ಸರ್ಕಾರಿ ಆಸ್ಪತ್ರೆಗೆ ಜಿಪಂ ಸಿಇಓ ದಿಢೀರ್ ಭೇಟಿ ಪರಿಶೀಲನೆ
ಚನ್ನಪಟ್ಟಣ: ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಮ್ ರವರು ಭೇಟಿ ನೀಡಿ, ರೋಗಿಗಳ ಜೊತೆಗೆ ಅವರ ಸಮಸ್ಯೆಗಳನ್ನು ಅತ್ಯಂತ ಪ್ರೀತಿ ಪೂರ್ವಕವಾಗಿ ವಿಚಾರಿಸಿ, ನಂತರ ವೈದ್ಯರ ಜೊತೆಗೂ ಮಾತನಾಡಿ ಎಲ್ಲವನ್ನೂ ಸಮಗ್ರವಾಗಿ ಪರಿಶೀಲನೆ ನಡೆಸಿದರು.
ಒಳ ಮತ್ತು ಹೊರ ರೋಗಿಗಳನ್ನು ಭೇಟಿ ಮಾಡಿ ಪ್ರೀತಿ ಪೂರ್ವಕವಾಗಿ ಕುಂದುಕೊರತೆಗಳನ್ನು ಆಲಿಸಿದರು. ಆಸ್ಪತ್ರೆಯ ಎಲ್ಲಾ ವಿಭಾಗಕ್ಕೂ ಭೇಟಿ ನೀಡಿದ ಅವರು ಸರಿಸುಮಾರು ಎರಡೂವರೆ ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇದ್ದರು.
ಬಯೋಮೆಟ್ರಿಕ್ ಹಾಜರಾತಿ ಇದ್ದರೂ ಸಹ ಸರಿಯಾದ ಸಮಯಕ್ಕೆ ವೈದ್ಯರು ಮತ್ತು ಸಿಬ್ಬಂದಿಗಳು ಬಾರದಿರುವುದನ್ನು ಗಮನಿಸಿದ ಅವರು ತಡವಾಗಿ ಬರುವವರಿಗೆ ನೋಟೀಸ್ ನೀಡಿ ನನಗೂ ಮಾಹಿತಿ ನೀಡಿ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ರವರಿಗೆ ತಿಳಿಸಿದರು.
ಆಸ್ಪತ್ರೆಯನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲು ಎಲ್ಲಾ ರೀತಿಯಲ್ಲೂ ಶ್ರಮಿಸುತ್ತಿದ್ದು, ಪುಟ್ಟ ಉದ್ಯಾನವನ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಶೀಘ್ರವಾಗಿ ಆರಂಭಿಸುವುದಾಗಿ ಅಧೀಕ್ಷಕ ಡಾ ಮಹೇಂದ್ರ ಕುಮಾರ್ ಮನವರಿಕೆ ಮಾಡಿಕೊಟ್ಟರು.
ಆಸ್ಪತ್ರೆಯು ಶೇಕಡಾ ಐವತ್ತರಷ್ಟು ಮಾತ್ರ ಪ್ರಗತಿ ಸಾಧಿಸಿದ್ದು ಹಿಂದುಳಿದಿದೆ, ಲ್ಯಾಬ್ ಮತ್ತು ಡಯಾಲಿಸೀಸ್ ಕೇಂದ್ರ ಹೊರತು ಪಡಿಸಿ ಮಿಕ್ಕೆಲ್ಲವೂ ಕುಂಠಿತಗೊಂಡಿದೆ, ರೋಗಿಗಳಿಗೆ ಆಸ್ಪತ್ರೆಯಲ್ಲಿರುವ ಎಲ್ಲಾ ಪರಿಕ್ಷಾ ಮತ್ತು ಇನ್ನಿತರ ಸೌಲಭ್ಯಗಳನ್ನು ಒದಗಿಸಿ, ರೋಗಿಗಳನ್ನು ಸತಾಯಿಸದೇ, ಕಾಯಿಸದೇ ಸಲಹೆ ಮತ್ತು ಚಿಕಿತ್ಸೆ ನೀಡಿ ಎಂದು ಸೂಚಿಸಿದರು.
ಮೂಳೆ ತಜ್ಞ ಡಾ ರಾಜಕುಮಾರ್, ಹಿರಿಯ ಔಷಧ ವಿತರಕ ವೇದಮೂರ್ತಿ ಹಾಜರಿದ್ದು ಸಿಇಓ ಇಕ್ರಂ ರವರಿಗೆ ಮಾಹಿತಿ ನೀಡಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು