Tel: 7676775624 | Mail: info@yellowandred.in

Language: EN KAN

    Follow us :


ಜೀವನದಲ್ಲಿ ಜಿಗುಪ್ಸೆ, ಯುವಕ ನೇಣಿಗೆ ಶರಣು

Posted date: 22 Apr, 2020

Powered by:     Yellow and Red

ಚನ್ನಪಟ್ಟಣ:ಏ/೨೨/೨೦/ಬುಧವಾರ. ಜೀವನದಲ್ಲಿ ಜಿಗುಪ್ಸೆಗೊಂಡ ಅವಿವಾಹಿತ ಯುವಕನೋರ್ವ ಮಾನಸಿಕವಾಗಿ ಮನನೊಂದು 

ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಎಲೆತೋಟದಹಳ್ಳಿ ಗ್ರಾಮದಲ್ಲಿ ನಡೆದಿದೆ.


ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಅವಿವಾಹಿತ ಯುವಕ ಸುರೇಶ್ (೨೭) 

ಎಂದು ಹೇಳಲಾಗಿದ್ದು ಗ್ರಾಮದ ರಾಮಣ್ಣ ಎಂಬುವರ ಮಗನಾದ ಈತ ಗ್ರಾಮದ ಹೊರಗಿನ 

ಗುಡ್ಡದ ಮೇಲಿನ ಮರಕ್ಕೆ ನೇಣುಬಿಗಿದುಕೊಂಡಿದ್ದಾನೆ. 

ಮೃತನು ನಗರದ ಮಹದೇಶ್ವರ ನಗರದ ಬಳಿ ಸೇವಿಂಗ್ ಸೆಲೂನ್ ತೆರೆದು ಜೀವನ 

ಮಾಡುತ್ತಿದ್ದನೆನ್ನಲಾಗಿದ್ದು, ಲಾಕ್‍ಡೌನ್‍ನಿಂದ ಅಂಗಡಿ ಮುಚ್ಚಿದ ಈತ ಗ್ರಾಮದ 

ಮನೆಯಲ್ಲೇ ವಾಸವಿದ್ದನೆನ್ನಲಾಗಿದೆ.

ಅವಿವಾಹಿತನಾದ ಈತನ ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲವಾಗಿದ್ದು, ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ ಇವನು ಆತ್ಮಹತ್ಯೆ ಮಾಡಿಕೊಂಡಿರಬಹುದೆನ್ನಲಾಗಿದೆ.


ಈ ಪ್ರಕರಣದ ಬಗ್ಗೆ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು 

ಮೃತದೇಹವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಮರಣೋತ್ತರ 

ಪರೀಕ್ಷೆಗೆ ಕಳುಹಿಸಲಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑