ಪಬ್ಬು ಕ್ಲಬ್ಬು ಬಂದ್, ಸರಳಾಚರಣೆಯ ಯುಗಾದಿ
ಚನ್ನಪಟ್ಟಣ: ಇಂದಿನ ಚಾಂದ್ರಮಾನ ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಿ ನಾಗರೀಕರು ಪ್ರಬುದ್ದಗೈದರು.
ನಿನ್ನೆ ಬೆಳಿಗ್ಗೆ ಮತ್ತು ಇಂದು ಬೆಳಿಗ್ಗೆ ನಗರದಲ್ಲಿ ಅಗತ್ಯ ಸಾಮಾನುಗಳನ್ನು ಖರೀದಿಸಲು ಪೋಲೀಸರು ಅನುಮತಿ ನೀಡಿದ್ದರಿಂದ ಯುಗಾದಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ನಾಗರೀಕರು ಖರೀದಿಸಲು ಸಾಧ್ಯವಾಗಿತ್ತು.
ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೈರನ್ ಹಾಕಿಕೊಂಡು ದಂಡಾಧಿಕಾರಿ, ಪೌರಾಯುಕ್ತ ಮತ್ತು ಪೋಲೀಸರು ಗಸ್ತು ತಿರುಗುತ್ತಿದ್ದು ಜನರು ಹೊರಗೆ ಬಾರದಂತೆ ಹಾಗೂ ಗುಂಪುಗೂಡದಂತೆ ಮುನ್ನೆಚ್ಚರಿಕೆಯ ಕ್ರಮಕೈಗೊಂಡಿದ್ದರು.
ಮಧ್ಯಾಹ್ನ ದ ಸಮಯಕ್ಕೆ ನಗರದ ಎಲ್ಲಾ ಅಂಗಡಿಗಳು ಸ್ವಯಂ ಬಾಗಿಲು ಮುಚ್ಚಿಕೊಂಡು ಪೇಟೆಯ ಬೀದಿಗಳು ಬಿಕೋ ಎನ್ನುತ್ತಿದ್ದರೆ ಸಾತನೂರು ರಸ್ತೆ, ಚಚ್೯ ರಸ್ತೆ ಸೇರಿದಂತೆ ಕೆಲ ಬೀದಿಗಳಲ್ಲಿನ ದಿನನಿತ್ಯ ಬಳಕೆಯ ಬೆರಳೆಣಿಕೆಯಷ್ಟು ಅಂಗಡಿಗಳು ತೆರೆದು ಗ್ರಾಹಕರಿಗೆ ನೆರವಾದರು.
ಕೆಲ ಸ್ವಂತ ಖಾಸಗಿ ವಾಹನಗಳು ಮತ್ತು ಅಗತ್ಯ ವಸ್ತುಗಳ ಪೂರೈಕೆ ವಾಹನಗಳ ಓಡಾಟ ಬಿಟ್ಟರೆ ಹೆದ್ದಾರಿ ಬಿಕೋ ಎನ್ನುತ್ತಿತ್ತು.
ನಗರದ ಪ್ರತಿಷ್ಠಿತ ಸಿಐಎಸ್ಸಿ, ಪ್ರಗತಿ ಸ್ಪೋರ್ಟ್, ಪ್ರೆಸ್ ಅಂಡ್ ಪಬ್ಲಿಕ್ ಕ್ಲಬ್ ಗಳು ಸೇರಿದಂತೆ ಇನ್ನಿತರ ಎಲ್ಲಾ ಕ್ಲಬ್ ಗಳನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮುಚ್ಚಿರುವುದರಿಂದ ಜೂಜಾಟಕ್ಕೆ ಕಡಿವಾಣ ಬಿದ್ದಿದ್ದು, ನಗರ ಪ್ರದೇಶ ಹಾಗೂ ಹಳ್ಳಿಗಳಲ್ಲಿಯೂ ಸಹ ಸಾಂಪ್ರದಾಯಿಕ ಪಚ್ಚಿ ಆಟ, ಆಧುನಿಕ ಇಸ್ಫೀಟೀನ ಆಟವು ಎಲ್ಲಿಯೂ ನಡೆಯದೇ ಜನಸಾಮಾನ್ಯರು ಸರಳವಾಗಿ ಮನೆಯಲ್ಲೇ ಹಬ್ಬ ಆಚರಿಸಿ, ಬೇವು ಬೆಲ್ಲ ಮೆದ್ದು ಸಂಭ್ರಮಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು