ಗಾಳಿ ಮಳೆಗೆ ಬೈಕ್ ಗಳ ಮೇಲೆ ಮುರಿದುಬಿದ್ದ ಮರಗಳು, ಟ್ರಾಫಿಕ್ ಜಾಮ್
ಚನ್ನಪಟ್ಟಣ: ನಗರದಲ್ಲಿ ಇಂದು ಸಂಜೆ ಅಲ್ಪ ಮಳೆಯು ಸುರಿಯುವ ಮುನ್ನಾ ಜೋರಾದ ಗಾಳಿ ಬೀಸಿದ್ದರಿಂದ ರಸ್ತೆ ಬದಿಯ ಮರಗಳು ಮುರಿದು ಬಿದ್ದಿದ್ದು, ನಾಲ್ಕೈದು ಬೈಕ್ ಗಳು ಜಖಂ ಗೊಂಡಿವೆ.
ಮಧ್ಯಾಹ್ನ ದಿಂದಲೇ ಮಳೆಯ ವಾತಾವರಣವಿದ್ದು ಇಂದು ಸಂಜೆ ಐದು ಗಂಟೆಯ ಸುಮಾರಿಗೆ ಜೋರಾದ ಸುಂಟರಗಾಳಿಯು ಮುಗಿಲೆತ್ತರಕ್ಕೆ ಬೀಸಿದ್ದು ಕೆಲ ಮರಗಳು ಬುಡ ಸಮೇತ ನೆಲಕ್ಕುರುಳಿದರೇ, ಹಲವಾರು ಮರಗಳ ಸಿಟಿಲುಗಳು ಮುರಿದು ಬಿದ್ದಿದ್ದು ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲು ಹರಸಹಾಸ ಪಡುವಂತಾಯಿತು.
ಕುವೆಂಪು ನಗರದ ಐದನೇ ತಿರುವು, ದೃಷ್ಟಿ ಆಸ್ಪತ್ರೆಯ ಮುಂಭಾಗ ಮರಗಳು ಮುರಿದು ಬಿದ್ದಿದ್ದು ಬೈಕ್ ಗಳು ಜಖಂ ಗೊಂಡರೆ, ಅಂಚೆ ಕಛೇರಿ ರಸ್ತೆಯ ಬೇಥೇಲ್ ಚಚ್೯ ಮುಂಭಾಗವೂ ಮರ ಮುರಿದು ಬಿದ್ದಿದ್ದು ಗೇಟಿನ ಬಾಗಿಲು ಮುರಿದಿದೆ.
ಎರಡನೇ ತಿರುವಿನ ಪುಣ್ಯ ಆಸ್ಪತ್ರೆಯ ಮುಂಭಾಗ, ಕೋಟೆ, ಪೋಲಿಸ್ ಠಾಣೆಯ ಹಿಂಭಾಗ, ಜೆಸಿ ಮತ್ತು ಎಂಜಿ ರಸ್ತೆ, ಮದಿನಾ ಚೌಕ ರಸ್ತೆ ಸೇರಿದಂತೆ ಹಲವು ಕಡೆ ಮರದ ಟಿಸಿಲುಗಳು ಮುರಿದುಬಿದ್ದಿದ್ದು ಯಾರಿಗೂ ತೊಂದರೆಯಾಗಿಲ್ಲ.
*ರಸ್ತೆಯಲ್ಲಾ ಕೊಳಚೆಯ ಸಾಗರ*
ಪಾಲಿಟೆಕ್ನಿಕ್ ಕಾಲೇಜಿನ ಮುಂಭಾಗ ರಸ್ತೆ ಮತ್ತು ಚರಂಡಿ ಕಾಮಗಾರಿ ಸಂಪೂರ್ಣವಾಗಿಲ್ಲದ ಕಾರಣ ಮಳೆಯ ನೀರು ನಿಂತು ಸಾಗರದಂತೆ ಕಂಡುಬರುತ್ತಿದ್ದು, ಹೆದ್ದಾರಿಯ ಪ್ರಯಾಣಿಕರು ವಾಹನ ಚಲಾಯಿಸಲು ಭಯ ಪಡುತ್ತಿದ್ದದ್ದು ಕಂಡು ಬಂತು.
ಹಲವಾರು ಬೀದಿಗಳಲ್ಲಿ ಸಮರ್ಪಕವಾದ ಚರಂಡಿ ಇರದ ಕಾರಣ ಮೋರಿಯ ನೀರು ರಸ್ತೆಯ ಮೇಲೆಲ್ಲಾ ಹರದಾಡಿ ಗಬ್ಬೆದ್ದು ನಾರುತ್ತಿತ್ತು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು