ಹೆಚ್ ಡಿ ಕೆ ಅನ್ನದಾಸೋಹದ ಅಡುಗೆಮನೆಗೆ ಭೇಟಿ ನೀಡಿದ ನ್ಯಾಯಾಧೀಶರು
ಚನ್ನಪಟ್ಟಣ:ಏ/೦೫/೨೦/ಭಾನುವಾರ. ಕೊರೊನಾ (ಕೋವಿಡ್-೧೯) ದಿಂದ ಮುಕ್ತರಾಗಲು ಕರ್ನಾಟಕ ಲಾಕ್ ಡೌನ್ ಆದ ನಂತರ ನನ್ನ ಕ್ಷೇತ್ರದ ಬಡವರು ಹಸಿವೆಯಿಂದ ಇರಬಾರದು ಎಂಬ ಸದುದ್ದೇಶದಿಂದ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಗಳಾದ ಹೆಚ್ ಡಿ ಕುಮಾರಸ್ವಾಮಿ ಯವರ ಆದೇಶದ ಮೇರೆಗೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು ರವರ ನೇತೃತ್ವದಲ್ಲಿ ಕಳೆದ ಐದು ದಿನಗಳಿಂದ ಪ್ರತಿದಿನವೂ ಮೂರು ಸಾವಿರ ಮಂದಿಗೆ ಊಟದ ವ್ಯವಸ್ಥೆಯನ್ನು ಕನಕನಗರದ ಕೆಂಪೇಗೌಡ ಸಾಂಸ್ಕೃತಿಕ ಬಳಗ ದ ಆವರಣದಲ್ಲಿ ಮಾಡುತ್ತಿದ್ದು, ಇಂದು ಸಿವಿಲ್ ನ್ಯಾಯಾಧೀಶರಾದ ನಟರಾಜ ಯಾದವ್ ರವರು ಭೇಟಿ ನೀಡಿ ಪರಿಶೀಲಿಸಿದರು.
ಊಟದ ವ್ಯವಸ್ಥೆ ಯನ್ನು ಖುದ್ದಾಗಿ ವೀಕ್ಷಿಸಿದ ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು ವಲಸೆ ಕಾರ್ಮಿಕರನ್ನು ವ್ಯವಸ್ಥೆ ಸರಿಯಿರುವ ಕಡೆ ಶೀಘ್ರವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಿ. ಈ ವಿಷಯವಾಗಿ ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡುತ್ತೇನೆ ಎಂದರು.
ಊಟದ ಉಸ್ತುವಾರಿ ವಹಿಸಿದ್ದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು ಮಾತನಾಡಿ ಹೆಚ್ ಡಿ ಕುಮಾರಸ್ವಾಮಿ ಯವರ ಆದೇಶದ ಮೇರೆಗೆ ಪ್ರತಿನಿತ್ಯ ಎರಡೂವರೆ ಸಾವಿರ ಮಂದಿಗೆ ಊಟ ವಿತರಿಸುತ್ತಿದ್ದೇವೆ. ನಿರ್ಗತಿಕರು, ಬಡವರನ್ನು ಕಾರ್ಮಿಕ ಇಲಾಖೆಯು ಗುರುತಿಸಿ ನಮಗೆ ಪಟ್ಟಿನೀಡಿದೆ. ಆ ಪಟ್ಟಿಯ ಪ್ರಕಾರ ನಾವು ದಿನನಿತ್ಯವೂ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.
ನಗರಸಭೆಯ ಪೌರಾಯುಕ್ತ ಶಿವನಂಕಾರಿಗೌಡ. ಊಟದ ಉಸ್ತುವಾರಿ ಯಲ್ಲಿ ನಗರಸಭಾ ಮಾಜಿ ಸದಸ್ಯ ಜೆಸಿಬಿ ಲೋಕೇಶ್, ಮಳೂರು ಪಟ್ಟಣ ರವಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು