ಗಣರಾಜ್ಯೋತ್ಸವ ಪ್ರಯುಕ್ತ ರೋಟರಿ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಚನ್ನಪಟ್ಟಣ: ೭೧ ನೇ ಗಣರಾಜ್ಯೋತ್ಸವ ದ ಪ್ರಯುಕ್ತ ರೋಟರಿ ಚನ್ನಪಟ್ಟಣ, ರೋಟರಿ ಬೆಂಗಳೂರು ನ್ಯಾಷನಲ್ ಪಾಕ್೯, ತಾಲ್ಲೂಕು ಬ್ರಾಹ್ಮಣ ಮಹಾಸಭಾ, ಶ್ರೀ ಸತ್ಯಸಾಯಿ ಸೇವಾ ಆರ್ಗನೈಸೇಷನ್ ವೈಟ್ ಫೀಲ್ಡ್ ಮತ್ತು ಎಂ ಎಸ್ ರಾಮಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಇಂದು ನಗರದ ಅಪ್ರಮೇಯ ಸ್ವಾಮಿ ದೇವಾಲಯದ ಮುಂಭಾಗ ಶ್ರೀ ಕೃಷ್ಣ ಚಾರಿಟಬಲ್ ಟ್ರಸ್ಟ್ ನ ದಿವ್ಯ ಶಾಂತಿ ಕುಟೀರದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದರು.
ಶಿಬಿರದಲ್ಲಿ ಡಯಾಬಿಟಿಕ್ ತಪಾಸಣೆ, ರಕ್ತದೊತ್ತಡ ಪರಿಶೀಲನೆ, ನುರಿತ ಮೂಳೆ ತಜ್ಞರು, ಹೃದಯಕ್ಕೆ ಸಂಬಂಧಿಸಿದ ಆರೋಗ್ಯ, ಕಣ್ಣಿನ ತಪಾಸಣೆ ಗಳನ್ನು ಏರ್ಪಡಿಸಲಾಗಿತ್ತು. ಹಲವಾರು ಖಾಯಿಲೆಗಳಿಗೆ ಸ್ಥಳದಲ್ಲಿಯೇ ಔಷಧಿಗಳನ್ನು ವಿತರಿಸಲಾಯಿತು. ಕಣ್ಣಿನ ತಪಾಸಣೆಗೊಳಪಟ್ಟವರಿಗೆ ಕನಿಷ್ಠ ನೂರು ರೂಪಾಯಿಗಳಿಂದ ಕನ್ನಡಕವನ್ನು ಸ್ಥಳದಲ್ಲಿಯೇ ವಿತರಿಸಲಾಯಿತು.
ಆರು ನುರಿತ ವೈದ್ಯರ ತಂಡ, ಶುಶ್ರೂಷಕರು, ಔಷಧ ವಿತರಕ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ನಡೆಸಿದ್ದು ಮಹಳಿಯರಿಗಾಗಿಯೇ ಮಹಿಳಾ ಹೆರಿಗೆ ತಜ್ಞರೊಬ್ಬರು ತಪಾಸಣೆ ಮಾಡಿ ಸಲಹೆ ನೀಡಿದರು.
೧೧೫ ಪುರುಷರು ಮತ್ತು ೧೦೪ ಮಂದಿ ಮಹಿಳೆಯರು ತಪಾಸಣೆಗೊಳಪಟ್ಟರು. ಪ್ರತಿಯೊಬರಿಗೂ ಸಂಸ್ಥೆಯ ವತಿಯಿಂದ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.
ರೋ ಬಿ ಎಂ ನಾಗೇಶ್, ರೋ ರಾಧಾ ಪ್ರಸಾದ್, ರೋ ಕೆ ಗೋಪಾಲ್, ರೋ ಎಂ ಎನ್ ರಾಮಪ್ರಸಾದ್, ರೋ ಅಸ್ಗರ್ ಅಹಮದ್, ರೋ ಎಂ ನಿತೀನ್, ರೋ ಜಾವೀದ್ ಅಹ್ಮದ್, ಎನ್ ಮೋಹನ್, ರಾಘವೇಂದ್ರ ಮಯ್ಯ ಸೇರಿದಂತೆ ಅನೇಕ ಪದಾಧಿಕಾರಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು