ಎಂ ಕೆ ದೊಡ್ಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ತಹಶಿಲ್ದಾರ್ ಮತ್ತು ಪಿ ಎಸ್ ಐ ದಾಳಿ
ಚನ್ನಪಟ್ಟಣ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಕಿರಾಣಿ ಅಂಗಡಿಗಳು ಮತ್ತು ಸಣ್ಣ ಪುಟ್ಟ ಹೋಟೆಲ್ ಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು ಖಚಿತ ಮಾಹಿತಿಯನ್ನಾಧರಿಸಿದ ತಹಶಿಲ್ದಾರ್ ಸುದರ್ಶನ್ ಮತ್ತು ತಂಡ ಹಾಗೂ ಎಂ ಕೆ ದೊಡ್ಡಿ ಪೋಲಿಸ್ ಠಾಣೆಯ ಪಿ ಎಸ್ ಐ ಕೆ ಸದಾನಂದ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಎಲ್ಲಾ ಮಾದರಿಯ ಒಟ್ಟು ಮೂವತ್ತು ಲೀಟರ್ ಗೂ ಹೆಚ್ಚು ಮದ್ಯವನ್ನು ವಶಪಡಿಸಿಕೊಂಡು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಕೆಲಗೆರೆ ಗ್ರಾಮದ ರಾಜಣ್ಣ ಬಿನ್ ಲಿಂಗೇಗೌಡ ರ ಅಂಗಡಿಯಲ್ಲಿ ೦೪ ಲೀಟರ್, ಹೆಚ್ ಮೊಗೇನಹಳ್ಳಿ ಯ ಚಂದ್ರಶೇಖರ ಬಿನ್ ಮರಿಗೌಡ ರ ಅಂಗಡಿಯಲ್ಲಿ ೦೫ ಲೀಟರ್, ಗೌಡಗೆರೆ ಗ್ರಾಮದ ಶ್ರೀನಿವಾಸ ಬಿನ್ ಚಲುವಮೂರ್ತಿ ಅಂಗಡಿಯಲ್ಲಿ ೦೩ ಲೀಟರ್ ಮದ್ಯವನ್ನು ಎಂ ಕೆ ದೊಡ್ಡಿ ಪೋಲಿಸ್ ಠಾಣೆಯ ಸಬ್ ಇನ್ಸಪೆಕ್ಟರ್ ಕೆ ಸದಾನಂದ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಹರೂರು ಗ್ರಾಮದ ಅನಿಲ್ ಅಲಿಯಾಸ್ ಗುಂಡ ನ ಅಂಗಡಿಯಲ್ಲಿ ೧೦ ಲೀಟರ್, ಕನ್ನಸಂದ್ರದ ಗೋಪಾಲರಾಜು ಬಿನ್ ಗುರುಲಿಂಗಯ್ಯ ನ ಅಂಗಡಿಯಿಂದ ೦೩ ಲೀಟರ್, ಕೆ ವಿ ಶಿವರಾಜು ಬಿನ್ ಬೋರೇಗೌಡ ನ ಹಳ್ಳಿಮನೆ ಹೋಟೆಲ್ ನಿಂದ ೦೫ ಲೀಟರ್ ಮದ್ಯವನ್ನು ತಹಶಿಲ್ದಾರ್ ಸುದರ್ಶನ್ ಮತ್ತು ಚಾಲಕ ನಾಗರಾಜು ದಾಳಿ ಮಾಡಿ ವಶಪಡಿಸಿಕೊಂಡಿದ್ದು ಎಂ ಕೆ ದೊಡ್ಡಿ ಪೋಲೀಸರಿಗೆ ಒಪ್ಪಿಸಿದ್ದಾರೆ.
ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಮಿಕ್ಕವರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಕೆ ಸದಾನಂದ ರವರು ತಿಳಿಸಿದರು.
ದಾಳಿಯಲ್ಲಿ ಪೋಲಿಸ್ ಸಿಬ್ಬಂದಿಗಳಾದ ಎ ಎಸ್ ಐ ರಾಮಕೃಷ್ಣಪ್ಪ, ಪೇದೆಗಳಾದ ಧನಂಜಯ, ರವೀಶ ಮತ್ತು ಗೋಪಾಲರಾಜು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು