ತಾಳೆಯೋಲೆ ೨೩೨: ಜನ್ಮ ದಿನವನ್ನಾಚರಿಸಲು ಏನು ಮಾಡಬೇಕು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ಜನ್ಮ ದಿನವನ್ನಾಚರಿಸಲು ಏನು ಮಾಡಬೇಕು ?
ಜನ್ಮದಿನದಂದು ಬೆಳಿಗ್ಗೆ ಎದ್ದು ಶುಚಿಯಾಗಿ, ಸ್ನಾನ ಮಾಡಿ ಹೊಸ ಬಟ್ಟೆ ಅಥವಾ ಶುಭ್ರವಾದ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಕಣ್ಣಿಗೆ ಕಾಡಿಗೆಯನ್ನು ಹಚ್ಚಿ ಕೊಳ್ಳಬೇಕು. ಊಟವನ್ನು ಮಾಡಲು ಪೂರ್ವದ ಕಡೆಗೆ ಮುಖಮಾಡಿ ಕುಳಿತುಕೊಳ್ಳಬೇಕು. ಆ ದಿಕ್ಕಿಗೆ ಗಣಪತಿ ಇರುವನೆಂಬ ನಂಬಿಕೆ. ಊಟವನ್ನು ಎದುರು ನಿಂತುಕೊಳ್ಳದೆ ಪಕ್ಕಕ್ಕೆ ನಿಂತು ತಾಯಿಯಾಗಲಿ ಇಲ್ಲವೆ ತಂಗಿಯಾಗಲಿ ಇಲ್ಲವೆ ಅಕ್ಕನಾಗಲಿ ಬಲಗಡೆಯಿಂದ ಬಿಡಿಸಬೇಕು.
ಊಟವು ಬಾಳೆಎಲೆಯಲ್ಲಿ ನಾಲ್ಕು ರೀತಿಯ ಪದಾರ್ಥಗಳಿಗೆ ಕಡಿಮೆಯಾಗದಂತೆ ಬಿಡಿಸಬೇಕು. ಹೀಗೆ ಹುಟ್ಟಿದ ದಿನ ಊಟವನ್ನು ಮಾಡುತ್ತಿರುವವರ ಎರಡು ಕಡೆಗಳಲ್ಲಿ ಒಬ್ಬರು ಇಲ್ಲವೇ ಇಬ್ಬರು ಆಪ್ತರು ಕುಳಿತು ಕೊಂಡಿರಬೇಕು.
ಹುಟ್ಟಿದ ದಿನ ಹೆಚ್ಚಿನ ಸಮಯ ಭಗವಂತನ ಪೂಜೆ ಹಾಗೂ ಸ್ಮರಣೆಯನ್ನು ಮಾಡುತ್ತಿರಬೇಕು. ಬೆಳಿಗ್ಗೆ ಮತ್ತು ಸಾಯಂಕಾಲ ದೇವಾಲಯವನ್ನು ಸಂದರ್ಶಿಸಿ ವೈಭವವಾಗಿ ದೇವರಿಗೆ ಪೂಜೆಗಳನ್ನು ಮಾಡಿಸಬೇಕು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು