ತಾಳೆಯೋಲೆ ೧೯೪:ಅಹಿಂಸೆ ಹಾಗೂ ಸತ್ಯವ್ರತಗಳ ಮಧ್ಯೆ ಇರುವ ಸಂಬಂಧವೇನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಅಹಿಂಸೆ ಹಾಗೂ ಸತ್ಯವ್ರತಗಳ ಮಧ್ಯೆ ಇರುವ ಸಂಬಂಧವೇನು ?
ಅಹಿಂಸೆ ಹಾಗೂ ಸತ್ಯ ವ್ರತಗಳು ಎರಡೂ ಅವಳಿಗಳ ರೀತಿ. ಇವನ್ನು ಕಡೆಗಣಿಸದೆ ಆಚರಿಸುವುದರಿಂದ ನರನಿಗೆ ನಾರಾಯಣತ್ವ ಸಿದ್ಧಿಸುತ್ತದೆ. ಆದರೆ ಇದನ್ನು ಆಚರಿಸುವುದು ಅಷ್ಟು ಸುಲಭದ ಮಾತೇನಲ್ಲ. ಆದರೆ ಅನೇಕ ಮಹಾತ್ಮರು ಅಹಿಂಸೆ. ಹಾಗೂ ಸತ್ಯ ವ್ರತಗಳನ್ನು ಆಚರಿಸಿ ಕೀರ್ತಿವಂತರಾಗುವುದಲ್ಲದೆ ಪುಣ್ಯಾತ್ಮರಾಗಿ ಚರಿತ್ರೆಯಲ್ಲಿ ನಿಂತು ಹೋಗಿರುವರು.
ನಿತ್ಯ ಜೀವನದಲ್ಲಿ ಎಷ್ಟೇ ಕಷ್ಟ ನಷ್ಟ ಗಳನ್ನು ಎದುರಿಸುತ್ತಿರುವ ಶೀಲವಂತರಾದವರು ಸತ್ಯ ಅಹಿಂಸೆಗಳ ನಿಯಮದಿಂದ ತಪ್ಪಿಸಿಕೊಳ್ಳದೆ ಅನುಷ್ಠಾನ ಮಾಡಬಲ್ಲರು. ಅಂತಹ ಅನುಷ್ಠಾನದವರ ಸನ್ನಿಧಿ ಜಗತ್ತನ್ನು ಪ್ರಭಾವಿತವನ್ನಾಗಿ ಮಾಡಿದರೆ ಶುಭವನ್ನುಂಟು ಮಾಡುತ್ತದೆ. ಈ ರೀತಿಯ ಮಹಾನುಭಾವರು ಚಲಿಸುವ ( ಸಂಚರಿಸುವ ) ಪ್ರಾಂತ್ಯಗಳಲ್ಲಿ ರೋಗ, ಪೀಡೆ, ದಾರಿದ್ರ್ಯ ಮುಂತಾದ ಕೆಡುಕುಗಳು ಮನುಷ್ಕನನ್ನು ಹಿಡಿದು ಪೀಡಿಸುವುದಿಲ್ಲ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು