ತಾಳೆಯೋಲೆ ೧೯೫: ಪಾಪ ಪೂರಿತವಾದ ಪುಣ್ಯವೆಂದು ಯಾವುದಕ್ಕೆ ಹೇಳುವರು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಪಾಪ ಪೂರಿತವಾದ ಪುಣ್ಯವೆಂದು ಯಾವುದಕ್ಕೆ ಹೇಳುವರು ?
ನಿಜವಾಗಿಯೂ ಈ ಮಾತು ಬಹಳ ವಿಚಿತ್ರವಾಗಿದೆ! ಆದರೆ ಕೆಲವು ಸಂದರ್ಭಗಳಲ್ಲಿ ಪುಣ್ಯ ಕರ್ಮದಲಿ ಪಾಪಮಿಳಿತವಾಗಿರುತ್ತದೆ. ಹಾಗೆ ಪಾಪ ಮಿಳಿತವಾಗಿರುವ ಪುಣ್ಯ ಕರ್ಮಗಳನ್ನು ಗುರ್ತಿಸಿ ಅದನ್ನು ಬಿಡಬೇಕು.
ಯಾಗಗಳು ಎಷ್ಟೇ ಶುಭ ಫಲಿತಗಳನ್ನು ಉಂಟು ಮಾಡುತ್ತದೆಂದು ಪುರಾಣಗಳು ಹೇಳಿರುವವು. ಆದರೆ ಈ ರೀತಿಯ ಯಾಗಗಳಲ್ಲಿ ಪ್ರಾಣಿ ಬಲಿಯನ್ನು ದೇವತೆಗಳಿಗೆ ಕೊಡುವುದು ನಡೆಯುತ್ತದೆ. ವಾಸ್ತವವಾಗಿ ದೈವ ಪೂಜೆಯಲ್ಲಿ ಇಂತಹ ನೀಚ ಕರ್ಮ ಏನು ! ದೇವರ ಸನ್ನಿಧಿಯಲ್ಲಿ ಹಿಂಸೆ ನಡೆಯಬಹುದೆ ? ಹಾಗಾದರೆ ಹಾಗೆ ಮೃಗಗಳನ್ನು ಹಿಂಸಿಸಿ ಮಾಡುವ ಪುಣ್ಯ ಕರ್ಮ ಪಾಪವಾದುದೇ ಅಲ್ಲವೆ !
ಯಾಗವನ್ನು ಮಾಡುವುದು ಪುಣ್ಯಪ್ರದವೆ. ಆದರೆ ಮೃಗಗಳನ್ನು ಬಲಿ ಕೊಡುವುದು ಹಾಗೂ ಹಿಂಸಿಸುವುದು ನಿಸ್ಸಂದೇಹವಾಗಿಯೂ ಪಾಪವೆ. ಹೀಗೆ ಪಾಪ ಪುಣ್ಯಗಳು ಒಂದೇ ಕಡೆ ಹೇಗೆ ಸಾಧ್ಯವಾಗುವುದು. ಶಾಸ್ತ್ರಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವುದರಿಂದ ಈ ರೀತಿಯ ಘೋರ ಕೃತ್ಯಗಳು ಆಚಾರಗಳಾಗಿ ಬದಲಾಯಿಸಿರುವವು. ಆದ್ದರಿಂದ ಶಾಸ್ತ್ರ ಭಾವವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದರಲ್ಲಿನ ಪರಮಾತ್ಮನನ್ನು ಗ್ರಹಿಸಿ ದೈವ ಕಾರ್ಯಗಳು ಹಿಂಸಾ ರಹಿತವಾಗಿ ಮಾಡಬೇಕು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು