Tel: 7676775624 | Mail: info@yellowandred.in

Language: EN KAN

    Follow us :


ನಿನ್ನೆ ಎಣ್ಣೆ ಕುಡಿದ ಮತ್ತಿನಲ್ಲಿ ಗಲಾಟೆ, ಇಂದು ನೇಣು ಬಿಗಿದು ಓರ್ವ ಸಾವು

Posted date: 05 May, 2020

Powered by:     Yellow and Red

ನಿನ್ನೆ ಎಣ್ಣೆ ಕುಡಿದ ಮತ್ತಿನಲ್ಲಿ ಗಲಾಟೆ, ಇಂದು ನೇಣು ಬಿಗಿದು ಓರ್ವ ಸಾವು

ಚನ್ನಪಟ್ಟಣ:ಮೇ/೦೫/೨೦/ಮಂಗಳವಾರ. ನಗರದ ಆನಂದಪುರ ದ ಯುವಕನೋರ್ವ ಮದ್ಯ ಸೇವಿಸಿ ಬಂದಿದ್ದರಿಂದ ಮನೆಯಲ್ಲಿ ಗಲಾಟೆಯಾಗಿ ಇಂದು ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.


ಆನಂದಪುರ ದ ರಾಜೇಶ್ (ಪೇಂಟರ್ ರಾಜೇಶ್) (೩೨) ನೇಣು ಬಿಗಿದು ಸಾವನ್ನಪ್ಪಿದ ಯುವಕ. ನಿನ್ನೆ ಮದ್ಯ ಖರೀದಿಸಿ ಕಂಠಪೂರ್ತಿ ಕುಡಿದಿದ್ದರಿಂದ ಇಂದು ಬೆಳಿಗ್ಗೆ ಮನೆಯಲ್ಲಿ ಜಗಳವಾಗಿದೆ. ಜಗಳದಿಂದ ನೊಂದ ರಾಜೇಶ್ ಇಂದು ನೇಣುಬಿಗಿದುಕೊಂಡಿದ್ದು, ತಕ್ಷಣ ಎಚ್ಚೆತ್ತ ಮನೆಯವರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರಾದರೂ ಸಹ ಅಷ್ಟೊತ್ತಿಗಾಗಲೆ ಪ್ರಾಣಪಕ್ಷಿ ಹಾರಿಹೋಗಿದ್ದು, ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑