ತಾಳೆಯೋಲೆ ೨೩೧: ದೇವರೆಲ್ಲಿ ನಿಂತಿರುವನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ದೇವರೆಲ್ಲಿ ನಿಂತಿರುವನು ?
ದೇವರು ಶುದ್ಧವಾದ ದಿವ್ಯ ಪ್ರೇಮದಲ್ಲಿ ವಾಸಿಸುವನು. ಪ್ರೇಮ ಎಲ್ಲಾ ವಿಧಗಳಾದ ಸಾಂಸಾರಿಕ ದುಃಖಗಳನ್ನು ನಿವಾರಿಸುವ ದಿವ್ಯ ಔಷಧವಂತಹುದು.
ಪ್ರೇಮವಿಲ್ಲದ ಸ್ಥಳದಲ್ಲಿ ಅಸೂಯೆ ದ್ವೇಷಗಳು ರಾಜ್ಯವಾಳುತ್ತವೆ. *ಅಂತಹ ದ್ವೇಷವು ಪ್ರಶಾಂತವಾದ ಕುಟುಂಬದಲ್ಲಿ ಬೆಂಕಿಯನ್ನಿಡುತ್ತದೆ. ಹಾಗೇಯೇ ಸಂಘದಲ್ಲಿ ಅರಾಜಕಥೆಯ ಚರ್ಯೆಗಳಿಗೆ ಪ್ರಾಣವನ್ನು ನೀಡುತ್ತವೆ. ಒಬ್ಬರಿಗೊಬ್ಬರು ಪ್ರೇಮಿಸಿಕೊಳ್ಳುವಾಗ ಹಿಂಸೆ ಹಾಗೂ ಕ್ರೂರತ್ವಗಳು ವಿಜಯವನ್ನು ಹೊಂದುತ್ತದೆ. ಪ್ರೇಮ ಇಲ್ಲದವರೆ ಇತರರನ್ನು ಕೊಂದು ದೋಚಿಕೊಳ್ಳುವರು.* ಅನೇಕ ಕುತಂತ್ರಗಳನ್ನು ಮಾಡುವರು.
ದೇವರು ಪ್ರೇಮ ಸ್ವರೂಪನು. ಪ್ರೇಮ ಪೂರ್ವಕವಾದ ಶುದ್ಧ ಭಕ್ತಿಯಿಂದಲೇ ಆತನನ್ನು ಪ್ರಸನ್ನನ್ನನಾಗಿ ಮಾಡಿಕೊಳ್ಳುವುದಕ್ಕೆ ಆಗುವುದು.
ಭಗವಂತನು ಭಕ್ತನಿಂದ ಭೌತಿಕವಾದ ವಿಷಯಗಳನ್ನು ಕೋರದೆ, ಆತನ ದಿವ್ಯ ಪ್ರೇಮವನ್ನೇ ಕೋರುವನು. *ನಾವು ಕಷ್ಟ ದಲ್ಲಿರುವಾಗಲೇ ನಮ್ಮನ್ನು ಯಾರು ನಿಜವಾಗಿ ಪ್ರೀತಿಸುವವರು ಎಂದು ತಿಳಿಯುತ್ತದೆ.* ನಿನ್ನನ್ನು ಪ್ರೇಮಿಸುವವರು ನಿನ್ನ ಕಷ್ಟ ಕಾಲದಲ್ಲಿ ನಿನ್ನ ಜೊತೆಗಿರುವವರು.
ಯಾರ ಹೃದಯವು ಪ್ರೇಮಮಯವಾಗಿರುವುದೋ ಅಂತಹವರು ತನ್ನ ದಿವ್ಯ ಪ್ರೇಮವನ್ನು ವಿಶ್ವ ಪೂರ್ತಿಯಾಗಿ ಹಬ್ಬಿಸಿ ಲೋಕ ಕಲ್ಯಾಣವನ್ನು ಮಾಡುವನು. ಅಂತಹವರ ಹೃದಯದಲ್ಲಿ ಭಗವಂತನು ನಿಲ್ಲುವುದಕ್ಕೆ ಇಷ್ಟ ಪಡುವನು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು