ರೈತರಿಗೆ ಯಾವುದೇ ತೊಂದರೆಯಾಗದಂತೆ ರೇಷ್ಮೆ ಮತ್ತು ಮಾವು ಮಾರುಕಟ್ಟೆ ಕೆಲಸ ನಿರ್ವಹಿಸುತ್ತವೆ. ಹೆಚ್ ಡಿ ಕೆ
ಚನ್ನಪಟ್ಟಣ:ಏ/೦೬/೨೦/ಸೋಮವಾರ. ರೇಷ್ಮೆ ಬೆಳೆದ ರೈತ ಮತ್ತು ಮಾವು ಬೆಳೆದ ರೈತರಿಗೆ ಯಾವುದೇ ತೊಂದರೆಯಾಗದಂತೆ ಈ ಎರಡು ಮಾರುಕಟ್ಟೆಗಳು ಕೆಲಸ ನಿರ್ವಹಿಸುತ್ತವೆ. ಕೊರೊನಾ ವೈರಸ್ ಎಲ್ಲೆಡೆ ಹರಡುತ್ತಿರುವುದರಿಂದ ಎಲ್ಲರೂ ಅಂತರ ಕಾಯ್ದುಕೊಂಡು ತಂತಮ್ಮ ಕೆಲಸ ನಿರ್ವಹಿಸಬೇಕು ಎಂದು ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಅವರು ಇಂದು ನಗರದಲ್ಲಿನ ರೇಷ್ಮೆ ಮಾರುಕಟ್ಟೆ ಮತ್ತು ಎಪಿಎಂಸಿ ಯಾಡ್೯ ನಲ್ಲಿ ಕೊರೊನಾ ಸೋಂಕು ನಿವಾರಕ ದ್ರಾವಣದ ಸುರಂಗ ಮಾರ್ಗವನ್ನು ಉದ್ಘಾಟಿಸಿ ಮಾತನಾಡಿದರು.
ರೈತರು ಮತ್ತು ರೀಲರ್ ಗಳು ಗೂಡಿನ ಮಾರುಕಟ್ಟೆಗೆ ಹಾಗೂ ವರ್ತಕರು ಮಾವಿನ ಮಂಡಿಗೆ ಬರಬೇಕಾದರೆ ಸೋಂಕು ನಿವಾರಕ ದ್ರಾವಣದ ಸುರಂಗ ಮಾರ್ಗದಲ್ಲಿಯೇ ಬರಬೇಕು. ನಿಗದಿತ ಸಮಯದವರೆಗೆ ಸೋಂಕು ಹರಡುವುದಿಲ್ಲ ಎಂದು ಕಿವಿಮಾತು ಹೇಳಿದರು.
ಎಪಿಎಂಸಿ ಯ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಎಪಿಎಂಸಿ ನಿರ್ದೇಶಕ ವಾಸೀಲ್ ಅಲಿಖಾನ್ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿದ್ದಕ್ಕಾಗಿ ಅಭಿನಂದಿಸಿದರು. ಇದೇ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪೋನ್ ಮಾಡಿ ರೇಷ್ಮೆ ಮತ್ತು ಮಾವಿಗೆ ಸಂಬಂಧಿಸಿದಂತೆ ರೈತರಿಗೆ ಮಾರ್ಗದರ್ಶಿ ರೂಪಿಸಿ ನೆರವಾಗಿ. ಹಾಗೂ ಸರ್ಕಾರದ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಕಿಟ್ ಗಳನ್ನು ನೀಡಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಅನಿತಾ ಕುಮಾರಸ್ವಾಮಿ ಯವರು ಮಾತನಾಡಿ ರೈತರು, ರೀಲರ್ ಗಳು ಮತ್ತು ಮಾವಿನ ಮಂಡಿಯ ವರ್ತಕರು ವ್ಯಾಪಾರದ ಸಮಯದಲ್ಲಿ ಅಂತರ ಕಾಯ್ದುಕೊಂಡು, ವಹಿವಾಟು ಮಾಡುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಹೆಚ್ ಡಿ ಕೆ ಅನ್ನದಾಸೋಹದ ವತಿಯಿಂದ ಬಡವರಿಗೆ ಅನ್ನದ ಪೊಟ್ಟಣಗಳನ್ನು ವಿತರಿಸಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು, ಎಪಿಎಂಸಿ ಅಧ್ಯಕ್ಷ ಯಾಲಕ್ಕಿಗೌಡ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಳ್ಳಿ ನಾಗರಾಜು, ವಡ್ಡರಹಳ್ಳಿ ರಾಜಣ್ಣ, ಬೋರ್ವೆಲ್ ರಾಮಚಂದ್ರ, ಕುಕ್ಕೂರುದೊಡ್ಡಿ ಜಯರಾಮು, ಲೋಕೇಶ್, ಮಳೂರುಪಟ್ಟಣ ರವಿ, ಮುನಾವರ್, ಹನುಮಂತು ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು