Tel: 7676775624 | Mail: info@yellowandred.in

Language: EN KAN

    Follow us :


ಕೋಟಮಾರನಹಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ಯಾಯ. ತಹಶಿಲ್ದಾರ್ ದಾಳಿ

Posted date: 06 Apr, 2020

Powered by:     Yellow and Red

ಕೋಟಮಾರನಹಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ಯಾಯ. ತಹಶಿಲ್ದಾರ್ ದಾಳಿ

ಚನ್ನಪಟ್ಟಣ:ಏ/೦೬/೨೦/ಸೋಮವಾರ. ತಾಲ್ಲೂಕಿನ ಕೋಟಮಾರನಹಳ್ಳಿ ಯ ನ್ಯಾಯ ಬೆಲೆ ಅಂಗಡಿಯಲ್ಲಿ ದುಡ್ಡು ಪಡೆದು ಪಡಿತರ ವಿತರಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ತಹಶಿಲ್ದಾರ್ ಸುದರ್ಶನ್ ರವರು ದಾಳಿ ನಡೆಸಿದರು.


ಸದ್ಯ ನ್ಯಾಯ ಬೆಲೆ ಅಂಗಡಿ ನಡೆಸುತ್ತಿರುವವರು ಹೆಬ್ಬೆಟ್ಟು ನೀಡಲು ಹತ್ತು ರೂಪಾಯಿ ಹಾಗೂ ಪಡಿತರ ಪಡೆಯಲು ಇಪ್ಪತ್ತು ರೂಪಾಯಿ ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಪಡಿತರರಿಂದ ಪಡೆದುಕೊಂಡಿದ್ದ ಹಣ ಮತ್ತು ಚೀಟಿಗಳನ್ನು ವಶಪಡಿಸಿಕೊಂಡು, ಸ್ವಚ್ಚತೆಯ ಬಗ್ಗೆಯೂ ಗಮನಹರಿಸಿ ಎಚ್ಚರಿಕೆ ನೀಡಿದರು.


ಮಳೂರು ಗ್ರಾಮದ ವೇಣುಗೋಪಾಲ ಎಂಬುವವರ ಹೆಸರಿನಲ್ಲಿ ಈ ನ್ಯಾಯಬೆಲೆ ಅಂಗಡಿಯಿದ್ದು, ಕೋಟಮಾರನಹಳ್ಳಿಯ ರೇಣುಕಮ್ಮ ರಾಮಕೃಷ್ಣ ಹಾಗೂ ಅವರ ಪುತ್ರ ಪ್ರಶಾಂತ್ (ಪಾಪು) ರವರು ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ವೇಣುಗೋಪಾಲ ರವರನ್ನು ಸ್ಥಳಕ್ಕೆ ಕರೆಸಿದ ತಹಶಿಲ್ದಾರ್ ರವರು ಬಡವರಿಗೆ ಉಚಿತವಾಗಿ ಕೊಡಬೇಕಾಗಿದ್ದ ಪಡಿತರವನ್ನು ಏಕೆ ದುಡ್ಡು ಪಡೆಯುತ್ತಿದ್ದೀರಿ ಎಂದು ಪ್ರಶ್ನಿಸಿ, ನಾಳೆ ನೋಟೀಸ್ ಪಡೆಯುವಂತೆ ಸೂಚಿಸಿರುವುದಾಗಿ ತಹಶಿಲ್ದಾರ್ ಸುದರ್ಶನ್ ರವರು ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑