ತುಮಕೂರು ವಿ.ವಿ. ವಿ.ಸಿ. ಡಾ.ವೈ ಎಸ್. ಸಿದ್ದೇಗೌಡರಿಗೆ ಮಾತೃ ವಿಯೋಗ.
ಮೈಸೂರು: ಪ್ರಸ್ತುತ ತುಮಕೂರು ವಿ.ವಿ. ಕುಲಪತಿ ಹಾಗೂ ಮೈಸೂರು ವಿ.ವಿ. ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರೊಫೆಸರ್ ಆಗಿ ಇತ್ತೀಚೆಗೆ ನಿವೃತ್ತಿಯಾದ ಮೈಸೂರು ಟಿಕೆ ಬಡಾವಣೆ ನಿವಾಸಿಗಳಾದ ಡಾ.ವೈ ಎಸ್. ಸಿದ್ದೇಗೌಡರ ತಾಯಿ ಜಯಮ್ಮ (೮೪) ದಿನಾಂಕ ೨೨ ರ ಬುಧವಾರ ಬೆಳಿಗ್ಗೆ ೧೧:೦೦ ಗಂಟೆ ಸಮಯದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಐವರು ಗಂಡು
ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
ದಿನಾಂಕ:೨೩-೦೧-೨೦೨೦ರ ಗುರುವಾರ ಬೆಳಿಗ್ಗೆ ೧೦:೦೦ ಗಂಟೆಗೆ, ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕು, ಎಲಿಯೂರಿನ (ಚನ್ನಪಟ್ಟಣದಿಂದ(22ಕಿಮೀ) ಹೊಂಗನೂರು- ಕೋಡಂಬಹಳ್ಳಿ ಮಾರ್ಗ) ಮೃತರ ಸ್ವ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು