ಕೊರೊನಾ ಲಸಿಕೆ ಸಂಶೋಧನಾ ತಂಡದಲ್ಲಿ ಕನ್ನಡಿಗ ವಿಜ್ಞಾನಿ
ಅರಕಲಗೂಡು: ಕೊರೊನಾ ವೈರಸ್ಗೆ ಲಸಿಕೆ ಸಂಶೋಧಿಸಲು ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ ಯುರೋಪಿಯನ್ ಟಾಸ್ ಫೋರ್ಸ್ ಫಾರ್ ಕೊರೊನಾ ವೈರಸ್ ತಂಡದಲ್ಲಿ ಕರ್ನಾಟಕದ ಅರಕಲಗೂಡಿನ ಯುವ ವಿಜ್ಞಾನಿ ಎ. ಜಿ. ಮಹದೇಶ್ ಪ್ರಸಾದ ಕೂಡ ಇದ್ದಾರೆ.
ಲಸಿಕೆ ಕಂಡುಹಿಡಿಯುವ ಪ್ರಯತ್ನವನ್ನು ೧೦ ವಿಜ್ಞಾನಿಗಳಿರುವ ನಮ್ಮ ತಂಡ ಎರಡು ತಿಂಗಳ ಹಿಂದೆ ಆರಂಭಿಸಿತ್ತು. ಇದುವರೆಗೆ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಮುಂದಿನ ಆರು ತಿಂಗಳಲ್ಲಿ ಸ್ಪಷ್ಟ ಚಿತ್ರಣ ಹೊರಬೀಳಲಿದೆ, ಎಂದು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪೂರೈಸಿದ್ದು, ಮೈಸೂರು ವಿಶ್ವವಿ ದ್ಯಾಲಯದಲ್ಲಿ ಬಯೋ ಕೆಮಿಸ್ಟ್ರಿ ಯಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ.
ಬೆಲ್ಜಿಯಂನ ಲುವೆನ್ ವಿಶ್ವವಿದ್ಯಾಲ ಯದ ಆರ್ಇಜಿಎ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಅಂಡ್ ಕೆ ಸಂಶೋಧನೆ ಕಿಮೋಥೆರಪಿ ವಿಭಾಗದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕೊರೊನಾ ಸೋಂಕು ಹೆಚ್ಚುತ್ತಿದ್ದಂತೆ ಜಾಗೃತವಾದ ಐರೋಪ್ಯ ರಾಷ್ಟ್ರಗಳು ಹತ್ತು ಸಂಶೋಧನಾ ತಂಡ ರಚಿದಾಗ, ಮಹದೇಶ ಹೆಸರನ್ನು ಲಿಂಕೊಪಿಂಗ್ ವಿಶ್ವವಿದ್ಯಾಲಯದ ಕುಲಪತಿಯು ಶಿಫಾರಸು ಮಾಡಿದರು. ನಾವು ಸಂಶೋಧನೆ ಮಾಡುತ್ತಿ ರುವ ಲಸಿಕೆಯ ಕೊರೊನಾ ವೈರಸ್ ಹಾಗೂ ಹಳದಿ ಜ್ವರದಿಂದ ಬಳಲುವವರಿಗೆ ದೀರ್ಘಕಾಲ ರಕ್ಷಣೆ ನೀಡುವಂಥದ್ದು. ಈಗಾಗಲೇ ಇಲಿಗಳ ಮೇಲೆ ನಡೆಸಿರುವ ಪ್ರಯೋಗ ಯಶಸ್ವಿಯಾಗಿದೆ. ಮುಂದಿನ ಹಂತದಲ್ಲಿ ಮಂಗಗಳ ಮೇಲೆ ಪ್ರಯೋಗ ನಡೆಯಲಿದೆ ಎಂದು ಸುದ್ದಿ ವಾಹಿನಿಯೊಂದಕ್ಕೆ ಮಹದೇಶ ಪ್ರತಿಕ್ರಿಯಿಸಿದ್ದಾರೆ.
ಲಸಿಕೆ ಸಂಶೋಧಿಸುವ ತಂಡದಲ್ಲಿ ನನ್ನ ಮಗ ಭಾಗಿಯಾಗಿರುವುದು ಸಂತೋಷ ಸರ್ಕಾರಿ ಶಾಲೆಯಲ್ಲಿ ಓದಿ ಇಷ್ಟು ಎತ್ತರಕ್ಕೆ ಬೆಳೆದಿದ್ದಾನೆ. ಇದು ನಮ್ಮ ಹೆಮ್ಮೆ ಎಂದು ಮೈಸೂರಿನಲ್ಲಿ ನೆಲೆಸಿರುವ ಮಹದೇಶ್ ಪ್ರಸಾದ್ ರವರ ತಾಯಿ ರತ್ನಮ್ಮ ಪ್ರತಿಕ್ರಿಯಿಸಿದ್ದಾರೆ.
ಗೋ ರಾ ಶ್ರೀನಿವಾಸ..
ಮೊ:9845856139.
ಪ್ರತಿಕ್ರಿಯೆಗಳು