಿಕ ಸಭೆಯಲ್ಲಿ ದೂರು ಸ್ವೀಕರಿಸಿ ಮಾಹಿತಿ ನೀಡಿದರು.


ತಾಲ್ಲೂಕಿನ ಯಲಿಯೂರು ಗ್ರಾಮದ ಕೃಷ್ಣಯ್ಯ ಎಂಬುವವರು ಹೆಚ್ ಪಿ ಗ್ಯಾಸ್ ನ ವಿತರಕರು ಮನೆಮನೆಗೆ ಗ್ಯಾಸ್‌ ಸಿಲಿಂಡರ್ ವಿತರಿಸುವ ವೇಳೆ ಅಧಿಕ ಹಣವನ್ನು ಒತ್ತಾಯಪೂರ್ವಕವಾಗಿ ಪಡೆದುಕೊಳ್ಳಿತ್ತಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಲಿಖಿತ ದೂರು ಸಲ್ಲಿಸಿ ಮನವಿ ಮಾಡಿದರು.


ಮಾಹಿತಿ ಹಕ್ಕುದಾರ ವಂದಾರಗುಪ್ಪೆ  ಕೃಷ್ಣೇಗೌಡ ಒಂದು ವರ್ಷದ ಹಿಂದೆ ತಮ್ಮ ಇಲಾಖೆಗೆ ದೂರು ಸಲ್ಲಿಸಿದ್ದು ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ, ತಮ್ಮ ಇಲಾಖೆಗೆ ಮತ್ತೆ ದೂರು ನೀಡುವುದು ಹೇಗೆ ಎಂದು ಪ್ರಶ್ನಿಸಿದರು. ಮಂಗಳವಾರಪೇಟೆ ಆನಂದ ಸಹ ಮೂರು ವರ್ಷಗಳ ಹಿಂದೆ ದೂರು ನೀಡಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದಾಗ ಅಧಿಕಾರಿ ಸತ್ಯನಾರಾಯಣ ರವರು ನಾನು ಹೊಸದಾಗಿ ಬಂದಿದ್ದು ಪರಿಶೀಲಿಸಿ ತಮಗೆ ಮಾಹಿತಿ ನೀಡುತ್ತೇನೆ ಎಂದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑